![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Mar 11, 2022, 2:43 PM IST
ವಿಟ್ಲ: ಖಾಸಗಿ ಬಸ್ಸುಗಳ ನಡುವೆ ಸಮಯದ ವಿವಾದ, ಪೈಪೋಟಿ ತೀವ್ರಗೊಂಡು, ಅತಿ ವೇಗ ಮತ್ತು ಅಜಾಗರೂಕತೆಯಿಂದ ಬಸ್ಸುಗಳನ್ನು ಓಡಿಸುವ ಸಂದರ್ಭ ಪ್ರಯಾಣಿಕರು ಭಯದಿಂದ ತತ್ತರಿಸಿದ ಘಟನೆ ವಿಟ್ಲ ಸಾಲೆತ್ತೂರು ರಸ್ತೆಯಲ್ಲಿ ನಡೆದಿದೆ.
ಎರಡು ಬಸ್ಸುಗಳು ಪರಸ್ಪರ ತಿಕ್ಕಾಟ ಮಾಡಿಕೊಂಡು ಜನರ ಜೀವದ ಮೇಲೆ ಚೆಲ್ಲಾಟ ನಡೆಸಿದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ವರ್ಷದಿಂದ ವಿಟ್ಲ-ಸಾಲೆತ್ತೂರು-ಮುಡಿಪು-ಮಂಗಳೂರು ರಸ್ತೆಯಲ್ಲಿ ಇದೇ ರೀತಿ ಪೈಪೋಟಿ ನಡೆಯುತ್ತಿದೆ. ಎಂದಿನಂತೆ ಶುಕ್ರವಾರ ವಿಟ್ಲ ಠಾಣಾ ವ್ಯಾಪ್ತಿಯ ವಿಟ್ಲಪಡ್ನೂರು ಗ್ರಾಮದ ಮೂರ್ಕಜೆಯಲ್ಲಿ ಪೈಪೋಟಿ ನಡೆದು ಅಪಘಾತ ಸಂಭವಿದೆ.
ಇದನ್ನೂ ಓದಿ:ಹೀನಾಯ ಸೋಲು ನಮಗೆ ಪಾಠ,ನಾವು ‘ಬಿಜೆಪಿಯ ಬಿ ಟೀಂ’ ಅಲ್ಲ: ಮಾಯಾವತಿ
ಚಾಲಕರ ಹುಚ್ಚಾಟಕ್ಕೆ ಬಡ ಪ್ರಯಾಣಿಕರ ಗೋಳಾಡಿದರು. ಎರಡು ಬಸ್ಸುಗಳು ನಡುರಸ್ತೆಯಲ್ಲೇ ನಿಂತ ಬಳಿಕ ಇತರ ವಾಹನಗಳು, ಬಸ್ಸು ಲಾರಿಗಳು ಸಂಚರಿಸಲು ಜಾಗವಿಲ್ಲದೇ ಪರದಾಡಬೇಕಾಯಿತು. ಘರ್ಷಣೆಯಿಂದ ಪಾರಾಗಲು ಜನರು ಹರಸಾಹಸ ಮಾಡಬೇಕಾಯಿತು. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ದೂರು ದಾಖಲಿಸುವ ವ್ಯಕ್ತಿಗಳಿಗಾಗಿ ಹುಡುಕಾಡುತ್ತಿದ್ದಾರೆ
You seem to have an Ad Blocker on.
To continue reading, please turn it off or whitelist Udayavani.