ತೊಡಿಕಾನ ಅಂಗನವಾಡಿ ಕಟ್ಟಡ ಕಾಮಗಾರಿ ಸ್ಥಗಿತ: ಪುಟಾಣಿಗಳಿಗೆ ತೊಂದರೆ


Team Udayavani, Dec 28, 2017, 4:32 PM IST

28-Dec-16.jpg

ಬೆಳ್ಳಾರೆ: ತೊಡಿಕಾನ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಮೂರು ವರ್ಷ ಕಳೆಯುತ್ತಿದ್ದು, ಇಲ್ಲಿಯ ಪುಟಾಣಿಗಳು ಸಮಸ್ಯೆಗೊಳಗಾಗಿದ್ದಾರೆ. 2015ರಲ್ಲಿ ಇಲಾಖೆ ಅನುದಾನ 4.18 ಲಕ್ಷ ರೂ. ಹಾಗೂ ತಾಲೂಕು ಪಂಚಾಯತ್‌ ಅನುದಾನ 75 ಸಾವಿರ ರೂ.ಗಳಲ್ಲಿ ಅಂಗವಾಡಿಯ ನೂತನ ಕಟ್ಟಡದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಅಂಗವಾಡಿಯ ಸ್ಲ್ಯಾಬ್, ಕಿಚನ್‌, ಸ್ಟಾಕ್‌ ರೂಂ, ಶೌಚಾಲಯದ ಕೆಲಸ ಮುಗಿದಿದೆ. ಇದಕ್ಕೆ ಟೈಲ್ಸ್‌ ಅಳವಡಿಸುವ ಕೆಲಸ ಬಾಕಿ ಉಳಿದಿದೆ. ಅಂಗನವಾಡಿಯ ಎದುರಿನ ಮಕ್ಕಳ ಕೊಠಡಿಗೆ ಟೈಲ್ಸ್‌ ಹಾಸಲಾಗಿದೆ. ಇನ್ನೂ ಕಿಟಕಿ – ಬಾಗಿಲುಗಳ ಕೆಲಸ, ವಿದ್ಯುತ್‌ ಸಂಪರ್ಕದ ಕೆಲಸ ಬಾಕಿ ಇವೆ. ಅನುದಾನ ಸಾಕಾಗುತ್ತಿಲ್ಲ ಎಂಬ ನೆಲೆಯಲ್ಲಿ ಎರಡು ವರ್ಷಗಳ ಹಿಂದೆಯೇ ಕಾಮಗಾರಿ ಸ್ಥಗಿತಗೊಳಿಸಲಾಗಿದೆಯ

ನಾದುರಸ್ತಿಯಲ್ಲಿ ಹಳೆ ಕಟ್ಟಡ
ಅಂಗವಾಡಿಗೆ ನಿತ್ಯ 30 ಮಕ್ಕಳು ಬರುತ್ತಿದ್ದು, ಇವರೆಲ್ಲರೂ ಹಳೆಯ ಹಾಗೂ ನಾದುರಸ್ತಿಯಲ್ಲಿರುವ ಕಟ್ಟಡದಲ್ಲೇ ಆತಂಕದಿಂದ ಕಾಲ ಕಳೆಯುವ ಸ್ಥಿತಿ ಇದೆ. ವಿದ್ಯಾರ್ಥಿಗಳಿಗೆ ಅಪಾಯವಾಗುವ ಸಾಧ್ಯತೆ ಇದ್ದರೂ ಬೇರೆ ಕಟ್ಟಡದ ವ್ಯವಸ್ಥೆಯಿಲ್ಲ. ಅಂಗವಾಡಿ ತೊಡಿಕಾನ ಸರಕಾರಿ ಶಾಲೆಯ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕುಡಿಯುವ ನೀರು ಹಾಗೂ ಇತರ ದಿನ ನಿತ್ಯದ ಕೆಲಸಗಳಿಗೆ ಶಾಲೆಯ ಸೌಲಭ್ಯಗಳನ್ನೇ ಅವಲಂಬಿಸಿದೆ.

