ಸುಳ್ಯ: ಪ್ರಥಮಬಾರಿಗೆ ಕಿರುಚಿತ್ರಗಳ ಮಹಾಸ್ಪರ್ಧೆ
Team Udayavani, Jul 5, 2017, 3:35 AM IST
ಸುಳ್ಯ: ಸುಳ್ಯದಲ್ಲಿ ಪ್ರಥಮ ಬಾರಿಗೆ ಕಿರುಚಿತ್ರಗಳ ಮಹಾ ಸ್ಪರ್ಧೆಯನ್ನು ಆದ್ಯ ಕ್ರಿಯೇಷನ್ಸ್ ಹೆಸರಿನಲ್ಲಿ ನಾಲ್ವರು ಯುವಕರು ಹಮ್ಮಿಕೊಂಡಿದ್ದು, ಸುಳ್ಯ ಓಡಬಾ„ಯಲ್ಲಿಯ ಕುಂಭಕೋಡು ಹಾಲ್ನಲ್ಲಿ ಕಾರ್ಯಕ್ರಮ ನಡೆಯಿತು.
ಸತೀಶ್ ಹೊದ್ದೆಟ್ಟಿ, ಕಿರಣ್ ಭಟ್, ಪುಷ್ಪರಾಜ ಕುಲಾಲ್ ಮತ್ತು ಪ್ರಶಾಂತ್ ರಾಮನ್ ಅವರು ಸೇರಿ ಆದ್ಯ ಕ್ರಿಯೇಷನ್ಸ್ ಎಂಬ ಸಂಸ್ಥೆಯ ಮೂಲಕ ಈ ಕಿರು ಚಿತ್ರಗಳ ಸ್ಪರ್ಧೆ ಏರ್ಪಡಿಸಿದ್ದರು. ಸ್ಪರ್ಧೆಗೆ 23 ಕಿರುಚಿತ್ರಗಳು ಬಂದಿದ್ದು, ಇವುಗಳಲ್ಲಿ 12 ಚಿತ್ರಗಳನ್ನು ಆಯ್ಕೆ ಮಾಡಿಕೊಂಡು ತೀರ್ಪುಗಾರರು ಮತ್ತು ಪ್ರೇಕ್ಷಕರ ಮುಂದೆ ಪ್ರದರ್ಶಿಸಲಾಯಿತು. ಇವುಗಳಲ್ಲಿ ಪ್ರಥಮ ಪ್ರಶಸ್ತಿಗೆ ಇಕ್ಕಿಲಿ ಎಂಬ ಮಲಯಾಳಂ ಕಿರುಚಿತ್ರ, ರನ್ನರ್ ಅಪ್ ಪ್ರಶಸ್ತಿಗೆ ಜಕ್ಕಿನಿ ಎಂಬ ಕಿರುಚಿತ್ರ ಆಯ್ಕೆಯಾಯಿತು. ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆದ ಈ ವಿಭಿನ್ನ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ತೀರ್ಪುಗಾರರಾಗಿ ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತ್ಯಗಾರ ಡಾ| ವಿ.ನಾಗೇಂದ್ರ ಪ್ರಸಾದ್, ಚಿತ್ರ ನಟಿ ದಿವ್ಯಾರಾವ್, ಮಡ ಮಕ್ಕಿ ನಿರ್ದೇಶಕ ವಿನಯ್ ಪ್ರೀತಮ್, ಮಲಯಾಳಂ ನಿರ್ದೇಶಕ ಪ್ರದೀಪ್ ಮಾಧವನ್, ನಟ ನಿರ್ಮಾಪಕ ನವರಸನ್ ಕಾರ್ಯ ನಿರ್ವಹಿಸಿದರು.
ಕಿರುಚಿತ್ರ ಮಹಾಸ್ಪರ್ಧೆ ಕಾರ್ಯಕ್ರಮವನ್ನು ನಿರ್ದೆಶಕ ಡಾ| ವಿ. ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು. ನಿತ್ಯಾನಂದ ಮುಂಡೋಡಿ, ದಾಮೋದರ ನಾರ್ಕೋಡು, ಪಿ.ಎಂ. ರಂಗನಾಥ್, ದಿನೇಶ್ ಮಡಪ್ಪಾಡಿ, ದಿವ್ಯ ಪ್ರಭಾ ಚಿಲ್ತಡ್ಕ, ಶೀಲಾವತಿ ಮಾಧವ, ಜೀವನ್ ರಾಂ ಸುಳ್ಯ, ಕೆ.ಎಂ. ಮುಸ್ತಫ, ಡಾ| ಎನ್.ಎ.ಜ್ಞಾನೇಶ್, ಹರೀಶ್ ಬಂಟ್ವಾಳ್, ಸುಧಾಕರ ರೈ ನೆಟ್ಕಾಂ, ರಾಕೇಶ್ ಕುಂಟಿಕಾನ, ಶರೀಫ್ ಜಟ್ಟಿಪಳ್ಳ, ಸದಾ ನಂದ ಮಾವಜಿ, ಡಾ| ಅಶೋಕ್ ನಿಡ್ಯಮಲೆ, ಪ್ರಫುಲ್ ದೇರಪ್ಪಜ್ಜನ ಮನೆ, ತುಷಾರ್ ಗೌಡ, ಈಶ್ವರ ಮೂಲ್ಯ, ಕುಂಞಿರಾಮನ್ ವೈದ್ಯರ್ ಉಪಸ್ಥಿತರಿದ್ದರು.ಎಂ.ಬಿ.ಸದಾಶಿವ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Israel ಸರ್ಜಿಕಲ್ ಸ್ಟ್ರೈಕ್: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್ ಬಾಂಬ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.