‘ಸಮಾಜಮುಖಿ ಚಿಂತನೆಯೇ ಆದರ್ಶವಾಗಲಿ’
Team Udayavani, Apr 2, 2018, 10:23 AM IST
ಸಸಿಹಿತ್ಲು: ಸಂಘ-ಸಂಸ್ಥೆಗಳು ಸಮಾಜಮುಖಿ ಚಿಂತನೆಯ ಮೂಲಕ ಆದರ್ಶವಾದಲ್ಲಿ ಮಾತ್ರ ಎಲ್ಲರೂ ಗೌರವಿಸುತ್ತಾರೆ ಎಂದು ರಂಗಕರ್ಮಿ ಪರಮಾನಂದ ಸಾಲ್ಯಾನ್ ಸಸಿಹಿತ್ಲು ಹೇಳಿದರು. ಅವರು ಮುಕ್ಕದ ಮಿತ್ರಪಟ್ಣ ಯುವಕ ಮಂಡಲದ ದಶಮಾನೋತ್ಸವದ ಪ್ರಯುಕ್ತ ಕಡಲ ಕಿನಾರೆಯಲ್ಲಿ ಎ. 1ರಂದು ಗ್ರಾಮೋತ್ಸವ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.
ಕ್ರೀಡಾ ಸ್ಪರ್ಧೆಯನ್ನು ಮಾಜಿ ಕುಸ್ತಿಪಟು ಲಕ್ಷ್ಮಣ ಬಂಗೇರ ಮಿತ್ರಪಟ್ಣ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಟಿ. ಗಿರೀಶ್ ಶೆಟ್ಟಿ, ಗುರಿಕಾರರಾದ ಶಿವರಾಮ, ಮಂಗಳೂರು ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಅಹಲ್ಯಾ ಕಾಂಚನ್, ಮಿತ್ರಪಟ್ಣ ಮೊಗವೀರ ಸಂಘದ ಗೌ.ಪ್ರ. ಕಾರ್ಯದರ್ಶಿ ರಾಜೇಶ್ ಆರ್., ಶ್ರೀರಾಮ ಭಜನ ಮಂದಿರದ ಅಧ್ಯಕ್ಷ ಪ್ರದೀಪ್ ಕುಂದರ್, ಬಿಜೆಪಿಯ ರಮೇಶ್ ಅಮೀನ್, ಯುವಕ ಮಂಡಲದ ವಿವಿಧ ಪದಾಧಿಕಾರಿಗಳಾದ ಪುರುಷೋತ್ತಮ ಸುವರ್ಣ, ಶಶಿ ಕರ್ಕೇರ, ವಿಜಯ ಪುತ್ರನ್, ನಿತ್ಯಾನಂದ ಸುವರ್ಣ, ಪದ್ಮನಾಭ ಸುವರ್ಣ, ರವೀಂದ್ರ ಕರ್ಕೇರ, ಶ್ರೀರಾಮ ಭಜನ ಮಂದಿರದ ಅರ್ಚಕ ಕಿಶೋರ್ಕುಮಾರ್, ಮಹಿಳಾ ಮಂಡಲದ ಅಧ್ಯಕ್ಷೆ ಕವಿತಾ ಶರತ್ ಉಪಸ್ಥಿತರಿದ್ದರು. ಯುವಕ ಮಂಡಲದ ಅಧ್ಯಕ್ಷ ಅರುಣ್ಕುಮಾರ್ ಸ್ವಾಗತಿಸಿದರು, ಅಮೃತ ವರ್ಷಿಣಿಯ ಸಂಚಾಲಕ ಸುನೀಲ್ ಸಾಲ್ಯಾನ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Israel ಸರ್ಜಿಕಲ್ ಸ್ಟ್ರೈಕ್: ಹೆಜ್ಬುಲ್ಲಾ ಮುಖ್ಯಸ್ಥನ ಅಂತ್ಯಕ್ಕೆ 80 ಟನ್ ಬಾಂಬ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.