ಪಾಲಿಕೆಯಿಂದ ಸಿಂಗಲ್‌ ವಿಂಡೋ ಸಿಸ್ಟಮ್‌


Team Udayavani, Jan 28, 2019, 5:07 AM IST

28-january-4.jpg

ಕಾವೂರು : ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕಾವೂರಿನಲ್ಲಿ ವ್ಯವಸ್ಥಿತ ಮಾರುಕಟ್ಟೆ ಬೇಕೆಂಬ ಜನರ ಬಹುದಿನದ ಬೇಡಿಕೆ ಜ. 29ರಂದು ಈಡೇರಲಿದೆ.

ಕಾವೂರಿನ ಪೊಲೀಸ್‌ ಠಾಣೆ ಸಮೀಪ 4.60 ಕೋಟಿ ರೂ. ವೆಚ್ಚದ ಈ ಬೃಹತ್‌ ಕಟ್ಟಡ ಕೇವಲ ಮಾರುಕಟ್ಟೆಗೆ ಸೀಮಿತವಾಗದೆ ಸಾರ್ವಜನಿಕರ ನಿತ್ಯದ ಕೆಲಸ ಕಾರ್ಯಗಳಿಗೆ ಸದ್ಬಳಕೆಯಾಗಲಿದೆ. ಮಹಾನಗರ ಪಾಲಿಕೆಯಿಂದ ಸಿಂಗಲ್‌ ವಿಂಡೋ ಸಿಸ್ಟಮ್‌ ಇಲ್ಲಿ ಜಾರಿಯಾಗಲಿದೆ. ನಾಡ ಕಚೇರಿ, ಮಂಗಳೂರು ಒನ್‌, ನೆಮ್ಮದಿ ಕೇಂದ್ರ ಮತ್ತಿತರ ವ್ಯವಸ್ಥೆಗಳು ಈ ಕಟ್ಟಡದಲ್ಲಿ ನೆಲೆಯಾಗಲಿದ್ದು, ಒಂದೇ ಕಡೆ ಸೇವೆಗಳು ಸಿಗಲಿವೆ. ಈ ಮಾರುಕಟ್ಟೆಯ ಇನ್ನೊಂದು ವಿಶೇಷ ಅಂದರೆ ಮಡಿಕೆ ಸಹಿತ ಮಣ್ಣಿನಿಂದ ಮಾಡಿದ ಪಾತ್ರೆಗಳು, ವಸ್ತುಗಳು ಸಿಗುವ ಅಂಗಡಿ, ಮೀನು ಮಾರುಕಟ್ಟೆ , ತರಕಾರಿ ಮತ್ತಿತರ ಸೌಲಭ್ಯದ ಜತೆಗೆ ಬೇರೆ ಮಳಿಗೆಗಳು ಇರಲಿವೆ.

ಸುಸಜ್ಜಿತ ಮಳಿಗೆ
ತಳ ಅಂತಸ್ತಿನ ಸಹಿತ ನಾಲ್ಕು ಮಹಡಿಗಳ ಬೃಹತ್‌ ವಾಣಿಜ್ಯ ಸಂಕೀರ್ಣ ಇದಾಗಿದ್ದು, ತರಕಾರಿ ವ್ಯಾಪಾರಿಗಳಿಗೆ ತಳ ಅಂತಸ್ತಿನಲ್ಲಿ ವ್ಯವಸ್ಥೆ ಮಾಡಲಾಗಿದೆ.

ನೆಲ ಅಂತಸ್ತಿನಲ್ಲಿ ಮೀನು, ಮೊಟ್ಟೆ, ಚಿಕನ್‌ ಮತ್ತಿತರ ಮಾರಾಟ ಮಳಿಗೆಗಳಿರುತ್ತವೆ. ಇದರಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇರಲಿದ್ದು, ಸುಮಾರು 16 ಕಾರು, ಕನಿಷ್ಠ ನೂರು ದ್ವಿಚಕ್ರ ಪಾರ್ಕ್‌ ಮಾಡ ಬಹುದಾಗಿದೆ. 130 ಚದರ ಅಡಿಯಿಂದ 200 ಚದರ ಅಡಿಗಳ ಮಳಿಗೆಗಳನ್ನು ನಿರ್ಮಿಸಲಾಗಿದೆ.

