ನದಿಗಳಿಗೆ ತ್ಯಾಜ್ಯ ಸೇರುತ್ತಿದ್ದರೂ ತಣ್ಣಗೆ ಕುಳಿತಿರುವ ನ.ಪಂ.


Team Udayavani, Apr 1, 2017, 1:01 PM IST

3103SLE-4-A.jpg

ಸುಳ್ಯ: ಒಂದು ಹನಿ ಒಳ್ಳೆಯ ನೀರಿದ್ದರೂ ವ್ಯರ್ಥ ಮಾಡಬೇಡಿ ಎಂದು ಎಲ್ಲೆಡೆ ಕೂಗು ಕೇಳಿಬರುತ್ತಿರುವಾಗ, ಕೆಲವೇ ದಿನಗಳಲ್ಲಿ ಸುಳ್ಯ ನಗರಕ್ಕೆ ನೀರಿನ ಮೂಲವಾದ ಪಯಸ್ವಿನಿ ಮತ್ತು ಕಂದಡ್ಕ ಹೊಳೆಯ ನೀರು ಕುಡಿಯದಂತಾಗದ ಸ್ಥಿತಿ ಉದ್ಭವಿಸಿದೆ. ಇದರೊಂದಿಗೇ ಕಂದಡ್ಕ ಹೊಳೆಗೆ ಮಣ್ಣು ಇತರ ತ್ಯಾಜ್ಯವನ್ನು ಸುರಿಯುತ್ತಿದ್ದು ಸ್ಥಳೀಯಾಡಳಿತ ಸುಮ್ಮನಿದೆ.

ನಗರ ಪಂಚಾಯತ್‌ ಅಧಿಕಾರಿಗಳು, ಜನಪ್ರತಿನಿಧಿಗಳಾರೂ ಇದರ ಬಗ್ಗೆ ಹೆಚ್ಚು ಯೋಚಿಸಿದಂತೆ ತೋರುತ್ತಿಲ್ಲ ಎಂಬ ನಾಗರಿಕರ ಅಭಿಪ್ರಾಯ ಕೇಳಿಬರುತ್ತಿದೆ.

ಒಳಚರಂಡಿಯ ಕಥೆ
ನಗರದ ಮೂರನೇ ಒಂದು ಭಾಗಕ್ಕಷ್ಟೇ ಒಳಚರಂಡಿ ಯೋಜನೆ ಜಾರಿಯಾಗಿದೆ. ಅದರಲ್ಲೂ ಕೊಳಚೆ ಹರಿಯಲು ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ. ಇದರೊಂದಿಗೆ ಇನ್ನುಳಿದ ಪ್ರದೇಶಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಹಾಗಾಗಿ ನಗರದ ಬಹುತೇಕ ಕೊಳಚೆ ಮತ್ತು ಮಳೆ ನೀರು ಪಯಸ್ವಿನಿ ಮತ್ತು ಅದರ ಉಪನದಿ ಕಂದಡ್ಕ ಹೊಳೆಗೆ ಸೇರುತ್ತಿದೆ. 

ಇದರಿಂದ ನದಿಯ ನೀರೂ ಕುಡಿಯದಂತಾಗಿ ಪರಿಣಮಿಸುತ್ತಿದೆ. ಬಿಸಿಲಿನ ಝಳ ದಿನೇ ದಿನೆ ಹೆಚ್ಚು ತ್ತಿದ್ದು, ನದಿಗಳಲ್ಲೂ ನೀರಿನ ಪ್ರಮಾಣ ಕುಸಿಯುತ್ತಿದೆ. ಅಲ್ಲಲ್ಲಿರುವ ಹೊಂಡಗಳಲ್ಲಿ ಕೊಳಚೆ ನೀರು ಮಡು ಗಟ್ಟಿ ದುರ್ವಾಸನೆ ಬೀರುತ್ತಿದೆ. 

ನೀರೆಲ್ಲ ಕಪ್ಪುಬಣ್ಣಕ್ಕೆ ತಿರುಗಿದೆ. ಮಳೆ ಬಂದಾಗ ಈ ಕೊಳಚೆಯೆಲ್ಲ ಮತ್ತೆ ಪಯಸ್ವಿನಿಯನ್ನೇ ಸೇರುತ್ತದೆ. ಇದೇ ನೀರನ್ನು ಹಲವು ಪ್ರದೇಶದವರು ಕುಡಿಯಲು ನೇರವಾಗಿ ಬಳಸುತ್ತಿದ್ದು ಆರೋಗ್ಯಕ್ಕೆ ಮಾರಕವಾಗುವ ಭೀತಿ ಎದುರಿಸುತ್ತಿದ್ದಾರೆ. ಜಲಚರಗಳ ಪ್ರಾಣಕ್ಕೂ ಕಂಟಕವಾಗಲಿದೆ. ನದಿಯಲ್ಲಿ ಪ್ಲಾಸ್ಟಿಕ್‌ ರಾಶಿ ಕಂದಡ್ಕ ಹೊಳೆಯಲ್ಲಿ ಪ್ಲಾಸ್ಟಿಕ್‌ ಬಾಟಿÉ,ತಟ್ಟೆ, ಕಸಕಡ್ಡಿ, ಕೊಚ್ಚೆ, ಬಟ್ಟೆ ಬರೆ ಎಲ್ಲವೂ ತುಂಬಿ ಕಲುಷಿತಗೊಂಡಿದೆ.ಈಗಾಗಲೇ ಹೊಳೆಯಲ್ಲಿದ್ದ ಜಲಚರಗಳೆಲ್ಲ ನಾಶವಾಗಿವೆ. ಈ ತ್ಯಾಜ್ಯ ಗುಂಡಿಯಲ್ಲಿನ ಕೊಳೆತ ಆಹಾರ, ನೀರನ್ನು ಸೇವಿಸಿದ ಪ್ರಾಣಿ-ಪಕ್ಷಿಗಳೂ ಸಾಯುವ ಸ್ಥಿತಿಯಲ್ಲಿವೆ.

