ಸೌರ ಮೇಲ್ಛಾವಣಿ ಘಟಕ: ವೆಚ್ಚ ಹೊರೆ ಅನುಷ್ಠಾನಕ್ಕೆ ಅಡ್ಡಿ..!


Team Udayavani, Feb 12, 2018, 10:56 AM IST

12-Feb-5.jpg

ಸುಳ್ಯ : ನೀವೇ ವಿದ್ಯುತ್‌ ಉತ್ಪಾದಿಸಿ, ಹೆಚ್ಚುವರಿಯಾದುದನ್ನು ಮಾರಿ ಆದಾಯ ಗಳಿಸಿ ಎನ್ನುವ ಸೌರಶಕ್ತಿ ಮೇಲ್ಛಾವಣಿ ಘಟಕ ಯೋಜನೆಗೆ ಹೂಡಿಕೆಯೇ ಗ್ರಾಹಕರಿಗೆ ಹೊರೆ ಎನಿಸಿದೆ.

ಸೌರಶಕ್ತಿ ಮೇಲ್ಛಾವಣಿ ಘಟಕ ರಾಜ್ಯ ಸೌರ ನೀತಿ ಅನ್ವಯ ವಸತಿ, ವಾಣಿಜ್ಯ, ಶಿಕ್ಷಣ, ಕೈಗಾರಿಕಾ ಸಂಸ್ಥೆಗಳು ತಮ್ಮ ಸ್ಥಾವರದ ಮೇಲ್ಛಾವಣಿ ಮೇಲೆ ಗ್ರಿಡ್‌ ಸಂಪರ್ಕ ಹೊಂದಿದ ಸೌರಶಕ್ತಿ ಘಟಕ ನಿರ್ಮಿಸಿ, ವಿದ್ಯುತ್‌ ಉತ್ಪಾದಿಸುವ ಯೋಜನೆ ಎರಡು ವರ್ಷದಿಂದ ಜಾರಿಯಲ್ಲಿದೆ.

ಅನುಷ್ಠಾನಕ್ಕೆ ಹಿಂದೇಟು
ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ಘಟಕ ಅಳವಡಿಕೆಗೆ ಜನರು ತಳೆದಿರುವ ಆಸಕ್ತಿ ಕಡಿಮೆ. ಮೆಸ್ಕಾಂ ತನ್ನ ಕಚೇರಿಗಳಲ್ಲಿ ಹಾಗೂ ಕೆಲ ಖಾಸಗಿ ಮಳಿಗೆಗಳಲ್ಲಿ ಇದನ್ನು ಜಾರಿಗೊಳಿಸಿದ್ದರೂ, ಗೃಹ ಬಳಕೆಯ ಉದಾಹರಣೆ ಇಲ್ಲ. ಪುತ್ತೂರಿನಲ್ಲಿ 15 ಘಟಕ ನಿರ್ಮಾಣ ಆಗಿದ್ದರೆ, ಸುಳ್ಯದಲ್ಲಿ ಈ ಯೋಜನೆಗೆ ಇನ್ನೂ ಅರ್ಜಿ ಸಲ್ಲಿಕೆ ಆಗಿಲ್ಲ.

ಮೆಸ್ಕಾಂ ನ ಮಾಹಿತಿ ಅನ್ವಯ ಈ ತನಕ ಮನೆ ಬಳಕೆಗೆಂದು ಘಟಕ ನಿರ್ಮಾಣಕ್ಕೆ ಬೇಡಿಕೆ ಬಂದಿಲ್ಲ. ವಿಚಾರಿಸುವವರ ಸಂಖ್ಯೆ ಅಧಿಕ ಇದ್ದರೂ, ದುಬಾರಿ ಮೊತ್ತದ ಹೂಡಿಕೆಯ ಹಿನ್ನೆಲೆಯಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಆಸಕ್ತಿ ಇದ್ದರೂ ಅನುಷ್ಠಾನಕ್ಕೆ ಅಡ್ಡಿ ಆಗುತ್ತಿದೆ. ಸರಕಾರ ಶೇ.15 ರಷ್ಟು ಸಬ್ಸಿಡಿ ಪ್ರಮಾಣವನ್ನು ಶೇ.60 ಕ್ಕೆ ಏರಿಸಿದರೆ ಯೋಜನೆಗೆ ಬೇಡಿಕೆ ಬರಬಹುದೆಂಬ ಅಭಿಪ್ರಾಯವಿದೆ.

