ಪುನಃಪ್ರತಿಷ್ಠಾ ರಜತಮಹೋತ್ಸವ: ಧಾರ್ಮಿಕ ಕಾರ್ಯಕ್ರಮ
ಶ್ರೀ ಸತ್ಯ ದೇವತಾ ಧರ್ಮದೇವತಾ ಮಂದಿರ
Team Udayavani, Apr 28, 2019, 6:28 AM IST
ಮಹಾನಗರ: ಗುರುಪುರದ ಶ್ರೀಸತ್ಯ ದೇವತಾ ಧರ್ಮ ದೇವತಾ ಮಹೋತ್ಸವ ಸಮಿತಿಯಿಂದ ಜರಗುತ್ತಿರುವ ಶ್ರೀ ಸತ್ಯದೇವತಾ ಧರ್ಮದೇವತಾ ಮಂದಿ ರದ ಪುನಃ ಪ್ರತಿಷ್ಠಾ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಎ. 27ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಬೆಳಗ್ಗೆ 8ರಿಂದ ಶ್ರೀ ಸತ್ಯ ದೇವತಾ ಮಂದಿರದಲ್ಲಿ ನಿರ್ಮಾಲ್ಯ ವಿಸರ್ಜನೆ, ಪ್ರಸ ನ್ನತಾ ಪೂಜೆ ಜರಗಿತು. ಬೆಳಗ್ಗೆ 9.30ರಿಂದ ಶ್ರೀ ಗುರು ಸ್ವಾಮಿ ನಾರಾಯಣ ದೇವ ಸ್ಥಾನದಲ್ಲಿ ಪ್ರಾರ್ಥನೆ, ಗಣಪತಿ ಪೂಜನೆ, ಪುಣ್ಯಾಹ ವಾಚನೆ, ಆವಾಹಿತ ದೇವತಾ ಪೂಜನೆ, ಹವನ ನಡೆಯಿತು.
ಬೆಳಗ್ಗೆ 9.30ರಿಂದ ಶ್ರೀ ಸತ್ಯ ದೇವತಾ ಮಂದಿರದಲ್ಲಿ ಶತಕಲಾಭಿಷೇಕ, ಭಜನ ಸಂಕೀರ್ತನೆ ನಡೆಯಿತು. 12ಕ್ಕೆ ಪೂರ್ಣಾ ಹುತಿ, ಮಹಾಪೂಜೆ, ಬ್ರಾಹ್ಮಣ ಪೂಜೆ, ದಂಪತಿ ಪೂಜೆ ನೆರೆವೇರಿ 1 ಗಂಟೆಗೆ ಸಮಾ ರಾಧನೆ ನೆರವೇರಿತು. ಸಂಜೆ 5.30ಕ್ಕೆ ಪುಷ್ಪ ಉಯ್ನಾಲೆ ಸೇವೆ ನಡೆಯಿತು. 5ರಿಂದ 7ರ ವರೆಗೆ ಭಜನ ಸಂಕೀರ್ತನೆ ನಡೆದು ರಾತ್ರಿ 8 ಗಂಟೆಗೆ ರಾತ್ರಿ ಪೂಜೆ ಹಾಗೂ ಸಮಾರಾಧನೆ ಜರಗಿತು.
ಜಿ. ಜನಾರ್ದನ ಕೃಷ್ಣಭಟ್ ಮಂಟಪದ ಸತ್ಯಶ್ರೀ ವೇದಿಕೆಯಲ್ಲಿ ವಿವಿಧಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಇಂದಿನ ಕಾರ್ಯಕ್ರಮ
ಎ. 28ರಂದು ಬೆಳಗ್ಗೆ 4.30ಕ್ಕೆ ಪುಣ್ಯಾಹ ಗಣಪತಿಯಾಗ, ಬೆಳಗ್ಗೆ 5ರಿಂದ 5.25: ಶ್ರೀ ನಾಗದೇವರ ಹಾಗೂ ಬ್ರಹ್ಮ ರಕ್ತೇಶ್ವರೀ, ನಂದಿಗೋಣ ಹಾಗೂ ಕ್ಷೇತ್ರಪಾಲ ದೇವರ ಪ್ರತಿಷ್ಠೆ, ತಂಬಿಲ, ಬ್ರಹ್ಮಕಲಶಾಭಿಷೇಕ, ನಾಗದರ್ಶನ ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ದೈವಸ್ಥಾನದಲ್ಲಿ ವಾಸ್ತುಹೋಮ, ರಾಕ್ಷೋಘ್ನ ಹೋಮ, ದಿಕಾ³ಲ ಬಲಿ, ಅದಿವಾಸ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
MRPL: ಕರಾವಳಿಗೆ ಮೊದಲ “ಗ್ರೀನ್ ಹೈಡ್ರೋಜನ್’ ಘಟಕ
Mangaluru; ಕುಂಟಿಕಾನದಲ್ಲಿ ಅಪಘಾತ: ಕಾಲೇಜು ವಿದ್ಯಾರ್ಥಿ ಸಾ*ವು
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.