![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jan 11, 2024, 7:00 AM IST
ಮಂಗಳೂರು: ಪ್ರಸ್ತುತ ಮಂಗಳೂರು ಜಂಕ್ಷನ್ಗಷ್ಟೇ ಬರುವ ಮೂಲಕ ಮಂಗಳೂರಿಗರಿಗೆ ಅಷ್ಟಾಗಿ ಪ್ರಯೋಜನವಾಗದಿದ್ದ ವಿಜಯಪುರ- ಮಂಗಳೂರು ರೈಲನ್ನು(ನಂ.07377/78) ಶೀಘ್ರವೇ ರೈಲ್ವೇ ಇಲಾಖೆ ಮಂಗಳೂರು ಸೆಂಟ್ರಲ್ವರೆಗೂ ವಿಸ್ತರಣೆ ಮಾಡುವ ಸಾಧ್ಯತೆ ಕಂಡುಬಂದಿದೆ.
ಈ ಮಹತ್ವದ ಪ್ರಸ್ತಾವನೆಗೆ ನೈಋತ್ಯ ರೈಲ್ವೇ ಹಾಗೂ ದಕ್ಷಿಣ ರೈಲ್ವೇ ಎರಡೂ ಅನುಮೋದನೆಯಿತ್ತಿವೆ. ಅಷ್ಟೇ ಅಲ್ಲ, ಲಭ್ಯ ಮಾಹಿತಿ ಪ್ರಕಾರ ವಿಜಯಪುರ ಮಂಗಳೂರು ರೈಲಿನ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಲಿದ್ದು ಮಂಗಳೂರಿಗೆ ವಿಜಯಪುರದಿಂದ ಬರುವವರಿಗೆ ಅನುಕೂಲವಾಗಲಿದೆ.
ಪ್ರಸ್ತುತ ವಿಜಯಪುರದಿಂದ ಸಂಜೆ 6.35ಕ್ಕೆ ಹೊರಡುವ ರೈಲು ಪ್ರಸ್ತಾವಿತ ಪರಿಷ್ಕೃತ ವೇಳಾಪಟ್ಟಿಯಂತೆ ಸಂಜೆ 4ಕ್ಕೆ ಹೊರಡಲಿದೆ. ಈಗ ಮಂಗಳೂರು ಜಂಕ್ಷನ್ಗೆ ಮಧ್ಯಾಹ್ನ 12.30ಕ್ಕೆ ತಲುಪುತ್ತಿರುವ ಈ ರೈಲು ಮುಂದೆ 9.30ಕ್ಕೇ ಆಗಮಿಸಲಿದೆ, 9.50ಕ್ಕೆ ಸೆಂಟ್ರಲ್ ತಲುಪಲಿದೆ.
ಆದರೆ ಮಂಗಳೂರು-ವಿಜಯಪುರ ರೈಲಿನಲ್ಲಿ ಬದಲಾವಣೆ ಪ್ರಸ್ತಾವಿಸಿಲ್ಲ. ಸೆಂಟ್ರಲ್ನಿಂದ 2.35ಕ್ಕೆ ಹೊರಟು ಜಂಕ್ಷನ್ಗೆ ಬಂದು ಅಲ್ಲಿಂದ ಈಗಿರುವಂತೆಯೇ 2.50ಕ್ಕೆ ಹೊರಡಲಿದೆ. ಪ್ರಸ್ತುತ ರೈಲ್ವೇ ಮಂಡಳಿಯ ಅವಗಾಹನೆ, ಪರಿಶೀಲನೆ ಹಾಗೂ ಅಂತಿಮ ಅನುಮೋದನೆಯನ್ನು ನಿರೀಕ್ಷಿಸಲಾಗುತ್ತಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.