ಜನರ ಗಮನ ಸೆಳೆಯಲಿದೆ
ಮಾರುಕಟ್ಟೆ ನಿರ್ಮಾಣ ಮಾಡುವುದು ನನ್ನ ಯೋಜನೆಗಳಲ್ಲಿ ಪ್ರಮುಖವಾಗಿತ್ತು. ಇದಕ್ಕಾಗಿ ನಾನು ನಗರಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷನಾಗಿದ್ದಾಗ ಸತತ ಪ್ರಯತ್ನ ಪಟ್ಟು ಹಣ ಕಾದಿರಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇದಕ್ಕೆ ವಿವಿಧ ಮೂಲದಿಂದ ಹಣ ಕ್ರೋಡಿಕರಿಸಲಾಗಿದೆ. ವಿಶೇಷ ಮಾರುಕಟ್ಟೆಯಾಗಿ ಇದು ಜನರ ಗಮನ ಸೆಳೆಯಲಿದೆ. ಮಾಜಿ ಮೇಯರ್‌ ಹರಿನಾಥ್‌ ಅವರ ಅಧಿಕಾರ ಅವಧಿಯಲ್ಲಿ ಈ ಮಾರುಕಟ್ಟೆಯ ಯೋಜನೆ ಸಿದ್ಧಪಡಿಸಿ, ಅನುಷ್ಠಾನಕ್ಕೆ ಶ್ರಮಿಸಿದ್ದರು ಎಂದು ಸ್ಥಳೀಯ ಕಾರ್ಪೊರೇಟರ್‌ ದೀಪಕ್‌ ಪೂಜಾರಿ ತಿಳಿಸಿದ್ದಾರೆ.

ಶೂನ್ಯ ತ್ಯಾಜ್ಯ ವಿಲೇವಾರಿ
ಈ ಮಾರುಕಟ್ಟೆ ಕಟ್ಟಡದಲ್ಲಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸಲು ನೆರವಾಗುವ ತ್ಯಾಜ್ಯ ಸಂಸ್ಕರಣ ಘಟಕ(ಎಸ್‌ಟಿಪಿ) ಅಳವಡಿಕೆಯಾಗಿದೆ. ತರಕಾರಿ, ಮಾಂಸಹಾರಿ ತ್ಯಾಜ್ಯಗಳು ಸಣ್ಣ ತುಂಡುಗಳಾಗಿ ಪರಿವರ್ತಿಸುವ ವ್ಯವಸ್ಥೆಯಿದ್ದು,ಶೂನ್ಯ ತ್ಯಾಜ್ಯ ವಿಲೇವಾರಿ ಮಾರುಕಟ್ಟೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಒಂದು ಸಾವಿರ ಲೀಟರ್‌ನ ಸಾಮರ್ಥ್ಯ ಎಸ್‌ಟಪಿ ಇದಾಗಿದ್ದು ಇದರ ನೀರನ್ನು ಹೂ ಗಿಡಗಳಿಗೆ ಬಳಸಬಹುದಾಗಿದೆ.

ಒಂದೇ ಸೂರಿನಡಿ ಪಾಲಿಕೆ ಸೌಲಭ್ಯ
ಕಾವೂರು ಮಾರುಕಟ್ಟೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಪಾಲಿಕೆಯ ಬಹುತೇಕ ಕೆಲಸಗಳು ಆಗುವಂತೆ ಈ ಮಾರುಕಟ್ಟೆ ಸಂಕೀರ್ಣದಲ್ಲಿ ಕಚೇರಿ ಆರಂಭಿಸುವ ನಿರ್ಧಾರ ಮಾಡಲಾಗಿದೆ. ಜನತೆಗೆ ಉಪಯೋಗವಾದರೆ ಪಾಲಿಕೆಯ ಕೆಲಸ ಸಾರ್ಥಕವಾದಂತೆ.
 ಭಾಸ್ಕರ ಕೆ.,ಮೇಯರ್‌ ಮನಪಾ

ಟಾಪ್ ನ್ಯೂಸ್

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ

Prabhakar-Joshi

Bantwala: ಹಿರಿಯ ವಿದ್ವಾಂಸರಾದ ಡಾ.ಪ್ರಭಾಕರ ಜೋಶಿಗೆ ಪೊಳಲಿ ಯಕ್ಷೋತ್ಸವ ಪ್ರಶಸ್ತಿ ಪ್ರದಾನ

Sowthadka

Hunger Strike: ಸರಕಾರದ ಹಿಡಿತದಿಂದ ದೇಗುಲ ಮುಕ್ತಗೊಳಿಸಿ, ಸ್ವಾಯತ್ತ ಮಂಡಳಿ ರಚಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

rape

Women; 16 ವರ್ಷಗಳಿಂದ ಮನೆಯಲ್ಲೇ ಮಹಿಳೆ ಬಂಧನ: ರಕ್ಷಣೆ

CHampai Soren

Jharkhand ಮಾಜಿ ಸಿಎಂ ಚಂಪಯಿ ಆಸ್ಪತ್ರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.