Mangaluru ಕಡಲ ತೀರ ನಿರ್ವಹಣೆಗೆ ಶೋರ್‌ಲೈನ್‌ ವರದಿ ಕಡ್ಡಾಯ!

ರಾಜ್ಯದ ಕಡಲ ತೀರ ರಕ್ಷಣೆಗೆ"ಎನ್‌ಸಿಎಸ್‌ಸಿಎಂ' ವರದಿ ಸರಕಾರಕ್ಕೆ ಸಲ್ಲಿಕೆ

Team Udayavani, Sep 10, 2024, 7:40 AM IST

ಕಡಲ ತೀರ ನಿರ್ವಹಣೆಗೆ ಶೋರ್‌ಲೈನ್‌ ವರದಿ ಕಡ್ಡಾಯ!

ಮಂಗಳೂರು: ಇನ್ನು ಮುಂದೆ ಬಂದರು ಅಭಿವೃದ್ದಿ, ಬ್ರೇಕ್‌ ವಾಟರ್‌ ನಿರ್ಮಾಣ, ಕಡಲ್ಕೊರೆತ ತಡೆಯ ಸ್ವರೂಪ ರಚನೆಗೆ ಸಿಆರ್‌ಝಡ್‌ ಅನುಮತಿ ಸಿಗಬೇ ಕಿದ್ದರೆ “ಕಡಲ ತೀರ ನಿರ್ವಹಣ ಯೋಜನೆ’ (ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ಪ್ಲ್ರಾನ್‌) ವರದಿ ಪಾಲನೆ ಕಡ್ಡಾಯ.

ರಾಷ್ಟ್ರೀಯ ಹಸುರು ಪೀಠ(ಎನ್‌ಜಿ ಟಿ) ನಿರ್ದೇಶನದಂತೆ ರಾಜ್ಯದ ಕಡಲ ತೀರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮೊದಲ ಬಾರಿ ವಿಸ್ತೃತ ಅಧ್ಯಯನ ನಡೆಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ನಿರ್ಧರಿಸಿದೆ. ನ್ಯಾಶನಲ್‌ ಸೆಂಟರ್‌ ಫಾರ್‌ ಸಸ್ಟೈನಬಲ್‌ ಕೋಸ್ಟಲ್‌ ಮ್ಯಾನೇಜ್ಮೆಂಟ್(ಎನ್‌ಸಿಎಸ್‌ಸಿಎಂ)ಗೆ ದೇಶದ ವಿವಿಧ ಕರಾವಳಿ ಭಾಗದ ಸಮಗ್ರ ವರದಿ ರೂಪಿಸಲು ಸೂಚಿಸಲಾಗಿದೆ. ಈ ಸಂಸ್ಥೆಯ ಪರಿಣಿತರು 3 ತಿಂಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಕ್ಕೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಆಧ್ಯಯನದ ಆಂಶಗಳನ್ನು° 3 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಪರಿಣಿತರ ಉಪಸ್ಥಿತಿಯಲ್ಲಿ ಚರ್ಚಿಸಲಾಗಿದೆ. ಎನ್‌ಸಿಎಸ್‌ಸಿಎಂ ತಜ್ಞರು ಶೀಘ್ರವೇ ನೀಡುವ ವರದಿಯನ್ನು ನೇರವಾಗಿ ಅಂಗೀಕರಿ ಸಬೇಕೇ? ಅಥವಾ ಪರಿಷ್ಕರಿಸಬೇಕೇ? ಎನ್ನುವ ಬಗ್ಗೆ ರಾಜ್ಯ ಸರಕಾರ ನಿರ್ಧರಿ ಸಲಿದೆ. ಕಡಲ ತೀರ ಪ್ರದೇಶದ ಭವಿಷ್ಯದ ಸವಾಲುಗಳು, ಸಂಕಷ್ಟಗಳು ಹಾಗೂ ಅವುಗಳಿಗೆ ಪರಿಹಾರ ಸೇರಿದಂತೆ ಹಲವು ಸಂಗತಿಗಳನ್ನು ವರದಿಯಲ್ಲಿ ಉಲ್ಲೇಖಿಸಿರುವ ಸಂಭವವಿದೆ.

ಶೀಘ್ರವೇ ವರದಿ ಸಲ್ಲಿಕೆಯಾಗಲಿದ್ದು, ಈ ವರದಿಯ ಸಲಹೆ ಆಧರಿಸಿ ಭವಿಷ್ಯದಲ್ಲಿ ಕಡಲ ತೀರದ ಚಟು ವಟಿಕೆಗಳನ್ನು ನಿರ್ಧರಿಸಲಾಗುತ್ತದೆ.

