ತಾವೇ ಬೆಳೆದ ಬೆಳೆಯ ರುಚಿಯ ಕಾಣುವ ಭಾಗ್ಯ ಇವರಿಗೆ


Team Udayavani, Feb 14, 2018, 10:56 AM IST

14-Feb-4.jpg

ಕೊಣಾಜೆ: ನೀನೇ ಬೆಳೆದು ತಿನ್ನು, ಆಗ ಅನ್ನದ ಮೌಲ್ಯ ಗೊತ್ತಾಗುತ್ತದೆ ಎಂಬುದು ಹಿರಿಯರು ಸದಾ ಹೇಳುವ
ಮಾತು.

ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದಾರೆ ಈ ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು. ಮಂಗಳೂರಿನ ರಥಬೀದಿಯ ಡಾ. ದಯಾನಂದ ಪೈ, ಸತೀಶ್‌ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 250 ವಿದ್ಯಾರ್ಥಿಗಳು ಊಟ ಮಾಡುತ್ತಿರುವುದು ತಾವು ಬೆಳೆದ ಅಕ್ಕಿಯನ್ನೇ.

ಇಂದು ಕಾಲೇಜಿನಲ್ಲಿ ಬಿಸಿಯೂಟಕ್ಕೆ ಚಾಲನೆ ದೊರಕಲಿದೆ. ಹಡಿಲು ಬಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳು ಐದು ತಿಂಗಳ ಕಾಲ ಉಳುಮೆಯಿಂದ ಕೊಯ್ಲುವರೆಗೆ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅದೇ ಫ‌ಸಲನ್ನೇ ಈಗ ಬಿಸಿಯೂಟಕ್ಕೆ ಬಳಸಲಾಗುತ್ತಿದೆ.

ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಕೊಣಾಜೆ ಸಮೀಪದ ಅಣ್ಣೆರೆಪಾಲು, ದೇವಂದಬೆಟ್ಟ, ಗಟ್ಟಿಮೂಲೆಯಲ್ಲಿ ಸುಮಾರು 20 ವರ್ಷಗಳಿಂದ ಕೃಷಿ ಮಾಡದೆ ಹಡಿಲು ಬಿದ್ದಿದ್ದ ನಾಲ್ಕು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಪ್ರಾರಂಭಿಸಿದ್ದರು. ಆಗಸ್ಟ್‌ ನ
ಪ್ರಾರಂಭದಲ್ಲಿ ಭೂಮಿಯ ಸರ್ವೆ ನಡೆಸಿ ಸ್ವಾಂತಂತ್ರೋತ್ಸವವನ್ನು ಕೃಷಿ ನಡೆಸುವ ಮೂಲಕ ಆಚರಿಸಿದ್ದರು. 

ಗದ್ದೆಯಲ್ಲಿನ ಕಳೆಯನ್ನು ತೆಗೆದು, ಟಿಲ್ಲರ್‌ ಮೂಲಕ ಉಳುಮೆ ನಡೆಸಿ, ಬೀಜ ಬಿತ್ತಿ, ಸಸಿಯಾದ ಬಳಿಕ ತೆಗೆದು ನಾಟಿ ಮಾಡಿದ್ದರು. ಡಿ. 28ರಿಂದ ಜ. 4ರವರೆಗೆ ಎನ್ನೆಸ್ಸೆಸ್‌ ಕ್ಯಾಂಪ್‌ ಅಣ್ಣೆರೆಪಾಲಿನಲ್ಲಿ ನಡೆಸಿ ಬೆಳೆದಿದ್ದ ಪೈರನ್ನು ಕಟಾವು ಮಾಡಿ, ಭತ್ತವನ್ನು ಬೇರ್ಪಡಿಸಿ, ಸ್ಥಳೀಯ ಅಕ್ಕಿ ಗಿರಣಿಯಲ್ಲಿ ಅಕ್ಕಿಯನ್ನಾಗಿಸಿಕೊಂಡು ಕಾಲೇಜಿಗೆ ಹಸ್ತಾಂತರಿಸಿದ್ದರು.

ಈ ಕೃಷಿ ಕಾರ್ಯದಲ್ಲಿ ರೋವರ್ ಆ್ಯಂಡ್‌ ರೇಂಜರ್, ಸ್ನಾತಕೋತ್ತರ ವಿದ್ಯಾರ್ಥಿಗಳು, ಪದವಿ ವಿದ್ಯಾರ್ಥಿಗಳು
ಸಹಕರಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್‌ ಹೆಬ್ಟಾರ್‌, ಎನ್ನೆಸ್ಸೆಸ್‌ ಯೋಜನಾಧಿಕಾರಿಗಳಾದ ಡಾ| ನವೀನ್‌ ಎನ್‌. ಕೊಣಾಜೆ, ಪ್ರೊ| ಜೆಫ್ರಿ ರಾಡ್ರಿಗಾಸ್‌, ಯೋಜನಾಧಿಕಾರಿ ಡಾ| ನಾಗವೇಣಿ ಮಂಚಿ ಸಲಹೆ-ಸೂಚನೆ ನೀಡಿದ್ದರು. ಕೃಷಿ ಕಾರ್ಯಕ್ಕೆ ಹರೇಕಳ ದೇವರಾಜ ರೈ ಆರ್ಥಿಕ ಸಹಕಾರ ನೀಡಿದರೆ, ರಾಜ್ಯ ರೈತ ಸಂಘ ಹಸಿರು ಸೇನೆಯ ಮುಖಂಡ ಮನೋಹರ ಶೆಟ್ಟಿ, ಸ್ಥಳೀಯ ಗ್ರಾಮ ಪಂಚಾಯತ್‌ ಸದಸ್ಯರಾದ ರಾಮಚಂದ್ರ ಗಟ್ಟಿ ಮೇಲ್ತೋಟ, ಗೋವಿಂದ ಗೌಡ, ರಾಜೀವಿ ಶೆಟ್ಟಿ ಹೊಸಮನೆ ಮತ್ತು ನರ್ಸುಗೌಡ ಮಾರ್ಗದರ್ಶನ ನೀಡಿದ್ದರು.