ಸ್ಥಾಪನೆ ಹೇಗೆ
ಆಸಕ್ತ ಗ್ರಾಹಕರು ಮೆಸ್ಕಾಂ ಅಂತರ್‌ ಜಾಲದಿಂದ ಅಥವಾ ಮೆಸ್ಕಾಂ ಕಚೇರಿಯಿಂದ ಅರ್ಜಿ ಪಡೆದು ಸಲ್ಲಿಸಬೇಕು. 5 ಕಿ.ವ್ಯಾ ಸಾಮರ್ಥ್ಯದ ತನಕ ಸೌರಶಕ್ತಿ ಘಟಕ ನಿರ್ಮಾಣಕ್ಕೆ 1,500 ಸಾವಿರ ಶುಲ್ಕ, 5 ಕಿ.ವ್ಯಾ ಕ್ಕಿಂತ ಹೆಚ್ಚು, 50 ಕಿ.ವ್ಯಾ ಕ್ಕಿಂತ ಕಡಿಮೆ ಆಗಿದ್ದರೆ 3000 ರೂ, 50 ಕಿ.ವ್ಯಾ ಕ್ಕಿಂತ ಹೆಚ್ಚು, 500 ಕಿ.ವ್ಯಾ ಕ್ಕಿಂತ ಕಡಿಮೆ ಆಗಿದ್ದರೆ 7000 ರೂ. ನೋಂದಣಿ ಮತ್ತು ಮೂಲ ಸೌಕರ್ಯ ಶುಲ್ಕ ಪಾವತಿಸಬೇಕಿದೆ.

ಏನಿದು ಸೌರ ಘಟಕ
ಇಲ್ಲಿ ಸೌರ ಫಲಕ ಸೂರ್ಯನ ಕಿರಣಗಳನ್ನು ಹೀರಿ ತನ್ನಲ್ಲಿದ್ದ ಸೌರ ಸೆಲ್‌ಗ‌ಳ ಮೂಲಕ ವಿದ್ಯುತ್‌ ಶಕ್ತಿಯನ್ನು ಉತ್ಪಾದಿಸಲಿದೆ. ಸೌರ ಫಲಕದಿಂದ ಉತ್ಪಾದನೆಗೊಂಡ ಡಿಸಿ(ಡೈರೆಕ್ಟ್ ಕರೆಂಟ್‌) ವಿದ್ಯುತ್‌ ಶಕ್ತಿಯನ್ನು ಎಸಿ (ಅಲ್ವ್ ರ್ ನೇಟಿಂಗ್ ) ಆಗಿ ಬದಲಾಯಿಸಿ, ಬಳಕೆಗೆ ಸಹಕರಿಸುತ್ತದೆ.

ಸಹಾಯಧನ ಪಡೆಯದೇ ನಿರ್ಮಿಸಿದ ಘಟಕದಿಂದ ಪೂರೈಸಿದ ವಿದ್ಯುತ್‌ ನ ಪ್ರತಿ ಯೂನಿಟ್‌ಗೆ 9.56 ರೂ, ಸಹಾಯಧನ ಪಡೆದವರ ಘಟಕಕ್ಕೆ 7.20 ರೂ. ಪಾವತಿಸಲಾಗುತ್ತದೆ. ವಿದ್ಯುತ್‌ ಪೂರೈಕೆ ಯ ನಿವ್ವಳ ಮಾಪಕವಾದ ಬಳಿಕ 30 ದಿನದೊಳಗೆ ಗ್ರಾಹಕರ ಖಾತೆಗೆ ಹಣ ಜಮೆಯಾಗಲಿದೆ.

ಖರ್ಚು ವೆಚ್ಚ
1 ಕಿ.ವ್ಯಾ ಸಾಮರ್ಥ್ಯದ ಸೌರಶಕ್ತಿ ಮೇಲ್ಛಾವಣಿ ಘಟಕಕ್ಕೆ ಅಂದಾಜು 70 ರಿಂದ 1 ಲಕ್ಷ ರೂ. ಖರ್ಚು ತಗಲುತ್ತದೆ. ಇದಕ್ಕೆ ಶೇ.15 ರಷ್ಟು ಸಹಾಯಧನ ದೊರೆಯುತ್ತದೆ. 1.ಕಿ.ವ್ಯಾ ಸಾಮರ್ಥ್ಯದ ಘಟಕ ಅಳವಡಿಸಲು 100 ಚ.ಅ
ವಿಸ್ತೀರ್ಣದ ನೆರಳು ರಹಿತ ಮೇಲ್ಛಾವಣಿಯು ಅವಶ್ಯ. ಇದರಿಂದ ದಿನವೊಂದಕ್ಕೆ ಸರಾಸರಿ 4 ಯೂನಿಟ್‌ ವಿದ್ಯುತ್‌ ಉತ್ಪಾದನೆಗೊಳ್ಳುವ ಸಾಧ್ಯತೆ ಇದೆ.

