![Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ](https://www.udayavani.com/wp-content/uploads/2024/07/kadaba-1-415x219.jpg)
ಯುವಾ ಬ್ರಿಗೇಡ್ನಿಂದ ಮೋಂಬತ್ತಿ ಮೆರವಣಿಗೆ
Team Udayavani, Oct 25, 2017, 11:36 AM IST
![25-Mng-6.jpg](https://www.udayavani.com/wp-content/uploads/2017/10/25/25-Mng-6-620x287.jpg)
ಕದ್ರಿ: ಅಕ್ರಮ ಕಸಾಯಿಖಾನೆಗಳ ಮಾಹಿತಿದಾರರ ಮೇಲೆ ಹಾಗೂ ಪೊಲೀಸರ ಮೇಲೆ ನಡೆದ ಹಲ್ಲೆ ಮತ್ತು ಯೋಧ ದೀಪಕ್ ಮಂಡಲ್ ಹತ್ಯೆ ಖಂಡಿಸಿ ಯುವಾ ಬ್ರಿಗೇಡ್ ವತಿಯಿಂದ ಕದ್ರಿ ಪಾರ್ಕ್ನಿಂದ ಕದ್ರಿಯುದ್ಧ ಸ್ಮಾರಕದವರೆಗೆ ಮೋಂಬತ್ತಿ ಮೆರವಣಿಗೆ ನಡೆಯಿತು.
ಅಕ್ರಮ ಗೋಸಾಗಣೆ ತಡೆಯುವ ನಿಟ್ಟಿನಲ್ಲಿ ಹೋರಾಡಿ ಅಕ್ರಮ ಗೋಸಾಗಣೆಕಾರರಿಂದ ಹತ್ಯೆಗೊಳಗಾದ ಬಿಎಸ್ಎಫ್ ಯೋಧ ದೀಪಕ್ ಮಂಡಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯುವಾ ಬ್ರಿಗೇಡ್ ಮತ್ತು ಭಾರತೀಯ ಗೋ ಪರಿವಾರದ ಕಾರ್ಯಕರ್ತರು ‘ಬದುಕುವ ಹಕ್ಕು ನಮಗೂ ಇದೆ’ ಘೋಷಣೆಯೊಂದಿಗೆ ಮೆರವಣಿಗೆ ನಡೆಸಿದರು.
ಕದ್ರಿ ಯುದ್ಧ ಸ್ಮಾರಕದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಯುವಾ ಬ್ರಿಗೇಡ್ ಕಾರ್ಯಕರ್ತ ವಿಕ್ರಮ್, ದೇಶದಲ್ಲಿ ಗೋ ರಕ್ಷಕರು ಟಾರ್ಗೆಟ್ ಆಗುತ್ತಿದ್ದಾರೆ. ಅಕ್ರಮ ಗೋಹತ್ಯೆ ವಿರುದ್ಧ ಪೊಲೀಸರಿಗೆ ದೂರು ನೀಡಿದ ಬೆಂಗಳೂರಿನ ನಂದಿನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಅಕ್ರಮ ಕಸಾಯಿಖಾನೆ ಮುಚ್ಚಿಸಲು ಹೋದ ಬೆಂಗಳೂರು ಪೊಲೀಸರ ಮೇಲೆಯೂ ಕಲ್ಲೆಸೆಯಲಾಗಿದೆ. ದೇಶದ ಗಡಿ ಭಾಗಗಳಲ್ಲಿ ನಡೆಯುವ ಅಕ್ರಮ ಗೋಸಾಟ ತಡೆಯಲು ಹೋದ ಯೋಧ ದೀಪಕ್ ಮಂಡಲ್ ಅವರನ್ನು ಹತ್ಯೆಗೈಯಲಾಗಿದೆ. ವಿವಿಧ ಕಾರಣಗಳಿಗೆ ಪ್ರಶಸ್ತಿ ವಾಪಸ್ ಮಾಡುವ ಬುದ್ಧಿಜೀವಿಗಳು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದು, ಮಹಿಳಾ ಆಯೋಗ ಕುರುಡಾಗಿದೆ ಎಂದು ಆರೋಪಿಸಿದರು.
ಭಾರತೀಯ ಗೋಪರಿವಾರದ ವಿದ್ಯಾಲಕ್ಷ್ಮೀ ಕೈಲಂಕಜೆ, ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಚಂದ್ರಶೇಖರ್ ಕುಕ್ಕೆ, ಜಿಲ್ಲಾ ಸಂಚಾಲಕ ತಿಲಕ್ ಶಿಶಿಲ, ಮಂಗಳೂರು ಸಂಪರ್ಕ ಪ್ರಮುಖ್ ವಿನೋದ್, ಭಾರತೀಯ ಗೋಪರಿವಾರದ ಪ್ರಮುಖರಾದ ರವೀಶ ಪೆದಮಲೆ ಮೊದಲಾದವರು ಉಪಸ್ಥಿತರಿದ್ದರು. ಯುವಾಬ್ರಿಗೇಡ್ ಕಾರ್ಯಕರ್ತ ಶ್ರೀಪತಿ ಆಚಾರ್ಯ ಸ್ವಾಗತಿಸಿದರು.
