ಒಳಚರಂಡಿ ತ್ಯಾಜ್ಯ ನೀರು ಪಯಸ್ವಿನಿ ಪಾಲು
Team Udayavani, Nov 1, 2017, 4:47 PM IST
ಸುಳ್ಯ: ನಗರದ ಒಳಚರಂಡಿ ಅವ್ಯವಸ್ಥೆಯಿಂದ ಮ್ಯಾನುವೆಲ್ಗಳಲ್ಲಿ ತ್ಯಾಜ್ಯ ನೀರು ಉಕ್ಕಿ ನಗರದಲ್ಲಿ ದುರ್ನಾತ ಬೀರುತ್ತಿದ್ದು, ಕಂದಡ್ಕ ಹೊಳೆಯ ಮೂಲಕ ಪಯಸ್ವಿನಿ ಪಾಲಾಗುತ್ತಿದೆ!
ವೆಟ್ವೆಲ್ನಲ್ಲಿ ಕೊಳಚೆ ನೀರು ತುಂಬಿರುವ ಕಾರಣ, ಅದರಿಂದ ಪಂಪ್ ಮೇಲಕ್ಕೆತ್ತಲು ಸುಲಭವಾಗಲು, ವೆಟ್
ಲೆಟ್ ತೂತು ಮಾಡಿ ಮಲಿನ ನೀರನ್ನು ಹೊರ ಚರಂಡಿಗೆ ಬಿಡಲಾಗಿತ್ತು. ಪರಿಣಾಮ, ಜಟ್ಟಿಪಳ್ಳದ ವಿಶ್ವ ಕಾಂಪ್ಲೆಕ್ಸ್
ಬಳಿ ತೋಟದ ಉಜಿರೆಕಣಿ ಮೂಲಕ ತ್ಯಾಜ್ಯ ನೀರು ಕಂದಡ್ಕ ಹೊಳೆಯಿಂದ ಪಯಸ್ವಿನಿಗೆ ಸೇರುತ್ತಿದೆ.
ಕಾಂಪ್ಲೆಕ್ಸ್ ಮಾಲಕ ಸಂದೇಶ್ ಕುರುಂಜಿ ಹಾಗೂ ಸರಳಾಯ ಅವರ ತೋಟದಲ್ಲಿ ತ್ಯಾಜ್ಯ ಬೀಡುಬಿಟ್ಟಿದೆ. ಕಾಂಪ್ಲೆಕ್ಸ್ನ ನೆಲ ಮಹಡಿಯ ಅಂಗಡಿಗಳ ಎದುರುಗಡೆ ಇರುವ ತಡೆಗೋಡೆಯಿಂದ ತ್ಯಾಜ್ಯ ನೀರು ಸೋರುತ್ತಿದೆ. ಪರಿಸರದ ಸುತ್ತಮುತ್ತಲ ಬಾವಿಗಳಿಗೆ ಕಲುಷಿತ ನೀರು ಸೇರಿರುವ ಆತಂಕ ಉಂಟಾಗಿದೆ.
ಈ ಮಧ್ಯೆ ನಗರ ಪಂಚಾಯತ್ ತಾತ್ಕಾಲಿಕ ಕ್ರಮವಾಗಿ ಒಳಚರಂಡಿ ಮುಚ್ಚಲು ತೀರ್ಮಾನಿಸಿದೆ. ವೆಟ್ವೆಲ್ ಅನ್ನು ಖಾಲಿ ಮಾಡಿ, ಅಗತ್ಯ ಇರುವೆಡೆ ಕಾಂಕ್ರೀಟ್ ಮಾಡಿ, ವೆಟ್ವೆಲ್ಗೆ ನೀರು ಸೇರದಂತೆ ಕ್ರಮ ಕೈಗೊಳ್ಳಲಾಗುವುದು.
ಈಗಾಗಲೇ ದುರಸ್ತಿ ಕಾರ್ಯ ಆರಂಭಗೊಂಡಿದೆ ಎಂದು ತಿಳಿಸಿದೆ.
ಕಾಮಗಾರಿ ಆರಂಭದಿಂದಲೇ ಅವ್ಯವಸ್ಥೆಯ ಗೂಡಾಗಿದ್ದ ಒಳಚರಂಡಿ ಘಟಕ ಪ್ರಯೋಜನಕಾರಿ ಎನಿಸಲಿಲ್ಲ.
ಹೊಸ ಗದ್ದೆಯಲ್ಲಿನ ಘಟಕದ ಬಳಿ ದಿನವೂ ದುರ್ನಾತ ಬೀರಿ ಸುತ್ತಮುತ್ತಲಿನ 30ಕ್ಕೂ ಅಧಿಕ ಮನೆಗಳಿಗೆ ಸಂಕಷ್ಟ ಉಂಟಾಗಿದೆ. ಆದರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿಲ್ಲ ಅನ್ನುವುದು ಸಾರ್ವಜನಿಕರ ಆರೋಪ.
ಹಾಳಾದ ಪಂಪ್
ಹೊಸಗದ್ದೆಯಲ್ಲಿ ನಿರ್ಮಿಸಲಾಗಿರುವ ಶುದ್ಧೀಕರಣ ಘಟಕದಲ್ಲಿನ ಮೂರು ಪಂಪ್ಗ್ಳು ಕೆಟ್ಟಿವೆ. ವರ್ಷ ಕಳೆದರೂ
ದುರಸ್ತಿ ಆಗಿಲ್ಲ. ಪರಿಣಾಮ, ಕೊಳಚೆ ನೀರನ್ನು ಪಂಪ್ ಮಾಡಲಾಗದೆ ವೆಟ್ ವೆಲ್ ತುಂಬಿ ರಸ್ತೆಯ ಮ್ಯಾನುವೆಲ್
ಮೂಲಕ ಹೊರ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.