ನೀರೂ ಕುಡಿಯುವಂತಿಲ್ಲ; ಶೌಚಕ್ಕೂ ಹೋಗುವಂತಿಲ್ಲ… ; ಕೋವಿಡ್ ವಾರಿಯರ್‌ಗಳ ಸಂಕಷ್ಟ


Team Udayavani, Apr 30, 2020, 6:06 AM IST

ನೀರೂ ಕುಡಿಯುವಂತಿಲ್ಲ; ಶೌಚಕ್ಕೂ ಹೋಗುವಂತಿಲ್ಲ… ; ಕೋವಿಡ್ ವಾರಿಯರ್‌ಗಳ ಸಂಕಷ್ಟ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಂಗಳೂರು: ‘ತಲೆಯಿಂದ ಪಾದದವರೆಗೆ ಮುಚ್ಚುವ ಸುರಕ್ಷಾ ಕಿಟ್‌ ಧರಿಸಿ ಕೆಲಸ… ಮಧ್ಯೆ ಶೌಚಾಲಯಕ್ಕೂ ಹೋಗುವಂತಿಲ್ಲ, ನೀರೂ ಕುಡಿಯುವಂತಿಲ್ಲ.

ಬೆವರಿನಲ್ಲಿ ತೊಯ್ದುಕೊಂಡೇ ಕೆಲಸ ಮಾಡುತ್ತೇವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ರೋಗಿಗಳ ಸೇವೆಯಲ್ಲಿ ಧನ್ಯತಾ ಭಾವವಿದೆ’

ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ ಕೋವಿಡ್ 19 ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ನರ್ಸ್‌ಗಳಲ್ಲೊಬ್ಬರಾದ ಮೂಲತಃ ಬಂಟ್ವಾಳದ ಅನಂತಾಡಿಯ ಪ್ರಸ್ತುತ ಕಾಪುವಿನಲ್ಲಿ ವಾಸವಾಗಿರುವ ಶಕಿಲಾ ಅವರನ್ನು ಸಂಪರ್ಕಿಸಿದ ‘ಉದಯವಾಣಿ’ಯೊಂದಿಗೆ ತಮ್ಮ ಕೆಲಸದ ಬಗ್ಗೆ ಅವರು ಹೇಳಿಕೊಂಡದ್ದು ಹೀಗೆ.

ಸುರಕ್ಷಾ ಕಿಟ್‌ನಲ್ಲಿ
ಆರೋಗ್ಯ ಇಲಾಖೆ ನಮಗೆ ಎಲ್ಲ ರೀತಿಯ ಸುರಕ್ಷಾ ಕಿಟ್‌ಗಳನ್ನು ಒದಗಿಸಿದೆ. ತಲೆಯಿಂದ ಪಾದದವರೆಗೂ ಮುಚ್ಚುವ ದಿರಿಸುಗಳು ಅದರಲ್ಲಿವೆ. ಲೆಗ್ಗಿಂಗ್ಸ್‌, ಇಡೀ ದೇಹ ಮುಚ್ಚುವ ಗೌನ್‌, ಅದರ ಮೇಲೆ ಪ್ಲಾಸ್ಟಿಕ್‌ ಕವರ್‌ ಮಾದರಿಯ ಇನ್ನೊಂದು ದಿರಿಸು, ಗಾಗಲ್ಸ್‌, ಮಾಸ್ಕ್, ಗ್ಲೌಸ್‌ ಸೇರಿದಂತೆ ಐದಾರು ದಿರಿಸುಗಳನ್ನು ಧರಿಸಿಯೇ ದಿನನಿತ್ಯವೂ ಚಿಕಿತ್ಸೆಗೆ ತೆರಳಬೇಕು ಎನ್ನುತ್ತಾರೆ.

ಇಡೀ ದೇಹ ಮುಚ್ಚುವ ದಿರಿಸು ಧರಿಸಿದ ಮೇಲೆ ಶೌಚಾಲಯಕ್ಕೆ ಹೋಗುವುದಕ್ಕೆ ಆಗುವುದಿಲ್ಲ. ಬೇಸಗೆ ಬಿಸಿಯಲ್ಲಿ ಬಾಯಾರಿದರೂ ಅದನ್ನು ತಡೆದುಕೊಳ್ಳುತ್ತೇವೆ. ಸೆಕೆಯನ್ನು ತಡೆದುಕೊಳ್ಳಲಾಗದಿದ್ದರೂ ಕೆಲಸವನ್ನು ಹಂಚಿಕೊಂಡು ನಿರ್ವಹಿಸುತ್ತೇವೆ ಎನ್ನುತ್ತಾರೆ ಶಕಿಲಾ.

