ಮದ್ಯದಂಗಡಿ ವಿರುದ್ಧ  ಪ್ರತಿಭಟನೆಗೆ ಬೆಂಬಲ, ನಿರ್ಣಯ


Team Udayavani, Jul 24, 2017, 8:05 AM IST

nirnaya.jpg

ನೆಲ್ಯಾಡಿ : ನೆಲ್ಯಾಡಿ  ಗ್ರಾ.ಪಂ. ಮಹಿಳಾ ಗ್ರಾಮಸಭೆಯು ಗ್ರಾ.ಪಂ. ಉಪಾಧ್ಯಕ್ಷೆ  ಉಮಾವತಿ ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ  ನಡೆಯಿತು.

ಸಭೆಯಲ್ಲಿ  ವಿಷಯ ಪ್ರಸ್ತಾವಿಸಿದ ಗ್ರಾಮ ಸ್ಥೆಯೋರ್ವರು ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮದ್ಯದಂಗಡಿಗಳು ಬಂದ್‌ ಆಗಿವೆ. ಆದರೆ ನೆಲ್ಯಾಡಿಯಲ್ಲಿನ ಮದ್ಯದಂಗಡಿಯೊಂದು ಅಡ್ಡದಾರಿ ಮಾಡಿಕೊಂಡು ಹಿಂಬಾಗಿಲ ಮೂಲಕ ಕಾರ್ಯಾಚರಿಸುತ್ತಿದೆ. ಇದರ ವಿರುದ್ಧ  ಇಲಾ ಖೆಗಳಿಗೆ ಮನವಿ ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಡ್ಡದಾರಿ ಮೂಲಕ ಮದ್ಯದಂಗಡಿಗೆ ಮದ್ಯ  ಕೊಳ್ಳಲು ಬರುವ ಸಾರ್ವಜನಿಕರು ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಇದನ್ನು ವಿರೋಧಿಸುತ್ತಿರುವ ನಮಗೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು. 

ಇದಕ್ಕೆ  ಗ್ರಾಮಸ್ಥರೂ ಧ್ವನಿಗೂಡಿಸಿ ಮದ್ಯದಂಗಡಿ ಬಂದ್‌ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮದ್ಯದಂಗಡಿ ವಿರುದ್ಧ ವಿವಿಧ ಸಂಘಟನೆಗಳ ನೇತೃತ್ವದಲ್ಲಿ  ಆ. 2ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಆದ್ದರಿಂದ ಈ ಪ್ರತಿಭಟನೆಗೆ ಬೆಂಬಲ ಸೂಚಿಸಲು ಸಭೆಯಲ್ಲಿದ್ದ ಮಹಿಳೆಯರು ಒತ್ತಾಯಿಸಿದ್ದು  ಈ ಬಗ್ಗೆ  ನಿರ್ಣಯ ಕೈಗೊಳ್ಳಲಾಯಿತು.

ಹಂದಿ ಸಾಕಾಣಿಕೆಯಿಂದ ತೊಂದರೆ
ಪಡ್ಡಡ್ಕದಲ್ಲಿ  ಹಂದಿ ಸಾಕಾಣಿಕೆ ಮಾಡುತ್ತಿರು ವುದರಿಂದ ಸಮೀಪದ ಮನೆಯವರಿಗೆ ದುರ್ವಾ ಸನೆಯಲ್ಲಿ   ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೋಗ ಹರಡುವ ಭೀತಿ ಇದೆ. ಈ ಬಗ್ಗೆ  ಹಂದಿ ಸಾಕಾಣಿಕೆದಾರರ ಗಮನಕ್ಕೆ ತಂದಾಗ ಅವರು ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ ಎಂದು ಮಹಿಳೆಯೋರ್ವರು ಸಭೆಯ ಗಮನಕ್ಕೆ ತಂದರು. 

