
ಪಂಜದಲ್ಲಿ ಒಂಟಿ ವೃದ್ಧನ ಕೊಲೆ: ಓರ್ವನ ಸೆರೆ
Team Udayavani, Sep 13, 2018, 12:24 PM IST

ಸುಳ್ಯ : ಸೆಪ್ಟಂಬರ್ 7ರಂದು ಪಂಜ ಸಮೀಪದ ಪಂಬೆತ್ತಾಡಿಯಲ್ಲಿ ಕಲ್ಚಾರು ಸುಬ್ರಹ್ಮಣ್ಯ ಭಟ್ ಅವರು ತನ್ನ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣ ಕೊಲೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿ ಸೆ.12ರಂದು ಸುಳ್ಯ ಕೋರ್ಟಿಗೆ ಹಾಜರುಪಡಿಸಲಾಗಿದೆ.
ಬಂಧಿತ ಆರೋಪಿ ಕೊಡಿಯಾಲ ಕಲ್ಪಡ ನಿವಾಸಿ ಆಶಿಕ್ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿದು ಬಂದಿದೆ. ತನಿಖೆ ನಡೆಸಿರುವ ಸುಳ್ಯ ವೃತ್ತ ನಿರೀಕ್ಷಕ ಸತೀಶ್ಕುಮಾರ್ ನೇತೃತ್ವದ ಪೊಲೀಸರ ತಂಡ ಅಂಗಳದಲ್ಲಿ ಹಾಸಿದ್ದ ಟರ್ಪಾಲಿನ ಮೇಲೆ ಪಿಕಪ್ ಚಲಿಸಿದ ಗುರುತನ್ನು ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರಕರಣದ ವಿವರ
ಘಟನೆ ಬೆಳಕಿಗೆ ಬರುವ ಎರಡು ದಿನಗಳ ಮೊದಲು ಆರೋಪಿಯು ಸುಬ್ರಹ್ಮಣ್ಯ ಭಟ್ ಅವರನ್ನು ಹೊಡೆದು ಕೊಂದಿದ್ದ. ಬಳಿಕ ಭಟ್ಟರು ತನ್ನೊಡನೆ ಅಡಿಕೆ ಮಾರಲು ಹೇಳಿದ್ದಾರೆಂದು ನಂಬಿಸಿ ಪರಿಚಿತರಾದ ವಸಂತ, ದೀಕ್ಷಿತ್, ಲಕ್ಷ್ಮೀಶ, ಪಿಕಪ್ ಮಾಲಕ ವಿದ್ಯಾನಂದ ಅವರನ್ನು ಭಟ್ಟರ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಫೋನ್ನಲ್ಲಿ ಭಟ್ಟರೊಡನೆ ಮಾತನಾಡುವಂತೆ ನಟಿಸಿ ಮನೆಯ ಬಾಗಿಲು ತೆರೆದು ಅಡಿಕೆ ತುಂಬಿಸಿ ಕಾಣಿಯೂರಿನ ವ್ಯಾಪಾರಿಗೆ ಮಾರಿದ್ದಾನೆಂದು ತನಿ ಖೆಯಿಂದ ತಿಳಿದುಬಂದಿದೆ. ವಸಂತ, ದೀಕ್ಷಿತ್, ಲಕ್ಷೀಶ ಹಾಗೂ ವಿದ್ಯಾನಂದ ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.