ನಿರ್ದಿಷ್ಟ ಭಾಗದಲ್ಲಿ ಕಲ್ಲು ಹಾಕಿ ಅಥವಾ ತಡೆಗೋಡೆ ನಿರ್ಮಿಸಿ ಅಲೆ ಗಳನ್ನು ನಿಯಂತ್ರಿಸುವ ಬದಲು ನೈಸರ್ಗಿಕ ರಚನೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದೇ ಶಾಶ್ವತ ಪರಿಹಾರ ಆಗಬಹುದು ಮತ್ತು ಕಡಲ ತೀರದಲ್ಲಿ ಮನೆಗಳ ನಿರ್ಮಾಣ ತಡೆಗೆ ಕೆಲವೊಂದು ಶಿಫಾರಸುಗಳನ್ನು ಸಮಿತಿ ಕೈಗೊಂಡಿರುವ ಸಾಧ್ಯತೆ ಇದೆ. ಕಡಲ ತೀರದ ಯಾವ ಭಾಗದಲ್ಲಿ ಯಾವ ಯೋಜನೆಗೆ ಅವಕಾಶ ನೀಡಬಹುದು? ಬಂದರು ಅಭಿವೃದ್ದಿಗೆ ಯಾವ ಕ್ರಮ ಸೂಕ್ತ? ಯಾವ ಪ್ರದೇಶಗಳಲ್ಲಿ ನಿರ್ಬಂಧ ವಿಧಿಸಬೇಕು ಇತ್ಯಾದಿ ಅಂಶಗಳನ್ನು ವರದಿ ಒಳಗೊಂಡಿರುವ ಸಾಧ್ಯತೆ ಇದೆ.

ಕೃತಕ ದಿಬ್ಬಗಳ ರಚನೆಗೆ ಒಲವು!
ಸಮುದ್ರ ದಡದಿಂದ ನಿರ್ದಿಷ್ಟ ದೂರ ನೀರಿನಲ್ಲಿ ಮೀನುಗಳನ್ನು ಆಕರ್ಷಿಸುವ ಕೃತಕ ದಿಬ್ಬಗಳನ್ನು (ಫಿಶ್‌ ಅಗ್ರಿಗೇಟಿಂಗ್‌ ಡಿವೈಸ್‌) ನಿರ್ಮಿ ಸುವ ಯೋಜನೆಯನ್ನು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಸಮುದ್ರದ ನೀರಿನ ತೆರೆ ದಡ ತಲುಪುವ ಮೊದಲು ನಿರ್ದಿಷ್ಟ ಸ್ಥಳದಲ್ಲಿ ನೀರಿನ ಮಧ್ಯೆಯೇ ಹೊಡೆಯುತ್ತದೆ. ಇಂತಹ ವೇವ್‌ ಬ್ರೇಕಿಂಗ್‌ ಝೋನ್‌ ಗುರುತಿಸಿ ಇದಕ್ಕೂ ಸ್ವಲ್ಪ ಹಿಂದೆ ಫಿಶ್‌ ಅಗ್ರಿಗೇಟಿಂಗ್‌ ಡಿವೈಸ್‌ ಅಳವಡಿಸಿ ಕಡಲ ಅಲೆಗಳ ವೇಗ ದಡ ತಲುಪುವ ಮೊದಲೇ ಕಡಿಮೆಯಾಗಬಹುದು ಎನ್ನುವ ಲೆಕ್ಕಾಚಾರವಿದೆ.

ಕಡಲ ತೀರಗಳಿಗೆ “ಕಲರ್‌ ಕೋಡಿಂಗ್‌’!
ಕಡಲ ತೀರಗಳಿಗೆ ಕಲರ್‌ ಕೋಡಿಂಗ್‌ ನೀಡಲಾಗಿದೆ. ಈ ಪೈಕಿ ಕಡಲಕ್ಕೊರೆತ ಅಧಿಕವಿರುವ ಪ್ರದೇಶಕ್ಕೆ “ರೆಡ್‌’ ನೀಡಿದ್ದರೆ, ಉಳ್ಳಾಲದ ಬಟ್ಟಪ್ಪಾಡಿ, ಸಸಿಹಿತ್ಲು ಬೀಚ್‌ಗಳು “ರೆಡ್‌’ ಪಟ್ಟಿಯಲ್ಲಿವೆ. ಉಡುಪಿಯ ಪಡುಬಿದ್ರಿ ಬಳಿಯ ನಡಿಪಟ್ಣ ಹಾಗೂ ಬೈಂದೂರಿನ ನದಿ-ಸಮುದ್ರ ಸೇರುವ ಪ್ರದೇಶಕ್ಕೂ ರೆಡ್‌ ನೀಡಲಾಗಿದೆ. ಕಡಲ್ಕೊರೆತ ಮಧ್ಯಮ ಪ್ರಮಾಣದಲ್ಲಿರುವಲ್ಲಿಗೆ “ಆರೆಂಜ್‌’, ಕಡಿಮೆ ಇರುವಲ್ಲಿಗೆ “ಎಲ್ಲೋ’, ಕಡಲ್ಕೊರೆತ ಆಗದ ಪ್ರದೇಶಕ್ಕೆ “ಗ್ರೀನ್‌’ ಕೋಡಿಂಗ್‌ ನೀಡಲಾಗುತ್ತದೆ. ಈ ಕಲರ್‌ ಕೋಡ್‌ ಆಧರಿಸಿಯೇ ಮುಂದಿನ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ.

