ಈ ಊರಿನಲ್ಲಿ ಮೂಲ ಸೌಲಭ್ಯವೂ ಇಲ್ಲ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಅವರ ದತ್ತು ಗ್ರಾಮವಿದು

Team Udayavani, Sep 24, 2019, 5:30 AM IST

f-47

ಅನಾರೋಗ್ಯಪೀಡಿತ ರಾಮಣ್ಣ ಅವರನ್ನು ಹೊತ್ತು ಆಸ್ಪತ್ರೆಗೆ ಸಾಗಿಸಲಾಯಿತು.

ಸುಬ್ರಹ್ಮಣ್ಯ: ರಸ್ತೆಯಿಲ್ಲದೇ ಅನಾರೋಗ್ಯ ಪೀಡಿತರನ್ನು ಜನರು ಹೊತ್ತೂಯ್ಯುವ ದೃಶ್ಯ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಆಗಾಗ್ಗೆ ಕಾಣ ಸಿಗುತ್ತದೆ. ಆದರೆ ಅಂಥ ದೃಶ್ಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲೂ ಕಾಣಸಿಗುತ್ತದೆ.

ಇಲ್ಲಿ ಹಿಡಿ ಉಪ್ಪು ತರಬೇಕಿದ್ದರೂ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ತೆರಳಬೇಕು. ಚಿಮಿಣಿ ದೀಪಗಳೇ ಗತಿ. ವಾಸಕ್ಕೆ ಪ್ಲಾಸ್ಟಿಕ್‌ ಹೊದಿಕೆಯ ಮನೆಗಳು. ವಾಹನ ಸಂಪರ್ಕವೂ ಇಲ್ಲದ ಈ ಊರಿನಲ್ಲಿ ಯಾರಾದರೂ ಕಾಯಿಲೆ ಬಿದ್ದರೆ ನಗರಕ್ಕೆ ಹೊತ್ತೂಯ್ಯಬೇಕು. ಗರ್ಭಿಣಿಯರು ಪ್ರಸವಕ್ಕೂ ಕೆಲವು ತಿಂಗಳು ಮೊದಲೇ ಊರು ತೊರೆಯಬೇಕು.

ಇತ್ತೀಚೆಗೆ ಪಡಿಕ್ಕಲಾಯದ ರಾಮಣ್ಣ ಪೂಜಾರಿ (72) ಅನಾ ರೋಗ್ಯಕ್ಕೆ ಒಳಗಾಗಿದ್ದರು. ಮನೆ ತನಕ ವಾಹನ ತರಲು ರಸ್ತೆ ಇಲ್ಲದ್ದರಿಂದ ಸ್ಥಳೀಯರು ಅವರನ್ನು ಕಾಡು ದಾರಿಯಲ್ಲಿ ಅರ್ಧ ದಾರಿ ತನಕ ಹೊತ್ತೂಯ್ದು ಬಳಿಕ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಪರಿಸರದಲ್ಲಿ 30ಕ್ಕೂ ಅಧಿಕ ಮನೆಗಳಿವೆ. ಬಳ್ಪ ಮುಖ್ಯ ಪೇಟೆ ಯಿಂದ ಇಲ್ಲಿಗೆ 3 ಕಿ.ಮೀ. ದೂರ ವಿದ್ದು ರಸ್ತೆ ಅಭಿವೃದ್ಧಿಯಾಗಿಲ್ಲ. ಕಾರ್ಜ, ಆಲ್ಕಬೆ, ಗೆಜ್ಜೆ ಕಣRಲ್‌, ನೀರಜರಿ, ಎಣ್ಣೆಮಜಲು, ಪಲ್ಲತ್ತಡ್ಕ ಬೀದಿಗುಡ್ಡೆ, ಕಾಯರ್ತಡ್ಕ ಮೊದಲಾದ ಪ್ರದೇಶಗಳ ಸ್ಥಿತಿಯೂ ಹೀಗೆಯೇ ಇದೆ. ತುರ್ತು ಸಂದರ್ಭಗಳಲ್ಲಿ ಪರದಾಟ ಪಡಲೇಬೇಕು.

ಇಂಥ ಚಿತ್ರಣ ಇರುವುದು ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ. ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿದ್ದರೂ ಮೂಲ ಸೌಕರ್ಯಗಳ ಕೊರತೆಯಿಂದ ಮುಕ್ತ  ವಾಗಿಲ್ಲ. ಸಂಸದ ನಳಿನ್‌ ಕುಮಾರ್‌ ಕಟೀಲು ಈ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ.