ಹದಿನೈದು ಕ್ವಿಂಟಾಲ್‌ ಭತ್ತ
ನಾಲ್ಕು ಎಕ್ರೆಯಲ್ಲಿ ಸುಮಾರು 20 ಕ್ವಿಂಟಾಲ್‌ ಭತ್ತದ ನಿರೀಕ್ಷೆಯಿತ್ತಾದರೂ, 15 ಕ್ವಿಂ. ಭತ್ತವನ್ನು ವಿದ್ಯಾರ್ಥಿಗಳು
ಬೆಳೆದಿದ್ದರು. ಕೃಷಿ ಕಾರ್ಯ ತಡವಾಗಿ ಪ್ರಾರಂಭಿಸಿದ್ದರಿಂದ ಕೆಲವೆಡೆ ಕೀಟಬಾಧೆ ತಟ್ಟಿತು. ಕಾಸರಗೋಡು ಸಹಿತ
ಮಂಗಳೂರಿನ ಒಳಪ್ರದೇಶದಿಂದ ಪ್ರತೀ ವಾರ ವಿದ್ಯಾರ್ಥಿಗಳು ಕೊಣಾಜೆಗೆ ಆಗಮಿಸಿ ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದರು.

ಮೂರು ವರ್ಷಕ್ಕೆ ದತ್ತು
ಕೊಣಾಜೆ ಗ್ರಾಮದ ಎರಡು ವಾರ್ಡ್ ಗಳನ್ನು ಕಾಲೇಜಿನ ಎನ್ನೆಸ್ಸೆಸ್‌ ಘಟಕ ದತ್ತು ಸ್ವೀಕರಿಸಿದ್ದು, ಮೂರು ವರ್ಷ
ಭತ್ತದ ಕೃಷಿಯೊಂದಿಗೆ, ಸಾಮಾಜಿಕ, ಅರಣ್ಯ, ಇಂಗುಗುಂಡಿ ರಚನೆ, ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆಯನ್ನೂ ಕೈಗೆತ್ತಿಕೊಂಡಿದೆ. ಈಗಾಗಲೇ ಇಂಗು ಗುಂಡಿ ಮತ್ತು ಸಾಮಾಜಿಕ ಅರಣ್ಯ ರಚನೆ ಆರಂಭವಾಗಿದೆ. ಕಾಲೇಜಿನ ಈ ಕಾರ್ಯಕ್ಕೆ ಕೊಣಾಜೆ ಗ್ರಾ.ಪಂ., ಸ್ಥಳೀಯ ಸಂಘ ಸಂಸ್ಥೆಗಳು, ಮಾಧ್ಯಮ ಕೇಂದ್ರ ಉಳ್ಳಾಲ ಸಹಿತ ಅಣ್ಣೆರೆಪಾಲು ನಾಗರಿಕರು ಸಹಕಾರ ನೀಡಿದ್ದಾರೆ.

ಸೌಲಭ್ಯ ಕಲ್ಪಿಸಲಾಗುವುದು
ಜಿಲ್ಲೆಯಲ್ಲಿ ಬಿಸಿಯೂಟ ನೀಡುತ್ತಿರುವ ಎರಡನೇ ಕಾಲೇಜು ನಮ್ಮದು. ಆರಂಭದಲ್ಲಿ 250ರಿಂದ 300 ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲಾಗುತ್ತಿದ್ದು, ಮುಂದಿನ ವರ್ಷ ದಾನಿಗಳು, ಹಳೇ ವಿದ್ಯಾರ್ಥಿ ಸಂಘ ಇತ್ಯಾದಿ ಸಂಘಟನೆಗಳ ನೆರವು
ಪಡೆದು ಎಲ್ಲರಿಗೂ ಸೌಲಭ್ಯ ಕಲ್ಪಿಸಲಾಗುವುದು. ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳೇ ಭತ್ತ ಬೆಳೆದು ಅದರ ಅಕ್ಕಿಯಲ್ಲಿ ಬಿಸಿಯೂಟ ಆರಂಭಿಸಿರುವ ಏಕೈಕ ಕಾಲೇಜು ನಮ್ಮದು. ವಿದ್ಯಾರ್ಥಿಗಳನ್ನು ಬಳಸಿಕೊಂಡು ಮುಂದಿನ ಸಾಲಿನಲ್ಲಿ ಇನ್ನಷ್ಟು ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಯೋಜನೆ ಇದೆ.
– ಪ್ರೊ| ರಾಜಶೇಖರ್‌ ಹೆಬ್ಟಾರ್‌ ಸಿ.,
  ಪ್ರಾಂಶುಪಾಲರು

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.