“ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತಕ ಚಟುವಟಿಕೆ ಪೂರಕ’
Team Udayavani, Jul 31, 2017, 7:35 AM IST
ಪುತ್ತೂರು : ಸಾಮೆತ್ತಡ್ಕ ಸುದಾನ ನ್ಪೋರ್ಟ್ಸ್ ಕ್ಲಬ್ನಲ್ಲಿ ಮೊದಲ ಬಾರಿಗೆ ಹಮ್ಮಿಕೊಂಡ ಪುತ್ತೂರು, ಸುಳ್ಯ ಹಾಗೂ ಬಂಟ್ವಾಳ ತಾಲೂಕು ಮಟ್ಟದ ವಿವಿಧ ವಯೋಮಾನದ ಬಾಲಕ-ಬಾಲಕಿಯರ ಮತ್ತು ಮಹಿಳೆಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭ ರವಿವಾರ ನಡೆಯಿತು.
ಸಮಾರೋಪದ ಸಮಾರಂಭದಲ್ಲಿ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಗೋವಿಂದೇಗೌಡ ಬಹುಮಾನ ವಿತರಿಸಿದರು. ಅನಂತರ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಯಿಂದ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರ ಉತ್ತಮ ಅವಕಾಶ ಒದಗಿಸುತ್ತದೆ ಎಂದು ಹೇಳಿದರು.
ಸಾಧಕರ ಅನುಭವ ಸ್ಫೂರ್ತಿಯಾಗಲಿ
ಪರಿಶ್ರಮದಿಂದ ಸಾಧನೆ ತೋರಲು ಸಾಧ್ಯವಾಗುತ್ತದೆ ಎನ್ನು ವುದಕ್ಕೆ ಸೈನಾ ನೆಹ್ವಾಲ್, ಪಿ.ವಿ. ಸಿಂಧೂ ಅವರಂತಹ ಸಾಧಕರು ಸಾಕ್ಷಿ ಎಂದ ಅವರು, ಗುರಿ ಸಾಧನೆಗೆ ಅಡಿಯಿಡಲು ಏಕಾಗ್ರತೆ, ಕಠಿನ ಅಭ್ಯಾಸ ಆವಶ್ಯಕತೆ ಇದ್ದು, ಸಾಧಕರ ಜೀವನ ಅನುಭವ ನಿಮಗೆಲ್ಲರಿಗೂ ಸ್ಫೂರ್ತಿಯಾಗಿರಲಿ. ಇಂತಹ ಕ್ರೀಡಾಕೂಟಗಳು ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸುತ್ತದೆ. ಭವಿಷ್ಯದ ಬೆಳವಣಿಗೆಗೂ ಒಂದು ಅತ್ಯುತ್ತಮ ಅಡಿಪಾಯ ಆಗಬಲ್ಲುದು ಎಂದು ಹೇಳಿದರು.
ನಿರಂತರ ಪ್ರೋತ್ಸಾಹ
ಸಮಾರಂಭದ ಅಧ್ಯಕ್ಷತೆ ವಹಿಸಿದ ಸುದಾನ ನ್ಪೋರ್ಟ್ಸ್ ಕ್ಲಬ್ನ ಅಧ್ಯಕ್ಷ ಭುಜಂಗ ಆಚಾರ್ಯ ಮಾತನಾಡಿ, ನ್ಪೋರ್ಟ್ಸ್ ಕ್ಲಬ್ ಮೂಲಕ ರಜಾ ದಿನಗಳಲ್ಲಿ ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ. ಒಳಾಂಗಣ ಕ್ರೀಡೆಗೆ ಸಂಬಂಧಿಸಿ, ಇಲ್ಲಿ ನಿರಂತರ ಪ್ರೋತ್ಸಾಹ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮುಕ್ತ ಓಪನ್ ಪಂದ್ಯಾವಳಿ ಆಯೋಜಿಸುವ ಇರಾದೆ ಇದೆ ಎಂದರು.
ವಿಶೇಷ ಆಹ್ವಾನಿತರಾಗಿ ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ, ತರಬೇತುದಾರ ಪಿ.ಬಿ. ಪಾಪನ್ ಕುಮಾರ್ ಪಾಲ್ಗೊಂಡಿದ್ದರು. ಸುದಾನ ನ್ಪೋರ್ಟ್ಸ್ ಕ್ಲಬ್ ಕೋಶಾಧಿಕಾರಿ ಆಸ್ಕರ್ ಆನಂದ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮಾನಂದ ಅವರು ವಂದಿಸಿದರು.
ಫಲಿತಾಂಶದ ವಿವರ
11 ವರ್ಷದೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗ: ಅಪೂರ್ವ (ಪ್ರ.), ಹರ್ಷಿತಾ (ದ್ವಿ.) ಬಾಲಕರ ವಿಭಾಗ : ಮನ್ವಿತ್ (ಪ್ರ.), ಅಶ್ವಿನ್ (ದ್ವಿ.)13 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ ರೈ (ಪ್ರ.), ಬಿಂದು ಶ್ರೀ (ದ್ವಿ.)
15 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ (ಪ್ರ), ನಿಧಿ (ದ್ವಿ), ಬಾಲಕರು : ಬೆಲ್ಹರ್ಟ್ (ಪ್ರ.), ಶಾಹುಲ್ (ದ್ವಿ.)
18 ವರ್ಷದೊಳಗಿನ ಬಾಲಕರು: ಯಜ್ಞೆàಶ್ (ಪ್ರ.), ಅಬೂಬಕ್ಕರ್ (ದ್ವಿ.), ಬಾಲಕಿಯರು: ಹಸ್ತಾ ಜೈನ್ (ಪ್ರ.), ಸ್ಪೂರ್ತಿ (ದ್ವಿ.)
ಫಲಿತಾಂಶದ ವಿವರ
11 ವರ್ಷದೊಳಗಿನ ಸಿಂಗಲ್ಸ್ ಬಾಲಕಿಯರ ವಿಭಾಗ: ಅಪೂರ್ವ (ಪ್ರ.), ಹರ್ಷಿತಾ (ದ್ವಿ.) ಬಾಲಕರ ವಿಭಾಗ : ಮನ್ವಿತ್ (ಪ್ರ.), ಅಶ್ವಿನ್ (ದ್ವಿ.),
13 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ ರೈ (ಪ್ರ.), ಬಿಂದು ಶ್ರೀ (ದ್ವಿ.),
15 ವರ್ಷದೊಳಗಿನ ಬಾಲಕಿಯರ ವಿಭಾಗ: ಸ್ಫೂರ್ತಿ (ಪ್ರ), ನಿಧಿ (ದ್ವಿ), ಬಾಲಕರು : ಬೆಲ್ಹರ್ಟ್ (ಪ್ರ.), ಶಾಹುಲ್ (ದ್ವಿ.),
18 ವರ್ಷದೊಳಗಿನ ಬಾಲಕರು: ಯಜ್ಞೆàಶ್ (ಪ್ರ.), ಅಬೂಬಕ್ಕರ್ (ದ್ವಿ.), ಬಾಲಕಿಯರು: ಹಸ್ತಾ ಜೈನ್ (ಪ್ರ.), ಸ್ಪೂರ್ತಿ (ದ್ವಿ.).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.