ಕಾರ್ಯಕರ್ತೆಯರಿಂದ ಗ್ಯಾಸ್‌ ವೆಚ್ಚ
ಅಡುಗೆ ಅನಿಲ ಪೂರೈಕೆಗಾಗಿ ಅಂಗನವಾಡಿಗೆ ಇಲಾಖೆ ವತಿಯಿಂದ ವರ್ಷಕ್ಕೆ 200 ರೂ. ನೀಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ. ಎರಡು ತಿಂಗಳಿಗೆ ಒಂದು ಸಿಲಿಂಡರ್‌ ಗ್ಯಾಸ್‌ ಬೇಕಾಗುತ್ತದೆ. ಇದರಲ್ಲಿ ಗ್ಯಾಸ್‌ಗೆ ಹಣ ನೀಡಬೇಕು, ಸಾಗಾಟ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಹಲವು ಸಲ ಅಂಗನವಾಡಿ ಕಾರ್ಯಕರ್ತೆಯರೇ ಇದಕ್ಕೆ ಖರ್ಚು ಮಾಡುತ್ತಾರೆ.

ಕ್ರೀಡಾಂಗಣದ ಸಮಸ್ಯೆ
ಅಂಗವಾಡಿ ಮಕ್ಕಳಿಗೆ ಈಗ ಕ್ರೀಡಾಂಗಣದ ಸಮಸ್ಯೆಯೂ ಎದುರಾಗಿದೆ. ನೂತನ ಕಟ್ಟಡದ ಕೆಲಸ ಮುಗಿಯದಿರುವ ಕಾರಣ ಕ್ರೀಡಾಂಗಣ ಇಲ್ಲದಂತಾಗಿದೆ. ನೂತನ ಕಟ್ಟಡ ಪೂರ್ಣಗೊಂಡು, ಹಳೆಯ ಕಟ್ಟಡ ಕೆಡವಿದರೆ ಕ್ರೀಡಾಂಗಣಕ್ಕೆ ಜಾಗ ದೊರೆಯುತ್ತದೆ. ಸ್ಥಗಿತಗೊಂಡ ಅಂಗವಾಡಿ ಕಟ್ಟಡದ ನೂತನ ಕಟ್ಟದ ಕಾಮಗಾರಿ ಮುಂದುವರಿಸುವುದಕ್ಕಾಗಿ ಇನ್ನಷ್ಟು ಅನುದಾನ ಒದಗಿಸಲು ಇಲಾಖೆ ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸಬೇಕೆಂದು ಸ್ಥಳೀಯ ಮುಖಂಡ ಜನಾರ್ದನ ಬಾಳೆಕಜೆ ಹಾಗೂ ಮಕ್ಕಳ ಹೆತ್ತವರು ಒತ್ತಾಯಿಸಿದ್ದಾರೆ.

ಅನುದಾನದ ಕೊರತೆ
ಅನುದಾನದ ಕೊರತೆಯಿಂದ ತೊಡಿಕಾನ ಅಂಗವಾಡಿ ಕಟ್ಟಡದ ಕೆಲಸ ಸ್ಥಗಿತಗೊಂಡಿದೆ. ಇದಕ್ಕೆ ಅನುದಾನ ಒದಗಿಸಿ ಕೊಡುವಂತೆ ಶಾಸಕರನ್ನು ಕೇಳಿಕೊಳ್ಳಲಾಗಿದೆ.
– ಸರಸ್ವತಿ, ಸಿ.ಡಿ.ಪಿ.ಒ. ಸುಳ್ಯ