ಬಂಡವಾಳ ಬೇಕು
ನನ್ನ ಕಚೇರಿಯ ಮೇಲ್ಛಾವಣಿಯಲ್ಲಿ 3 ಕಿ.ವ್ಯಾ ಸಾಮರ್ಥ್ಯದ ಘಟಕ ಅಳವಡಿಸಿದ್ದೇನೆ. ಮೊದಲು ವಿದ್ಯುತ್‌ ಬಿಲ್‌ 2,500 ರೂ. ಬರುತಿತ್ತು. ಈಗ 500 ರೂ.ಬಿಲ್‌ ಬರುತ್ತಿದೆ. 2000 ರೂ. ಘಟಕದಿಂದ ಉತ್ಪಾದನೆ ಆಗುವ ವಿದ್ಯುತ್‌ನಿಂದ ಜಮೆ ಆಗುತ್ತದೆ. ಆದಾಯ, ಬಂಡವಾಳದ ನೆಲೆಯಲ್ಲಿ ಯೋಜನೆ ಬಹಳ ಲಾಭದಾಯಕ ಎನಿಸದಿದ್ದರೂ, ಪರಿಸರಕ್ಕೆ ಕೊಡುಗೆ ಸಲ್ಲಿಸಿದಂತಾಗುತ್ತದೆ.
– ಡಾ| ಗಣೇಶ್‌ ಪ್ರಸಾದ್‌
ಮುದ್ರಾಜೆ
ಘಟಕ ಅಳವಡಿಸಿದವರು

ಬೇಡಿಕೆ ಇದೆ
ಈಗಾಗಲೇ ಹದಿನೈದಕ್ಕೂ ಅಧಿಕ ಕಡೆ ಸೌರ ಮೇಲ್ಛಾವಣಿ ಘಟಕವನ್ನು ನಿರ್ಮಿಸಲಾಗಿದೆ. ಮೆಸ್ಕಾಂ ತನ್ನ ಸಬ್‌ ಸ್ಟೇಷನ್‌ ವ್ಯಾಪ್ತಿಯ ಕಚೇರಿಗಳಲ್ಲಿಯೂ ಅಳವಡಿಸಿದೆ. ಮೆಸ್ಕಾಂ ಗ್ರಿಡ್‌ನಿಂದ ಪಡೆದ ವಿದ್ಯುತ್‌ಗಿಂತ ಹೆಚ್ಚುವರಿಯಾಗಿ ಮೆಸ್ಕಾಂ ಗ್ರಿಡ್‌ಗೆ ಪೂರೈಸಿದ ಸೌರ ವಿದ್ಯುತ್‌ಗೆ ಹಣ ಪಾವತಿಸಲಾಗುತ್ತದೆ.
– ನಾರಾಯಣ ಪೂಜಾರಿ
ಸಹಾಯಕ ಕಾರ್ಯನಿರ್ವಾಹಕ
ಮೆಸ್ಕಾಂ ಕಚೇರಿ, ಪುತ್ತೂರು

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

supreme-Court

Citizenship: ವಲಸಿಗರಿಗೆ ಪೌರತ್ವ ನೀಡುವ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್‌

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ

Shivamogga:7 ಶಂಕಿತ ಬಾಂಗ್ಲಾದೇಶಿಯರ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ

16

Belthangady: ಸಾರಿಗೆ ಬಸ್‌ ಢಿಕ್ಕಿ: ಪಾದಚಾರಿ ಗಂಭೀರ

17

Belthangady: ಕಾಶಿಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

5

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

4

Puttur: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

rathan-tata

Mumbai: ಅರಬಿ ಸಮುದ್ರದಲ್ಲಿ ರತನ್‌ ಟಾಟಾ ಚಿತಾ ಭಸ್ಮ ವಿಸರ್ಜನೆ

Salmana

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

Priyanka-VA

By Poll: ಪ್ರಿಯಾಂಕಾ ವಾದ್ರಾ ವಿರುದ್ಧ ವಯನಾಡಿನಲ್ಲಿ ಸಿಪಿಐ ಅಭ್ಯರ್ಥಿ ಕಣಕ್ಕೆ

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.