ಫೋನ್‌ನಲ್ಲಿ ವಿಚಾರಣೆ
ಇತರ ರೋಗಿಗಳಂತೆ ಆಗಾಗ್ಗೆ ಹೋಗಿ ಕೋವಿಡ್ ರೋಗಿಗಳನ್ನು ವಿಚಾರಿಸುವುದಕ್ಕೆ ಆಗುವುದಿಲ್ಲ. ಕೌಂಟರ್‌ನಲ್ಲಿರುವ ದೂರವಾಣಿ ಸಂಖ್ಯೆಯನ್ನು ಪ್ರತಿ ರೋಗಿಗೂ ನೀಡಲಾಗುತ್ತದೆ. ಅವರಿಗೆ ಆಹಾರ, ಬಾಯಾರಿಕೆ ಅಗತ್ಯವಿದ್ದಲ್ಲಿ ಅವರೇ ಕರೆ ಮಾಡುತ್ತಾರೆ. ಸಿಬಂದಿಯೂ ಆಗಾಗ ಯೋಗಕ್ಷೇಮ ವಿಚಾರಿಸುತ್ತಾರೆ.

ಆಸ್ಪತ್ರೆಯಲ್ಲೂ ಸ್ನಾನ; ಮನೆಯಲ್ಲೂ ಸ್ನಾನ
ಕೆಲಸ ಮುಗಿದ ತತ್‌ಕ್ಷಣ ಆಸ್ಪತ್ರೆಯಲ್ಲೇ ಸ್ನಾನ ಮಾಡುತ್ತೇವೆ. ಸಮವಸ್ತ್ರವನ್ನು ಹೈಪೋಕ್ಲೋರೈಡ್‌ಗೆ ಹಾಕಿ ರೋಗಾಣು ಮುಕ್ತಗೊಳಿಸಿ ಮನೆಗೆ ಹೋಗುತ್ತೇವೆ. ನೇರ ಬಚ್ಚಲು ಮನೆಗೆ ಹೋಗಿ ಮತ್ತೆ ಸ್ನಾನ ಮಾಡಿ ಬಟ್ಟೆಯನ್ನೆಲ್ಲ ಬಿಸಿನೀರಿನಲ್ಲಿ ತೊಳೆದ ಬಳಿಕವಷ್ಟೇ ಮನೆಯೊಳಗಡೆ ಹೋಗುತ್ತೇವೆ. ನಮ್ಮ ಮನೆಯಲ್ಲಿ ಪತಿ ಮತ್ತು ಮಗಳು ಇದ್ದಾರೆ. ಅವರೊಂದಿಗೆ ಸಾಮಾಜಿಕ ಅಂತರದಲ್ಲೇ ಇರುತ್ತೇನೆ ಎಂದು ತಮ್ಮ ಇತ್ತೀಚಿನ ದಿನಚರಿ ಬಗ್ಗೆ ಶಕಿಲಾ ವಿವರಿಸುತ್ತಾರೆ.

ಟಾಪ್ ನ್ಯೂಸ್

Bantwal” ಬಿಜೆಪಿ ಪಾದಯಾತ್ರೆಗೆ ಕುಮಾರಸ್ವಾಮಿ ಅಪಸ್ವರ… ಆರ್.ಅಶೋಕ್ ಹೇಳಿದ್ದೇನು ?

Bantwal: ಬಿಜೆಪಿ ಪಾದಯಾತ್ರೆಗೆ ಕುಮಾರಸ್ವಾಮಿ ಅಪಸ್ವರ… ಆರ್.ಅಶೋಕ್ ಹೇಳಿದ್ದೇನು ?

