Mangaluru: ಲಾರಿ ಅಡಿಗೆ ಬಿದ್ದು ಸ್ಕೂಟರ್ ಸವಾರ ಸಾವು
Team Udayavani, Oct 12, 2024, 9:51 PM IST
ಮಂಗಳೂರು: ಪಡೀಲ್ನ ಪೆಟ್ರೋಲ್ಪಂಪ್ ಮುಂಭಾಗದಲ್ಲಿ ಶುಕ್ರವಾರ ರಾತ್ರಿ ಲಾರಿಗೆ ಸ್ಕೂಟರ್ ಢಿಕ್ಕಿಯಾಗಿ ಸವಾರನ ಮೇಲೆ ಚಕ್ರಗಳು ಹರಿದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಪಡೀಲ್ನ ಇಂಡಿಯನ್ ಪೆಟ್ರೋಲ್ನಿಂದ ರಾತ್ರಿ 9 ಗಂಟೆ ವೇಳೆಗೆ ಲಾರಿ ಚಾಲಕ ಮಲ್ಲಿಕಾರ್ಜುನ್ ಎಂಬಾತ ಫರಂಗಿಪೇಟೆ ಕಡೆಗೆ ತೆರಳುವ ಉದ್ದೇಶದಿಂದ ಹೆದ್ದಾರಿಯಲ್ಲಿ ನಿರ್ಲಕ್ಷ್ಯದಿಂದ ಲಾರಿಯನ್ನು ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಪಡೀಲ್ ಜಂಕ್ಷನ್ ಕಡೆಯಿಂದ ಸ್ಕೂಟರ್ ಸವಾರ ಅಡ್ಯಾರ್ಪದವು ನಿವಾಸಿ ಜೋಸೆಫ್ ಕೆ.ಕೆ. (52) ವೇಗವಾಗಿ ಬಂದಿದ್ದು, ಎದುರಿನಲ್ಲಿ ಮೊಹಮ್ಮದ್ ಅಲ್ಫಿಯಾನ್ ಎನ್ನುವವರು ಚಲಾಯಿಸುತ್ತಿದ್ದ ಸ್ಕೂಟರ್ನಲ್ಲಿ ಸಹಸವಾರರಾಗಿದ್ದ ಟಿ.ಮೊಹಮ್ಮದ ಶಾಹೀರ್ನ ಎಡ ಕಾಲಿಗೆ ಸ್ಕೂಟರ್ ತಾಗಿಸಿ, ಲಾರಿಯ ಹಿಂದಿನ ಬಲ ಬದಿಯ ಚಕ್ರದ ಕೆಳಗೆ ಸ್ಕೂಟರ್ ಸಮೇತಾ ಬಿದ್ದಿದ್ದಾರೆ. ಲಾರಿಯ ಚಕ್ರವು ಸ್ಕೂಟರ್ ಸವಾರನ ಮೇಲೆ ಸಾಗಿದೆ.
ಅಪಘಾತದ ಪರಿಣಾಮ ಜೋಸೆಫ್ ಅವರ ಮುಖಕ್ಕೆ, ಎದೆಗೆ, ತಲೆಗೆ ಗಂಭೀರ ಸ್ವರೂಪದ ರಕ್ತ ಗಾಯ, ಬಲಗೈ ಮೂಳೆ ಮುರಿತ ಮತ್ತು ಎಡ ಕೈ ತುಂಡಾಗಿದೆ. ತತ್ಕ್ಷಣ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ವೇಳೆ ಅವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಟಿ.ಮೊಹಮ್ಮದ್ ಶಾಹೀರ್ ಅವರು ಎಡಕಾಲಿಗೂ ಗಾಯವಾಗಿದ್ದು ಪಡೀಲ್ನ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ನಗರ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Grants: ಕೇಂದ್ರ ಸರಕಾರ ದೂರುವುದೇ ರಾಜ್ಯ ಕಾಂಗ್ರೆಸ್ ಸರಕಾರದ ಚಾಳಿ: ಪ್ರಹ್ಲಾದ್ ಜೋಶಿ
NCP Leader; ಗುಂಡಿನ ದಾಳಿಗೈದು ಬಾಬಾ ಸಿದ್ದಿಕಿ ಬರ್ಬರ ಹ*ತ್ಯೆ!!
Uppinangady: ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಬಸ್; ಚಾಲಕ ಸಾವು
Surathkal: ಕಾಮಗಾರಿ ಹೊಂಡಕ್ಕೆ ಬಿದ್ದ ಬೈಕ್ ಸವಾರ ಪಾರು
Haryana: ಕಾಲುವೆಗೆ ಬಿದ್ದ ಕಾರು ಒಂದೇ ಕುಟುಂಬದ 7 ಮಂದಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.