ತಜ್ಞರ ವರದಿ ಸಿದ್ಧವಾಗಿದೆ‌
ಎನ್‌ಸಿಎಸ್‌ಸಿಎಂ ತಂಡದ ತಜ್ಞರು ಈಗಾಗಲೇ ದಕ್ಷಿಣ ಕನ್ನಡ ಸಹಿತ ರಾಜ್ಯದ ವಿವಿಧ ಕಡಲ ತೀರಗಳಿಗೆ ಭೇಟಿ ನೀಡಿ ವರದಿ ಸಿದ್ದಪಡಿಸಿದ್ದಾರೆ. ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಫ್ಲ್ಯಾನ್‌ ವರದಿ ಅನುಷ್ಠಾನಕ್ಕೆ ಬಂದ ಬಳಿಕ ಕಡಲ ಭಾಗದ ವಿವಿಧ ಚಟುವಟಿಕೆ ನಡೆಸಲು ಇದುವೇ ಮುಖ್ಯ ಆಧಾರವಾಗಲಿದೆ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

-ದಿನೇಶ್‌ ಇರಾ

ಟಾಪ್ ನ್ಯೂಸ್

Eshwara Khandre: ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ

Eshwara Khandre: ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ

ಅ.17ಕ್ಕೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ನಿಶ್ಚಿತಾರ್ಥ, ಹುಡುಗಿ ಯಾರು ಗೊತ್ತಾ ?

ಅ.17ಕ್ಕೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ನಿಶ್ಚಿತಾರ್ಥ, ಹುಡುಗಿ ಯಾರು ಗೊತ್ತಾ ?

9

BBK11: ಈ ಬಾರಿ ಬಿಗ್‌ ಬಾಸ್‌ ಮನೆಯೊಳಗೆ ಹೋಗೋರು ಇವರೇ? ಇಲ್ಲಿದೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿ

Udupi: ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ ಹೃದಯಾಘಾತದಿಂದ ನಿಧನ

Udupi: ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ ಹೃದಯಾಘಾತದಿಂದ ನಿಧನ

Nagamangala Incident: ತನಿಖೆ ಬಳಿಕ ಇನ್ನಷ್ಟು ಕ್ರಮ… ಗೃಹ ಸಚಿವ ಪರಮೇಶ್ವರ್ ಹೇಳಿಕೆ

Nagamangala Incident: ತನಿಖೆ ಬಳಿಕ ಇನ್ನಷ್ಟು ಕ್ರಮ… ಗೃಹ ಸಚಿವ ಪರಮೇಶ್ವರ್ ಹೇಳಿಕೆ

Delhi: ಸಚಿವೆ ಅತಿಶಿ ಮರ್ಲೆನಾ ದೆಹಲಿ ನೂತನ ಸಿಎಂ: ಶಾಸಕಾಂಗ ಪಕ್ಷದ ಸಭೆ ತೀರ್ಮಾನ?

Delhi: ಸಚಿವೆ ಅತಿಶಿ ಮರ್ಲೆನಾ ದೆಹಲಿ ನೂತನ ಸಿಎಂ: ಶಾಸಕಾಂಗ ಪಕ್ಷದ ಸಭೆ ತೀರ್ಮಾನ?

Kaup: ದಂಡತೀರ್ಥ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್, ಪ್ರಯಾಣಿಕರು ಪಾರು

Kaup: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್… ಪ್ರಯಾಣಿಕರು ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

NEP ವಿಷಯ ಆಯ್ಕೆ ಕಾರಣ ಸ್ನಾತಕೋತ್ತರ ಪ್ರವೇಶ ಸಂಕಟ!

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

Belthangady: ರಸ್ತೆ ಮಧ್ಯೆಯೇ ಬಸ್‌ ನಿಲ್ಲಿಸಿದರೆ ಶಿಸ್ತು ಕ್ರಮ

Belthangady: ರಸ್ತೆ ಮಧ್ಯೆಯೇ ಬಸ್‌ ನಿಲ್ಲಿಸಿದರೆ ಶಿಸ್ತು ಕ್ರಮ

Puttur: ಸಂಪ್ಯ ಮದ್ರಸಾದಲ್ಲಿ ಹಳೆ ಕಾಲದ ವಸ್ತು ಪ್ರದರ್ಶನ

Puttur: ಸಂಪ್ಯ ಮದ್ರಸಾದಲ್ಲಿ ಹಳೆ ಕಾಲದ ವಸ್ತು ಪ್ರದರ್ಶನ

Eshwara Khandre: ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ

Eshwara Khandre: ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ

Kollegala: ಒಣಗಾಂಜಾ ಮಾರಾಟ; ಆರೋಪಿ ಬಂಧನ

Kollegala: ಒಣಗಾಂಜಾ ಮಾರಾಟ; ಆರೋಪಿ ಬಂಧನ

ಅ.17ಕ್ಕೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ನಿಶ್ಚಿತಾರ್ಥ, ಹುಡುಗಿ ಯಾರು ಗೊತ್ತಾ ?

ಅ.17ಕ್ಕೆ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪುತ್ರನ ನಿಶ್ಚಿತಾರ್ಥ, ಹುಡುಗಿ ಯಾರು ಗೊತ್ತಾ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.