ಟಾಪ್ ನ್ಯೂಸ್
![Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ](https://www.udayavani.com/wp-content/uploads/2024/07/kadaba-1-415x219.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್ ವಿಳಂಬ: ಪದವಿ ಕೋರ್ಸ್ಗಳಿಂದ ವಿದ್ಯಾರ್ಥಿಗಳು ವಿಮುಖ](https://www.udayavani.com/wp-content/uploads/2024/07/vv-150x110.jpg)
Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್ ವಿಳಂಬ: ಪದವಿ ಕೋರ್ಸ್ಗಳಿಂದ ವಿದ್ಯಾರ್ಥಿಗಳು ವಿಮುಖ
![Panamburu Beach ಬದಲು ಮೀನಕಳಿಯಕ್ಕೆ ಬರುವ ಪ್ರವಾಸಿಗರು! ದಾರಿ ತಪ್ಪಿಸುವ ಗೂಗಲ್](https://www.udayavani.com/wp-content/uploads/2024/07/Spl-google-150x99.jpg)
Panamburu Beach ಬದಲು ಮೀನಕಳಿಯಕ್ಕೆ ಬರುವ ಪ್ರವಾಸಿಗರು! ದಾರಿ ತಪ್ಪಿಸುವ ಗೂಗಲ್
![Theft Case ದಕ್ಷಿಣ ಕನ್ನಡ, ಉಡುಪಿಗೆ “ಚಡ್ಡಿ ಗ್ಯಾಂಗ್’ ಪ್ರವೇಶ ?](https://www.udayavani.com/wp-content/uploads/2024/07/DK-THE-150x76.jpg)
Theft Case ದಕ್ಷಿಣ ಕನ್ನಡ, ಉಡುಪಿಗೆ “ಚಡ್ಡಿ ಗ್ಯಾಂಗ್’ ಪ್ರವೇಶ ?
![1-a-chinna](https://www.udayavani.com/wp-content/uploads/2024/07/1-a-chinna-150x87.jpg)
Asian ಪೆಸಿಫಿಕ್ ಬೆಂಚ್ ಪ್ರಸ್ ಚಾಂಪಿಯನ್ಶಿಪ್: ವಿಜಯ ಕಾಂಚನ್ಗೆ 2 ಚಿನ್ನ
![ವಿಹಿಂಪ ರಾ.ಪ್ರ.ಕಾರ್ಯದರ್ಶಿ ಪರಾಂಡೆ ಮಂಗಳೂರಿನಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ](https://www.udayavani.com/wp-content/uploads/2024/07/vhp-150x71.jpg)
ವಿಹಿಂಪ ರಾ.ಪ್ರ.ಕಾರ್ಯದರ್ಶಿ ಪರಾಂಡೆ ಮಂಗಳೂರಿನಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ
MUST WATCH
ಹೊಸ ಸೇರ್ಪಡೆ
![Arrested: ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಕ್ಕೆ ಯುವತಿಗೆ ಕಿರುಕುಳ; ಮಾಲೀಕ ಸೆರೆ](https://www.udayavani.com/wp-content/uploads/2024/07/5-8-150x90.jpg)
Arrested: ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಕ್ಕೆ ಯುವತಿಗೆ ಕಿರುಕುಳ; ಮಾಲೀಕ ಸೆರೆ
![Auto rickshaw: ನಗರದ ರಸ್ತೆಗಿಳಿಯಲಿವೆ ಮತ್ತೆ ಲಕ್ಷ ಆಟೋ](https://www.udayavani.com/wp-content/uploads/2024/07/4-8-150x90.jpg)
Auto rickshaw: ನಗರದ ರಸ್ತೆಗಿಳಿಯಲಿವೆ ಮತ್ತೆ ಲಕ್ಷ ಆಟೋ
![Kadaba: ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿ, ಸಹಾಯಕ್ಕಾಗಿ ಬೊಬ್ಬಬಿಡುತ್ತಿರುವ ಯುವಕ](https://www.udayavani.com/wp-content/uploads/2024/07/kadaba-1-150x79.jpg)
Kadaba: ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರ ನದಿಯ ಮಧ್ಯೆ ಸಿಲುಕಿದ ಯುವಕನ ರಕ್ಷಣೆ
![Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ](https://www.udayavani.com/wp-content/uploads/2024/07/SWAMIJI-150x98.jpg)
Kalaburagi: ಹೃದಯಾಘಾತದಿಂದ ರಟಕಲ್ ವಿರಕ್ತ ಮಠದ ಸಿದ್ಧರಾಮ ಶ್ರೀಗಳು ವಿಧಿವಶ
![Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ](https://www.udayavani.com/wp-content/uploads/2024/07/MUMBAI-2-150x84.jpg)
Heavy Rain: ಮುಂಬೈನಲ್ಲಿ ದಾಖಲೆಯ ಮಳೆ… ತಗ್ಗು ಪ್ರದೇಶಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.