![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 14, 2017, 2:50 AM IST
ಉಪ್ಪಿನಂಗಡಿ: ಪೆರ್ನೆ ಗ್ರಾಮದ ಮುಮ್ಮಾರಿ ನಿವಾಸಿ ಬಾಲಕೃಷ್ಣ ಪೂಜಾರಿ ಅವರ ಮನೆ ಕುಸಿದು ಬಿದ್ದಿದ್ದು, ಈ ಕುಟುಂಬದ ಅಸಹಾಯಕ ಪರಿಸ್ಥಿತಿಯನ್ನು ಮನಗಂಡ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರು, ಬಾಲಕೃಷ್ಣ ಅವರ ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.
ಬಾಲಕೃಷ್ಣ ಪೂಜಾರಿ ಹಾಗೂ ಸುನಂದಾ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಮುಮ್ಮಾರಿಯಲ್ಲಿ ವಾಸ್ತವ್ಯವಿದ್ದರು. ಆದರೆ ಇವರ ವಾಸ್ತವ್ಯದ ಮನೆ ಇತ್ತೀಚೆಗೆ ಕುಸಿದು ಬಿದ್ದು, ನಿರಾಶ್ರಿತರಾಗಿದ್ದರು. ಬಳಿಕ ಅವರಿಗೆ ಸ್ಥಳೀಯರಾದ ಗೋಪಾಲ ಶೆಟ್ಟಿ ಎಂಬವರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಈ ಕುಟುಂಬದ ಅಸಹಾಯಕ ಪರಿಸ್ಥಿತಿಯನ್ನು ಅರಿತ ಅಶೋಕ್ ಕುಮಾರ್ ರೈ, ಖುದ್ದು ಸ್ಥಳಕ್ಕೆ ಭೇಟಿ ನೀಡಿದ ಅಶೋಕ್ ಕುಮಾರ್ ರೈ ಅವರು ಮನೆ ನಿರ್ಮಾಣಕ್ಕೆ ಸಹಕಾರ ನೀಡುವ ಭರವಸೆ ನೀಡಿದರಲ್ಲದೆ, ಬಾಲಕೃಷ್ಣ ಪೂಜಾರಿಯವರ ಮಕ್ಕಳ ಖರ್ಚಿಗಾಗಿ ಆರ್ಥಿಕ ನೆರವನ್ನೂ ನೀಡಿದರು.
ಇದೇ ಸಂದರ್ಭ ಸ್ವಂತ ನಿವೇಶನವಿಲ್ಲದ ಬಾಲಕೃಷ್ಣ ಪೂಜಾರಿಯವರ ಕುಟುಂಬಕ್ಕೆ ಐದು ಸೆಂಟ್ಸ್ ಜಾಗವನ್ನು ನೀಡುವುದಾಗಿ ಸ್ಥಳೀಯರಾದ ಗೋಪಾಲಕೃಷ್ಣ ಶೆಟ್ಟಿ ಭರವಸೆ ನೀಡಿದರು. ಈ ಸಂದರ್ಭ ಪೆರ್ನೆ ಬಿಳಿಯೂರು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ ಗೌಡ, ಗ್ರಾ.ಪಂ. ಸದಸ್ಯರಾದ ನವೀನ್ ಪೂಜಾರಿ ಪದಬರಿ, ಶಿವಪ್ಪ ನಾಯ್ಕ, ಬಿಜೆಪಿ ಕಾರ್ಯಕರ್ತರಾದ ಸೀತಾರಾಮ ಶೆಟ್ಟಿ ಕಾರ್ಲ, ಸಂಜೀತ್ ಶೆಟ್ಟಿ, ಐತಪ್ಪ ಭಂಡಾರಿ, ಕುಸುಮಾಧರ ಗೌಡ, ಶರತ್ ಶೆಟ್ಟಿ, ಸದಾನಂದ ಭಂಡಾರಿ, ಲಿಂಗಪ್ಪ ಭಂಡಾರಿ, ಉದಯ ಗೌಡ, ಪೂವಪ್ಪ ಪೂಜಾರಿ, ಮಹೇಶ್ ಪೂಜಾರಿ, ನಿತಿನ್, ಸುರೇಶ್, ಪ್ರಸಾದ್, ಅಶೋಕ್ ಕುಮಾರ್ ರೈ ಮತ್ತಿತರರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.