ಗ್ರಾಮಾಡಳಿತಕ್ಕೆ ಅಧಿಕಾರಿಗಳೇ ಇಲ್ಲ!

ಗ್ರಾಮ ಆಡಳಿತ ಅಧಿಕಾರಿಗಳ ಕೊರತೆಯಿಂದ ಕಂದಾಯ ಸೇವೆಗೆ ತೊಡಕು

Team Udayavani, Jul 15, 2023, 6:00 AM IST

RURAL ADMINISTRATION

ಮಂಗಳೂರು: ಗ್ರಾಮ ಆಡಳಿತಕ್ಕೆ ಬಲ ನೀಡಬೇಕಾದ ಗ್ರಾಮ ಆಡಳಿತ ಅಧಿಕಾರಿಗಳು (ಗ್ರಾಮ ಲೆಕ್ಕಿಗರು-ವಿಎ)ಕರಾವಳಿಯಲ್ಲಿ ಅಗತ್ಯಕ್ಕೆ ತಕ್ಕಷ್ಟು ನಿಯೋಜನೆಯಾಗದೆ ಜನರಿಗೆ ಕಂದಾಯ ಸೇವೆಯೇ ಗಗನ ಕುಸುಮವಾಗುತ್ತಿದೆ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 87 ಹಾಗೂ ಉಡುಪಿ ಜಿಲ್ಲೆಯಲ್ಲಿ 38 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ನೇಮಕ ಆಗಿಲ್ಲ. ಹೀಗಾಗಿ ಇಷ್ಟೂ ಕಡೆಯ ಕಂದಾಯ ಸೇವೆಗೆ ತೊಡಕುಂಟಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನಲ್ಲಿ 13, ಬಂಟ್ವಾಳ ತಾಲೂಕಿನಲ್ಲಿ 14, ಪುತ್ತೂರು 13, ಕಡಬ 10, ಬೆಳ್ತಂಗಡಿ 15, ಸುಳ್ಯ 6, ಉಳ್ಳಾಲ 3, ಮೂಲ್ಕಿಯಲ್ಲಿ 3 ಆಡಳಿತ ಅಧಿಕಾರಿಗಳ ನೇಮಕವಾಗಿಲ್ಲ. ಉಡುಪಿ ತಾಲೂಕಿನಲ್ಲಿ 4, ಕುಂದಾಪುರದಲ್ಲಿ 9, ಕಾರ್ಕಳದಲ್ಲಿ 9, ಬ್ರಹ್ಮಾವರ 5, ಬೈಂದೂರು 8, ಕಾಪು 1, ಹೆಬ್ರಿ 2 ಆಡಳಿತ ಅಧಿಕಾರಿಗಳಿಲ್ಲ.

ಗ್ರಾಮ ಆಡಳಿತಕ್ಕೆ ಅಧಿಕಾರಿಗಳಿಲ್ಲ !
ಸದ್ಯ ದ. ಕ. ಜಿಲ್ಲೆಯಲ್ಲಿ 238 ಹಾಗೂ ಉಡುಪಿ ಜಿಲ್ಲೆಯಲ್ಲಿ 177 ಮಂದಿ ಕರ್ತವ್ಯದಲ್ಲಿದ್ದಾರೆ. ಯಾವ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ ಇಲ್ಲವೋ ಆ ಗ್ರಾಮಕ್ಕೆ ಪ್ರಭಾರ ನೆಲೆಯಲ್ಲಿ ಇವರನ್ನೇ ನಿಯುಕ್ತಿಗೊಳಿಸಲಾಗಿದೆ. ಹೀಗಾಗಿ ಕೆಲವರು 3-4 ಗ್ರಾಮ ಗಳ ಜವಾಬ್ದಾರಿಯನ್ನೂ ನಿರ್ವಹಿಸು ವಂತಾಗಿದೆ. ಇದರಿಂದಾಗಿ ಜನರಿಗೆ ಸೂಕ್ತ ಸಮಯದಲ್ಲಿ ಕಂದಾಯ ಸೇವೆ ಸಿಗುವುದಕ್ಕೆ ಸಮಸ್ಯೆ ಉಂಟಾಗಿದೆ.