ಆ ಬಳಿಕ ಖಾಸಗಿ ಕಂಪೆನಿಗಳ ಪ್ರಾಯೋಜಕತ್ವದಲ್ಲಿ ಬ್ಯಾಂಕ್‌, ಬಸ್‌ ತಂಗುದಾಣ, ಅಂಗನವಾಡಿ ಮೇಲ್ದರ್ಜೆ ಗೇರಿಸಿದ್ದು ಬಿಟ್ಟರೆ ಬೇರೆ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಖಾಸಗಿ ಕಂಪೆನಿಗಳ ಸಹಿತ ವಿವಿಧ ಮೂಲಗಳಿಂದ ಗ್ರಾಮಕ್ಕೆ ಇದುವರೆಗೆ ಹರಿದು ಬಂದಿರುವ ಅನುದಾನ 6,27,17,001 ರೂ. ಮಾತ್ರ. ಉಳಿದಂತೆ ಗ್ರಾಮಕ್ಕೆಂದು ವಿಶೇಷ ಅನುದಾನಗಳು ಇಲ್ಲಿಗೆ ಹರಿದು ಬಂದಿಲ್ಲ ಎಂಬುದು ಗ್ರಾಮಸ್ಥರ ಅಳಲು.

998 ಕುಟುಂಬ
ಬಳ್ಪ ಗ್ರಾಮದಲ್ಲಿ 998 ಕುಟುಂಬಗಳಿವೆ. ಪ.ಜಾತಿ ಮತ್ತು ಪಂಗಡಗಳ 8 ಕಾಲನಿಗಳಿವೆ. ಕೃಷಿ ಅವಲಂಬಿಸಿರು ವವರು, ಕೂಲಿ ಕಾರ್ಮಿಕರೇ ಅಧಿಕ. ಹಲವು ಮನೆಗಳಿಗೆ ಇಂದಿಗೂ ಪ್ಲಾಸ್ಟಿಕ್‌ ಹೊದಿಕೆಯೇ ಛಾವಣಿ. 46 ಮನೆಗಳಿಗೆ ಶೌಚಾಲಯ ಇಲ್ಲ. ವಿದ್ಯುತ್‌ ಇದ್ದರೂ ಹೆಸರಿಗಷ್ಟೇ; ಬಳಕೆಗೆ ಸಿಗುವುದು ಕೆಲವೇ ತಾಸು. ಬಿಎಸ್ಸೆನ್ನೆಲ್‌ ಮೊಬೈಲ್‌ ಟವರ್‌ ಇದ್ದರೂ ಸ್ತಬ್ಧ. ವೈದ್ಯಕೀಯ ಸೇವೆ ಬೇಕಿದ್ದರೆ 30 ಕಿ.ಮೀ. ದೂರದ ಸುಳ್ಯ ಅಥವಾ 60 ಕಿ.ಮೀ. ದೂರದ ಪುತ್ತೂರಿಗೆ ತೆರಳಬೇಕು. ನಡುರಾತ್ರಿ ಅನಾರೋಗ್ಯ ಕಾಣಿಸಿಕೊಂಡರೆ ಕಷ್ಟ ಹೇಳತೀರದು. ಪ್ರಸವದ ಸಮಯ ತಾಯಿ ಮನೆಗೆ ಬರುವ ಗರ್ಭಿಣಿಯರು ಹೆರಿಗೆಗೆ ಸಾಕಷ್ಟು ದಿನಗಳ ಮುನ್ನವೇ ಊರು ತೊರೆದು ಅನ್ಯರ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ರಸ್ತೆ ಸರಿ ಇಲ್ಲವೆಂಬ ಕಾರಣಕ್ಕೆ ಕಾಂಜಿ ಎಂಬಲ್ಲಿನ ಗರ್ಭಿಣಿ ಯರಿಬ್ಬರು ತವರಿಗೆ ಬರಲು ಹಿಂದೇಟು ಹಾಕಿದ್ದರು.

ಬಳ್ಪ ಸಂಸದರ ಆದರ್ಶ ಗ್ರಾಮ ವೆಂದು ಆಯ್ಕೆ ಯಾ ದಾಗ ಊರು ಅಭಿವೃದ್ಧಿಯಾಗ ಬಹು ದೆಂದು ನಿರೀಕ್ಷಿಸಲಾಗಿತ್ತು. ಆಶ್ವಾಸನೆ ಗಳು ಭರ ವಸೆ ಗಳಾಗಿಯೇ ಉಳಿದಿವೆ. ಮನೆ ಪಕ್ಕದ ನಿವಾಸಿ ಯೊಬ್ಬರು ಕಾಯಿಲೆಯಿಂದ ಬಳಲಿ ದಾಗ ಅವರನ್ನು ನಾವೇ ಹೊತ್ತು ಆಸ್ಪತ್ರೆಗೆ ಸಾಗಿ ಸಿದ್ದೇವೆ.
– ತುಳಸಿ ಪೂಜಾರಿ, ಸ್ಥಳೀಯರು

ಸಮಸ್ಯೆಯ ವಿಚಾರ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ಈಗಷ್ಟೇ ಅರಿವಿಗೆ ಬಂದಿದೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
– ಎಸ್‌. ಅಂಗಾರ, ಶಾಸಕರು, ಸುಳ್ಯ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.