ಆಗ್ರಹ
ನೆಲ್ಯಾಡಿ ಪೇಟೆ ಅಂಗನವಾಡಿ ಪಕ್ಕದಲ್ಲಿರುವ ಸರಕಾರಿ ಜಾಗವನ್ನು  ಸ್ತ್ರೀಶಕ್ತಿ ಭವನ ನಿರ್ಮಾಣಕ್ಕೆ  ಮಂಜೂರು ಗೊಳಿಸಬೇಕೆಂದು ಅಂಗನವಾಡಿ ಕಾರ್ಯಕರ್ತೆ ಆಗ್ರಹಿಸಿದರು. ನೆಲ್ಯಾಡಿ-ಪಡ್ಡಡ್ಕ ರಸ್ತೆ ಡಾಮರೀಕ ರಣಗೊಂಡಿದ್ದರೂ ಆರೇ ತಿಂಗಳಲ್ಲಿ ಡಾಮರು ಎದ್ದು ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದೆ. ಇದನ್ನು ಸರಿಪಡಿಸುವಂತೆ. ಗ್ರಾಮಸ್ಥರು ಆಗ್ರಹಿಸಿದರು. ಗ್ರಾಮಸ್ಥರ ಸಮಸ್ಯೆ ಕುರಿತಂತೆ ಸಂಬಂಧಿಸಿದವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಗ್ರಾ.ಪಂ. ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಅವರು ಮಾತನಾಡಿ, ಮದ್ಯದಂಗಡಿಯಿಂದ ಮಹಿ ಳೆಯರಿಗೆ ತೊಂದರೆಯಾದಲ್ಲಿ  ರಕ್ಷಣೆಗೆ ಜನಜಾಗೃತಿ ವೇದಿಕೆ ಹೋರಾಟಕ್ಕೆ ಸಿದ್ಧವಿದ್ದು  ಹಲವು ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಬಾರ್‌ ವಿರುದ್ಧ ಈಗಾ ಗಲೇ ಪ್ರತಿಭಟನೆಗೆ ದಿನ ನಿಗದಿಯಾಗಿದೆ ಎಂದರು.

ಅಂಗನವಾಡಿ ವಲಯ ಮೇಲ್ವಿಚಾರಕಿ ಉಮಾ ವತಿ ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯರಾದ ಅಬ್ರಹಾಂ ಕೆ.ಪಿ., ಅಬ್ದುಲ್‌ ಹಮೀದ್‌, ಚಿತ್ರಾ ರಾಮನಗರ, ಪೋ›ರಿನಾ ಡಿ’ಸೋಜಾ, ಉಷಾ ಜೋಯಿ, ಉಮಾವತಿ ದರ್ಖಾಸು, ಲೈಲಾ ತೋಮಸ್‌, ತೀಥೆìಶ್ವರ ಯು. ಉಪಸ್ಥಿತರಿದ್ದರು. ಪಿ.ಡಿ.ಒ. ದೇವರಾಜ್‌ ಸ್ವಾಗತಿಸಿ, ನಿರೂಪಿಸಿದರು. ಉಷಾ ಒ.ಕೆ. ವಂದಿಸಿದರು. ಸಿಬಂದಿ ಶಿವಪ್ರಸಾದ್‌, ಗಿರೀಶ್‌, ಸೋಮಶೇಖರ್‌ ಸಹಕರಿಸಿದರು.

ಟಾಪ್ ನ್ಯೂಸ್

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

MNG-Deeraj

Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್‌ ಮುನಿರಾಜು

Kapu

Navarathiri: ಉಚ್ಚಿಲ ದಸರಾ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

krishna bhaire

FIR ದಾಖಲಾದ ಬಿಜೆಪಿಯವರು ರಾಜೀನಾಮೆ ನೀಡಲಿ: ಕೃಷ್ಣ ಭೈರೇಗೌಡ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Madikeri

Madikeri: ಕುಶಾಲನಗರದಲ್ಲಿ ಕೊಡಲಿಯಿಂದ ಕಡಿದು ಇಬ್ಬರ ಕೊ*ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Electric

Uppinangady: ವಿದ್ಯುತ್‌ ಆಘಾತ: ಕೊಯಿಲ ಗ್ರಾಮದ ವ್ಯಕ್ತಿ ಸಾವು

dw

Belthangady: ಮರದಿಂದ ಬಿದ್ದು ವ್ಯಕ್ತಿ ಸಾವು

arest

BC Road: ಕಳವಾದ ಸ್ಕೂಟರ್‌ ಪತ್ತೆ; ಆರೋಪಿ ಬಂಧನ

Vitla: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಾಯ

Vitla: ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಗಾಯ

12-bantwala

Sand Mining: ಬಂಟ್ವಾಳ ಅಕ್ರಮ ಮರಳು ಅಡ್ಡೆಗೆ ದಾಳಿ; 20 ದೋಣಿ ವಶ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ

1-aaaa

Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್‌: ಕಾಡಾನೆಗಳ ದರ್ಶನ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

MNG-Deeraj

Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್‌ ಮುನಿರಾಜು

1-asdd

PDOಗಳ ಅನಿರ್ದಿಷ್ಟಾವಧಿ ಧರಣಿ: ರಾಜ್ಯಾದ್ಯಂತ ಗ್ರಾ.ಪಂ. ಸೇವೆ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.