ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಜಾಗ ಅತಿಕ್ರಮಣ ?


Team Udayavani, Oct 29, 2017, 4:42 PM IST

29-Mng–17.jpg

ಸುಳ್ಯ: ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಈ ಹಿಂದೆ 24 ಎಕ್ರೆ ಜಾಗ ಮಂಜೂರಾಗಿದ್ದು, ಪ್ರಸ್ತುತ 11.07 ಎಕ್ರೆ ಮಾತ್ರ ಎನ್ನಲಾಗುತ್ತಿದೆ. ಈ ಕುರಿತಾದ ಪರ- ವಿರೋಧ ಅಭಿಪ್ರಾಯಗಳು ಗರಿಗೆದರಿ ಕೊಂಡಿದ್ದು, ಒತ್ತುವರಿ ಬಗೆಗೆ ಹೋರಾಟ ಶುರುವಾಗುವ ಲಕ್ಷಣ ಕಂಡುಬರುತ್ತಿದೆ.

ಸುಳ್ಯ ತಾ.ಪಂ. ಸಭಾಂಗಣದಲ್ಲಿ ಜರಗಿದ ಪ.ಜಾತಿ ಮತ್ತು ಪ. ಪಂಗಡದ ಕುಂದು -ಕೊರತೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿತು. ಶನಿವಾರ ನಡೆದ ಸಭೆಯಲ್ಲಿ ಪಾಲನ ವರದಿ ಸಂದರ್ಭ ಪ್ರಾಂಶುಪಾಲರ ಗೈರಿನಲ್ಲಿ ದಲಿತ ಮುಖಂಡ ನಂದರಾಜ್‌ ಸಂಕೇಶ್‌ ವಿಷಯ ಪ್ರಸ್ತಾಪಿಸಿದರು.

ಕಾಲೇಜು ಫಲಿತಾಂಶ ಉತ್ತಮವಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕೊಠಡಿ ಕೊರತೆಯಿದೆ. ಕಾಲೇಜಿಗೆಂದು 24 ಎಕ್ರೆ ಜಾಗ ಮಂಜೂರಾಗಿದ್ದರೂ ಅದರಲ್ಲಿ ಈಗ 14 ಎಕ್ರೆ ಮಾತ್ರ ಶಾಲಾಡಳಿತದ ಸುಪರ್ದಿಯಲ್ಲಿದೆ. ಉಳಿದ ಜಾಗ ಅತಿಕ್ರಮಣವಾಗಿದೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸರ್ವೆ ನಡೆಸಿ ಗಡಿಗುರುತು ಮಾಡಿಕೊಳ್ಳುವಂತೆ ಆಗ್ರಹಿಸಿದ್ದರು. ಸಭೆಗೆ ಪ್ರಾಂಶುಪಾಲರನ್ನು ಕರೆಸುವಂತೆ ದಲಿತ ಮುಖಂಡರು ಮನವಿ ಮಾಡಿದರು. ಬಳಿಕ ಆಗಮಿಸಿದ ಪ್ರಾಂಶುಪಾಲರು ಮಾಹಿತಿ ನೀಡಿದರು. ಒತ್ತುವರಿ ತೆರವಿಗೆ ನೋಟಿಸ್‌ ಜಾರಿ ಮಾಡಬೇಕು. ಅಕ್ರಮ ಜಾಗದ ಆರ್‌ಟಿಸಿ ರದ್ದತಿಗೆ ಉಪವಿಭಾಗಾಕಾಧಿರಿಗಳಿಗೆ ಹಕ್ಕು ಇದ್ದು, ಅವರಿಗೆ ಪತ್ರ ಬರೆಯಿರಿ ಎಂದು ಹೇಳಿದ ತಹಶೀಲ್ದಾರ್‌, ಮುಂದಿನ ಬಾರಿ ಶಾಲಾ ಜಾಗ, ಒತ್ತುವರಿ ಮೊದಲಾದ ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಆಗಮಿಸುವಂತೆ ಸೂಚಿಸಿದರು.

ಆರ್‌ಟಿಸಿ ಪ್ರಕಾರ 1.76 ಎಕ್ರೆ
ಶಾಲಾ ದಾಖಲಾತಿ ಪ್ರಕಾರ ಒಟ್ಟು 10.31 ಸೆಂಟ್ಸ್‌ ಇದೆ. ಆರ್‌ಟಿಸಿ ಪ್ರಕಾರ ಸ.ನಂ. 329 ಮತ್ತು 327 ರಲ್ಲಿ 1.10
ಮತ್ತು 66 ಸೆಂಟ್ಸ್‌ ಸೇರಿದಂತೆ ಒಟ್ಟು 1.76 ಎಕ್ರೆ ಜಾಗ ಒತ್ತುವರಿಯಾಗಿದೆ. ಸ.ನಂ. 327ರಲ್ಲಿ ಎರಡು ಆರ್‌ಟಿಸಿ
ಇವೆ. ಇದರಲ್ಲಿ 66 ಸೆಂಟ್ಸ್‌ ಹಾಗೂ 329ರಲ್ಲಿ 7.47 ಸೆಂಟ್ಸ್‌ ಇದೆ. ಈ ಪೈಕಿ 1.10 ಎಕ್ರೆ ಒತ್ತುವರಿಯಾಗಿದೆ. ಈ ಆರ್‌ಟಿಸಿಯಲ್ಲಿ ನಾಲ್ವರ ಹೆಸರು ಇರುವುದನ್ನು ಉಲ್ಲೇಖೀಸಿ ಪ್ರಾಂಶುಪಾಲರಾದ ಚಿದಾನಂದ ಅವರು ಸಭೆಯಲ್ಲಿ ಮಾಹಿತಿ ನೀಡಿದರು.