Screenshot (51)

Wayanad Tragedy: ಕೇರಳ ಸರಕಾರದ ವಿರುದ್ಧ ಶಾ ಆಕ್ರೋಶ

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

11-honanvaar

Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ

1-pk

UPSC ಯಿಂದ ಪೂಜಾ ಖೇಡ್ಕರ್ IAS ಅರ್ಹತೆಯೇ ರದ್ದು: ಭವಿಷ್ಯದ ಪರೀಕ್ಷೆಗಳಿಂದ ನಿರ್ಬಂಧ

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

Wayanad Tragedy: ತಾಯಿ ಜೊತೆ ಸಂಬಂಧಿಕರ ಮನೆಗೆ ತೆರಳಿದ್ದ ಸಿದ್ದಾಪುರದ ವಿದ್ಯಾರ್ಥಿ ಮೃತ್ಯು

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್

ʼURI’ ಖ್ಯಾತಿಯ ಆದಿತ್ಯ ಧಾರ್‌ ಸಿನಿಮಾದಲ್ಲಿ ಅಜಿತ್‌ ದೋವಲ್‌ ಪಾತ್ರದಲ್ಲಿ ಆರ್.‌ ಮಾಧವನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

maha

Mangaluru: ನಗರದಲ್ಲಿ ಮುಂದುವರಿದ ಟೈಗರ್‌ ಕಾರ್ಯಾಚರಣೆ

1-wewqewqewqewq

Mangaluru; ವಿದ್ಯಾರ್ಥಿನಿಗೆ ಎದೆನೋವು: ಪ್ರಯಾಣಿಕರಿದ್ದ ಬಸ್ ನೇರ ಆಸ್ಪತ್ರೆಗೆ!

Screenshot (38)

Ullal: ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಸ್ಪೀಕರ್‌ ಖಾದರ್‌ ಭೇಟಿ

Puttur-01

Dakshina Kannada: ಮಹಾಮಳೆಗೆ ತತ್ತರಿಸಿದ ಜಿಲ್ಲೆ; ಹಲವು ಪ್ರದೇಶಗಳ ಸಂಪರ್ಕ ಕಡಿತ

shivananda-shetty

Mangaluru: ಟ್ಯಾಂಕರ್‌ ಢಿಕ್ಕಿ; ಸ್ಕೂಟರ್‌ ಸವಾರ ಸಾವು

MUST WATCH

udayavani youtube

ಸ್ಟ್ರೋಕ್ ಆದ ಮೇಲೆ ಜನರು ಯಾಕೆ ಸಕ್ರಿಯರಾಗಿರಬೇಕು?

udayavani youtube

ಪುಟ್ಟಣ್ಣ ಹೋಟೆಲ್ ಬೆಣ್ಣೆ ಸೆಟ್ ದೋಸೆಗೆ ಮನಸೋಲದವರಿಲ್ಲ! | ಶ್ರೀ ನಂಜುಂಡೇಶ್ವರ ಹೋಟೆಲ್ |

udayavani youtube

ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ

udayavani youtube

ದೇಶವನ್ನೇ ಬೆಚ್ಚಿ ಬೀಳಿಸಿದ ಕರ್ನಾಟಕದ ವಿಕೃತ ಕಾಮಿ

udayavani youtube

ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ| ಭಯಭೀತರಾದ ಜನ

ಹೊಸ ಸೇರ್ಪಡೆ

Bantwal” ಬಿಜೆಪಿ ಪಾದಯಾತ್ರೆಗೆ ಕುಮಾರಸ್ವಾಮಿ ಅಪಸ್ವರ… ಆರ್.ಅಶೋಕ್ ಹೇಳಿದ್ದೇನು ?

Bantwal: ಬಿಜೆಪಿ ಪಾದಯಾತ್ರೆಗೆ ಕುಮಾರಸ್ವಾಮಿ ಅಪಸ್ವರ… ಆರ್.ಅಶೋಕ್ ಹೇಳಿದ್ದೇನು ?

Screenshot (51)

Wayanad Tragedy: ಕೇರಳ ಸರಕಾರದ ವಿರುದ್ಧ ಶಾ ಆಕ್ರೋಶ

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

Kollywood: ನಟ ಸೂರ್ಯನಿಗೆ ಅಟ್ಲಿ ಕುಮಾರ್ ಆ್ಯಕ್ಷನ್‌ ಕಟ್?‌

11-honanvaar

Honnavara: ಲಿಂಗನಮಕ್ಕಿಯಿಂದ ನೀರು, ಜೋಗಕ್ಕೆ ಕಳೆ, ಕೊಳ್ಳದಲ್ಲಿ ಕಳವಳ

1-pk

UPSC ಯಿಂದ ಪೂಜಾ ಖೇಡ್ಕರ್ IAS ಅರ್ಹತೆಯೇ ರದ್ದು: ಭವಿಷ್ಯದ ಪರೀಕ್ಷೆಗಳಿಂದ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.