ಕೆಲವು ತರಕಾರಿ ತುಟ್ಟಿ; ಮಲ್ಲಿಗೆ ಹೂವು ದುಬಾರಿ


Team Udayavani, Oct 14, 2018, 11:08 AM IST

14-october-4.gif

ಮಹಾನಗರ: ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳು ಮತ್ತು ಮಲ್ಲಿಗೆ ಹೂವು ತುಟ್ಟಿಯಾಗಿವೆ; ಕೆಲವೊಂದು ತರಕಾರಿಗಳ ತೀವ್ರ ಅಭಾವ ಕಂಡು ಬಂದಿದೆ. ನವರಾತ್ರಿಯ 9 ದಿನಗಳಲ್ಲಿ ತರಕಾರಿಗಳನ್ನು ಜಾಸ್ತಿ ಬಳಸುತ್ತಿದ್ದು, ಮಾಂಸಾಹಾರವನ್ನು ಕಡಿಮೆ ಬಳಕೆ ಮಾಡುತ್ತಿದ್ದಾರೆ. ಮನೆಗಳಲ್ಲಿ ಮಾತ್ರವಲ್ಲ, ಕೆಲವು ದೇವಸ್ಥಾನಗಳಲ್ಲಿಯೂ ಈಗ ಮಧ್ಯಾಹ್ನದ ಊಟ ನೀಡಲಾಗುತ್ತಿದೆ. ಹಾಗಾಗಿ ತರಕಾರಿಗೆ ಬೇಡಿಕೆ ಜಾಸ್ತಿ.

ಕೆಲವು ತರಕಾರಿಗಳ ಉತ್ಪಾದನೆಯೂ ಕಡಿಮೆ ಆಗಿರುವುದು ಹಾಗೂ ದಸರಾ ಪ್ರಯುಕ್ತ ಬಯಲು ಸೀಮೆಯ ತರಕಾರಿಗಳಲ್ಲಿ ಅಧಿಕ ಪಾಲು ಮೈಸೂರಿಗೆ ರವಾನೆ ಆಗುತ್ತಿರುವುದರಿಂದ ನಗರದಲ್ಲಿ ಕೆಲವು ತರಕಾರಿಗಳ ಕೊರತೆ ಹಾಗೂ ಬೆಲೆ ಏರಿಕೆ ಆಗಲು ಕಾರಣವಾಗಿದೆ ಎಂದು ಸೆಂಟ್ರಲ್‌ ಮಾರ್ಕೆಟ್‌ ಮೂಲಗಳು ತಿಳಿಸಿವೆ.

200ರ ಗಡಿ ದಾಟಿದ ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು ಬೆಲೆ ಗಗನಕ್ಕೇರಿದ್ದು, 200 ರೂ. ಗಡಿ ದಾಟಿದೆ. ನುಗ್ಗೆ ಬೆಲೆ 100 ರೂ. ಗಳಿಗೆ ತಲುಪಿದೆ. ಸ್ಥಳೀಯ ಬೆಂಡೆ 140 ರೂ., ತೊಂಡೆ 100 ರೂ., ಮುಳ್ಳು ಸೌತೆ 100 ರೂ. ಬೀನ್ಸ್‌ 60 ರೂ., ಹಾಗಲ ಕಾಯಿ 60 ರೂ., ಕಾಲಿಫ್ಲವರ್‌ 60 ರೂ., ಅಸಲಂಡೆ 90 ರೂ., ಹರಿವೆ ದಂಟು 50 ರೂ. ಗಳಿಗೆ ತಲುಪಿದೆ.

ದುಬಾರಿ ತರಕಾರಿಗಳನ್ನು ಖರೀದಿ ಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಮನೆಗಳಲ್ಲಿ ನವರಾತ್ರಿ ಆಚರಿಸುವವರು ಮುಖ್ಯವಾಗಿ ಹೊಸ ತೆನೆ ಹಬ್ಬ ಆಚರಣೆ ಮಾಡುವವರು ಮಾತ್ರ ತುರ್ತು ಆವಶ್ಯಕತೆಯ ಹಿನ್ನೆಲೆಯಲ್ಲಿ ಖರೀದಿ ಮಾಡುತ್ತಾರೆ ಎನ್ನುತ್ತಾರೆ ಸೆಂಟ್ರಲ್‌ ಮಾರ್ಕೆಟ್‌ನ ವ್ಯಾಪಾರಿ ಡೇವಿಡ್‌ ಡಿ’ ಸೋಜಾ. ಗುಲಾಬಿ, ಅನಂತವೃಷ್ಟಿ, ಅರಳಿ ಮಾಲೆ, ಸೇವಂತಿಗೆ, ಕನಕಾಂಬರ (ಅಬ್ಬಲಿಗೆ), ಝೀನಿಯಾ, ತಾವರೆ, ಸಂಪಿಗೆ ಇತ್ಯಾದಿ ಹೂವುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. 

ಮಲ್ಲಿಗೆ ದುಬಾರಿ
ನವರಾತ್ರಿ ಸಂದರ್ಭದಲ್ಲಿ ಶಾರದಾ ದೇವಿಯನ್ನು ಮಲ್ಲಿಗೆ ಅಥವಾ ಜಾಜಿ ಹೂವಿನಿಂದ ಅಲಂಕರಿಸಲಾಗುತ್ತಿದೆ. ಹಾಗಾಗಿ ಮಲ್ಲಿಗೆ ಹೂವು ದುಬಾರಿಯಾಗಿದೆ. ಮಲ್ಲಿಗೆ ಹೂವು ಒಂದು ಅಟ್ಟಿಗೆ 1,200 ರೂ. ಗಳಷ್ಟಿದೆ. ಆದರೆ ಕೊರತೆ ಇಲ್ಲ ಎಂದು ಕಾರ್‌ಸ್ಟ್ರೀಟ್‌ನ ಹೂವು ಮಾರುಕಟ್ಟೆಯ ವ್ಯಾಪಾರಿ ಸುರೇಶ್‌ ಪೈ ತಿಳಿಸಿದ್ದಾರೆ. 

ಟಾಪ್ ನ್ಯೂಸ್

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Fraud Case ಷೇರು ಟ್ರೇಡಿಂಗ್‌ ಹೆಸರಿನಲ್ಲಿ 74.18 ಲಕ್ಷ ರೂ. ವಂಚನೆ

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು

Kundapura ಮುಳ್ಳಿಕಟ್ಟೆ: ಸಕ್ಕರೆ ಲಾರಿ ಪಲ್ಟಿ; ಚಾಲಕ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

iOS 18 ನಲ್ಲಿ ಕನ್ನಡ ಸೇರಿ, ಭಾರತೀಯ ಭಾಷೆಗಳ ಬೆಂಬಲಕ್ಕೆ ಆದ್ಯತೆ

Hunasuru

Dengue: ಹುಣಸೂರು ಆಸ್ಪತ್ರೆಯಲ್ಲಿ 10 ಹಾಸಿಗೆಯ ಪ್ರತ್ಯೇಕ ವಾರ್ಡ್ ಮೀಸಲು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Kinnigoli ಬಳ್ಕುಂಜೆ ಮನೆಯಲ್ಲಿ ಚಿನ್ನಾಭರಣ ಕಳವು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Mangaluru ದರೋಡೆ ಪ್ರಕರಣ: 6 ಆರೋಪಿಗಳು ಪೊಲೀಸ್‌ ಕಸ್ಟಡಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.