ಗ್ರಾಮ ಆಡಳಿತ ಅಧಿಕಾರಿಯು ಕಂದಾಯ ಇಲಾಖೆಯ ಸೇವೆ, ಪ್ರವಾಹ-ಬೆಳೆ ಹಾನಿ ಸಹಿತ ವಿವಿಧ ಸಂದರ್ಭದಲ್ಲಿ ಪರಿಹಾರ ನೀಡುವ ಹಂತದಲ್ಲಿ ಪ್ರಾಥಮಿಕ ವರದಿಗೆ ಅಗತ್ಯವಾಗಿದ್ದಾರೆ. ಕಂದಾಯ ಇಲಾಖೆಯಲ್ಲಿ ಯಾವುದೇ ಸೇವೆಗೆ ಗ್ರಾಮ ಆಡಳಿತ ಅಧಿಕಾರಿಯ ವರದಿಯೇ ಅಗತ್ಯ. ಅವರ ವರದಿ ಇಲ್ಲದಿದ್ದರೆ ಆ ಕಡತ ಮುಂದಕ್ಕೆ ಹೋಗುವುದಿಲ್ಲ. ಉದಾಹರಣೆಗೆ ಮಳೆ ಬಂದು ಮನೆ ಬಿದ್ದಾಗ ಗ್ರಾಮ ಆಡಳಿತ ಅಧಿಕಾರಿ ಮೊದಲ ವರದಿ ನೀಡಬೇಕು. ಗ್ರಾಮದ ಭೂಮಿ ಸರ್ವೆ ನಕ್ಷೆ ಕೂಡ ಅವರಲ್ಲಿರುತ್ತದೆ. ಗ್ರಾಮದ ಸರ್ವೆ ಸಂಖ್ಯೆ, ನಕ್ಷೆ ಬಹುತೇಕ ಗೊತ್ತಿರು ವುದು ಆಡಳಿತಾಧಿಕಾರಿಗೆ.

ಜತೆಗೆ ಜನನ ಮರಣ ನೋಂದಣಾಧಿಕಾರಿಯಾಗಿಯೂ ಅವರು ಕಾರ್ಯ ನಡೆಸಬೇಕಾಗುತ್ತದೆ. ಆದರೆ ಆಡಳಿತಾಧಿಕಾರಿ ಇಲ್ಲದೆ ಜನರಿಗೆ ಈ ಎಲ್ಲ ಸೇವೆ ಪಡೆಯಲು ದೀರ್ಘ‌ ಕಾಯುವಂತಾಗಿದೆ!

ಕಂದಾಯ ಇಲಾಖೆ: ಬಹು ಹುದ್ದೆಗಳು ಖಾಲಿ!
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತಹಶೀ ಲ್ದಾರ್‌ ಗ್ರೇಡ್‌ 2 ಹುದ್ದೆ 10 ಮಂಜೂರಾಗಿದ್ದರೂ 7 ಖಾಲಿ ಇವೆ. ಗ್ರೂಪ್‌ ಡಿಯಲ್ಲಿ 59ರಲ್ಲಿ 48 ಖಾಲಿ ಇವೆ. ಉಡುಪಿಯಲ್ಲಿ ಉಪತಹಶೀಲ್ದಾರ್‌ ಹುದ್ದೆ 4 ಖಾಲಿ ಇವೆ. ಡಿ ಗ್ರೂಪ್‌ 38ರಲ್ಲಿ 24 ಖಾಲಿ ಇವೆ. ಹೀಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ವಿವಿಧ ಹುದ್ದೆಗಳು ಖಾಲಿ ಇರುವುದರಿಂದ ಜನರಿಗೆ ಸಮಸ್ಯೆ ಆಗುತ್ತಿದೆ.

ಖಾಲಿ ಹುದ್ದೆ ಭರ್ತಿ ಮಾಡಲು ಸರಕಾರ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಸದ್ಯ ಮಾತುಕತೆ ನಡೆಯುತ್ತಿದ್ದು, ಅಂತಿಮ ತೀರ್ಮಾನವನ್ನು ಸರಕಾರ ಕೈಗೊಳ್ಳಲಿದೆ. ಖಾಲಿ ಇರುವಲ್ಲಿಗೆ ಸಮಸ್ಯೆ ಆಗದಂತೆ ಇತರ ಗ್ರಾಮ ಆಡಳಿತ ಅಧಿಕಾರಿಗಳನ್ನು ಅಧಿಕ ಪ್ರಭಾರದಲ್ಲಿ ನಿಯೋಜಿಸಲಾಗಿದೆ.
-ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.