ಸಹಕಾರ ನೀಡಿ
ತೊಡಿಕಾನ ಶಾಲಾ ಬಳಿ ಇರುವ ಅಂಗವಾಡಿ ಕಟ್ಟಡದ ಕೆಲಸ ಸ್ಥಗಿತಗೊಂಡು ಮೂರು ವರ್ಷಗಳಾಗುತ್ತಾ ಬಂತು. ಈ ಕಾಮಗಾರಿಯನ್ನು ಮುಂದುವರಿಸಬೇಕು ಇದಕ್ಕೆ ಜನಪ್ರತಿನಿಧಿಗಳು ಇಲಾಖೆಯವರು ಸಹಕಾರ ನೀಡಬೇಕು.
– ಜನಾರ್ದನ ಬಾಳೆಕಜೆ,ಸ್ಥಳೀಯ ನಿವಾಸಿ

ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

Puuturu-VHP

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

money

Mangaluru: ಡ್ರಗ್ಸ್‌ ಪಾರ್ಸೆಲ್‌ ಕಸ್ಟಮ್ಸ್‌ ವಶ ಹೆಸರಲ್ಲಿ 68 ಲಕ್ಷ ರೂಪಾಯಿ ವಂಚನೆ

Accident-logo

Siddapura: ಸ್ಕೂಟಿ ಸ್ಕಿಡ್‌: ತಂದೆ-ಮಗಳು ಗಂಭೀರ

Udupi: ಗೀತಾರ್ಥ ಚಿಂತನೆ 73 ಸ್ವಾರ್ಥಕ್ಕಾಗಿ ಕುಲನಾಶಕ್ಕೂ ಸಿದ್ಧರಾದವರು

Udupi: ಗೀತಾರ್ಥ ಚಿಂತನೆ-73 ಸ್ವಾರ್ಥಕ್ಕಾಗಿ ಕುಲನಾಶಕ್ಕೂ ಸಿದ್ಧರಾದವರು

High Court: 6 ಐಎಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ; ತಡೆ ವಿಸ್ತರಣೆ

High Court: 6 ಐಎಎಸ್‌ ಅಧಿಕಾರಿಗಳ ವಿರುದ್ಧ ಪ್ರಕರಣ; ತಡೆ ವಿಸ್ತರಣೆ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ

Mandya: ದೇಶದ ಮೊದಲ “ರೈತರ ಶಾಲೆ’ ಶೀಘ್ರ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puuturu-VHP

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

15

Belthangady: ಆಮ್ನಿ ಕಾರು ಬೆಂಕಿಗಾಹುತಿ

de

Gerukatte: ಕೆರೆಯಲ್ಲಿ ಅಪರಿಚಿತ ಶವ ಪತ್ತೆ

6

Belthangady: ಕಡೆಗೂ ಕಜಕ್ಕೆ ಶಾಲೆಯವರೆಗೆ ಬಂತು ಸರಕಾರಿ ಬಸ್‌

5

Mudipinadka-ಸುಳ್ಯಪದವು: ರಸ್ತೆ ಹೊಂಡ ತಪ್ಪಿಸುವುದೇ ಸಾಹಸ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

KOTA-2

Udupi: ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ ಜ.15ರೊಳಗೆ ಪೂರ್ಣಗೊಳಿಸಿ: ಸಂಸದ ಕೋಟ

Puuturu-VHP

Putturu: ವಿಶ್ವ ಹಿಂದೂ ಪರಿಷತ್‌ನಿಂದ ಸಾಮಾಜಿಕ ಸಮರಸದ ಭಾವ: ಗೋಪಾಲ್‌ ಜಿ

money

Mangaluru: ಡ್ರಗ್ಸ್‌ ಪಾರ್ಸೆಲ್‌ ಕಸ್ಟಮ್ಸ್‌ ವಶ ಹೆಸರಲ್ಲಿ 68 ಲಕ್ಷ ರೂಪಾಯಿ ವಂಚನೆ

Suside-Boy

Udupi: ಉಸಿರಾಟದ ತೊಂದರೆ: ವ್ಯಕ್ತಿ ಸಾವು

Accident-logo

Siddapura: ಸ್ಕೂಟಿ ಸ್ಕಿಡ್‌: ತಂದೆ-ಮಗಳು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.