ಕ್ರಮ ಕೈಗೊಳ್ಳಿ
ಶಾಲೆಯ ದಾಖಲೆ ಪ್ರಕಾರ ಪ್ರಸ್ತುತ ಒಟ್ಟು 10.31 ಎಕ್ರೆ ಜಾಗವಿದೆ. ಈ ಪೈಕಿ ಎರಡೂ ಆರ್‌ಟಿಸಿಯಲ್ಲಿರುವಂತೆ
ಒಟ್ಟು 1.76 ಎಕ್ರೆ ಒತ್ತುವರಿಯಾಗಿರುವುದು ಕಾಣಿಸುತ್ತಿದೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸರಕಾರ ಕ್ರಮ ಕೈಗೊಂಡು ಸಂರಕ್ಷಿಸಬೇಕು.
ಚಿದಾನಂದ ಎಂ.ಎಸ್‌.
   ಸುಳ್ಯ ಸ.ಪ.ಪೂ. ಕಾಲೇಜು ಪ್ರಾಂಶುಪಾಲ

24 ಎಕ್ರೆ ಜಾಗವಿದೆ
ಸಾಮಾಜಿಕವಾದ ಉದ್ದೇಶದಿಂದ ಶಾಲಾ ಜಾಗದ ಬಗ್ಗೆ ಧ್ವನಿ ಎತ್ತಿದ್ದೇನೆ. ಅಂದಾಜು 24 ಎಕ್ರೆ ಜಾಗವಿದ್ದು, ಈ ಪೈಕಿ 11 ಎಕ್ರೆ ಮಾತ್ರ ಇದೆ ಎಂದು ಶಾಲಾಡಳಿತ ಹೇಳುತ್ತಿದೆ.
– ನಂದರಾಜ ಸಂಕೇಶ, ದಲಿತ ಮುಖಂಡ

ಟಾಪ್ ನ್ಯೂಸ್

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

Exam

PDA; ನಾಳೆ ಮುಖ್ಯ ಪರೀಕ್ಷೆ

PM Modi

70+ Ayushman; ಅ. 29ರಂದು ಮೋದಿ ಚಾಲನೆ

Haveri: ಸಚಿವ ಜಮೀರ್‌ ಅಹ್ಮದ್‌ ಕಾರಿನ ಮೇಲೆ ಖಾದ್ರಿ ಬೆಂಬಲಿಗರ ಕಲ್ಲು ತೂರಾಟ

Haveri: ಸಚಿವ ಜಮೀರ್‌ ಅಹ್ಮದ್‌ ಕಾರಿನ ಮೇಲೆ ಖಾದ್ರಿ ಬೆಂಬಲಿಗರ ಕಲ್ಲು ತೂರಾಟ

ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ: ರೇವಣ್ಣ

H.D. Revanna: ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ

BJP: ಹೈಕಮಾಂಡ್‌ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ

BJP: ಹೈಕಮಾಂಡ್‌ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ

H. D. Kumaraswamy: ಇದು ಕಾರ್ಯಕರ್ತರ ಚುನಾವಣೆ, ನಿಖಿಲ್‌ ಗೆಲ್ಲುತ್ತಾರೆ

H. D. Kumaraswamy: ಇದು ಕಾರ್ಯಕರ್ತರ ಚುನಾವಣೆ, ನಿಖಿಲ್‌ ಗೆಲ್ಲುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

9

Sullia ಆಸ್ಪತ್ರೆ ಶೆಡ್‌ನ‌ಲ್ಲಿ ನಿಲ್ಲುತ್ತಿದ್ದ 108 ಆ್ಯಂಬುಲೆನ್ಸ್‌ ಈಗ ರಸ್ತೆ ಬದಿಗೆ!

5(1)

Uppinangady-ನೆಲ್ಯಾಡಿ ಹೆದ್ದಾರಿ ಹೊಂಡಮಯ, ಧೂಳುಮಯ!

WhatsApp Image 2024-10-25 at 02.16.30

Aranthodu: ಕಾಡಾನೆಗಳಿಂದ ಕೃಷಿಗೆ ಹಾನಿ

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

BY-Election: ನಿಖಿಲ್‌ ಕುಮಾರಸ್ವಾಮಿಗೆ ಟಿಕೆಟ್‌ ಕೊಡಿಸಲು ಚದುರಂಗದಾಟ: ಡಿ.ಕೆ. ಸುರೇಶ್‌

Exam

PDA; ನಾಳೆ ಮುಖ್ಯ ಪರೀಕ್ಷೆ

PM Modi

70+ Ayushman; ಅ. 29ರಂದು ಮೋದಿ ಚಾಲನೆ

Haveri: ಸಚಿವ ಜಮೀರ್‌ ಅಹ್ಮದ್‌ ಕಾರಿನ ಮೇಲೆ ಖಾದ್ರಿ ಬೆಂಬಲಿಗರ ಕಲ್ಲು ತೂರಾಟ

Haveri: ಸಚಿವ ಜಮೀರ್‌ ಅಹ್ಮದ್‌ ಕಾರಿನ ಮೇಲೆ ಖಾದ್ರಿ ಬೆಂಬಲಿಗರ ಕಲ್ಲು ತೂರಾಟ

ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ: ರೇವಣ್ಣ

H.D. Revanna: ನಾನು ಹುಷಾರಾದರೆ ನಿಖಿಲ್‌ ಪರ ಪ್ರಚಾರಕ್ಕೆ ಹೋಗುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.