ಹೊಳೆಗೆ ಮಣ್ಣು  !
ಇನ್ನೊಂದೆಡೆ ಎಲ್ಲೆಂದರಲ್ಲೇ ಕೆಂಪುಮಣ್ಣು ಹಾಗೂ ಮರದ ಬೊಡ್ಡೆ ಇನ್ನಿತರ ತ್ಯಾಜ್ಯಗಳನ್ನು ಲಾರಿಯಲ್ಲಿ ತುಂಬಿಕೊಂಡು ಕಂದಡ್ಕ ಹೊಳೆಗೆ ಸುರಿಯಲಾಗುತ್ತಿದೆ. ಹೀಗೆ ಮಣ್ಣು  ಸುರಿಯುತ್ತಾ ಬಂದರೆ ಮುಂದೆ ಮಳೆಗಾಲದಲ್ಲಿ ಹೊಳೆ ತುಂಬಿ ಪ್ರವಾಹ ಎದುರಾಗಬಹುದು ಎಂಬುದು ಸಾರ್ವಜನಿಕರ ಆತಂಕ.

ರೋಗಕ್ಕೆ ಆಹ್ವಾನ?
ಡೆಂಗ್ಯೂ, ಚಿಕುನ್‌ಗುನ್ಯಾ, ಜಾಂಡೀಸ್‌, ಒಂದಲ್ಲೊಂದು ರೋಗ ಸುಳ್ಯದಲ್ಲಿ ಕಾಣಿಸಿ ಕೊಳ್ಳುತ್ತಿದ್ದು, ಇದಕ್ಕೆಲ್ಲ ಮೂಲ ಈ ಕೊಳಚೆ ಗುಂಡಿಗಳೇ ಎನ್ನಲಾಗುತ್ತಿದೆ. ಇನ್ನೊಂದೆಡೆ ಮೀನು ಹಿಡಿಯಲು ವಿಷಕಾರಕ ಸಿಡಿ ಮದ್ದನ್ನು ನದಿ ನೀರಿಗೆ ಹಾಕುವ ತಂಡದ ಭೀತಿಯೂ ಇದೆ. 

ಕ್ರಮಕೈಗೊಳ್ಳುತ್ತೇವೆ
ನದಿ ಪಾತ್ರಕ್ಕೆ ಮಣ್ಣು ಸುರಿಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
– ಚಂದ್ರಕುಮಾರ್‌ 
ಮುಖ್ಯಾಧಿಕಾರಿ, ನಗರ ಪಂಚಾಯತ್‌ ಸುಳ್ಯ

ನೀರು ದುರ್ವಾಸನೆಯಿಂದ ಕೂಡಿದೆ 
ಕಂದಡ್ಕ ಹೊಳೆ ದಂಡೆಯಲ್ಲಿರುವ ಕೃಷಿಗೆ ಈ ನೀರನ್ನೇ ಬಳಸುತ್ತಿದ್ದಾರೆ. ಅಲ್ಲಲ್ಲಿ ಹೊಂಡದಲ್ಲಿರುವ ನೀರನ್ನು ಪಂಪ್‌ ಮೂಲಕ ತೋಟಕ್ಕೆ ಹಾಯಿಸುತ್ತಾರೆ. ಸ್ಪ್ರಿಂಕ್ಲರ್‌ ಮೂಲಕವೂ ಬಳಸಲಾಗುತ್ತಿದೆ. ಮಲಿನಗೊಂಡ ಈ ನೀರು ದುರ್ವಾಸನೆಯಿಂದ ಕೂಡಿದ್ದು, ತೋಟದಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ.
– ರಘುನಾಥ ಸುಳ್ಯ

– ಗಂಗಾಧರ ಮಟ್ಟಿ

ಟಾಪ್ ನ್ಯೂಸ್

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

ಸಂಸದ ಜಗದೀಶ್ ಶೆಟ್ಟರ್

Belagavi: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ‌: ಶೆಟ್ಟರ್

15-ankola

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

Hampankatta: ಪಾರ್ಕಿಂಗ್‌ ಸಮಸ್ಯೆಗೆ ‘ಮಲ್ಟಿ ಲೆವೆಲ್‌’ ಉತ್ತರ!

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.