ಇಂದು ಸಂಭ್ರಮ ಸಡಗರದ ಕ್ರಿಸ್ಮಸ್‌


Team Udayavani, Dec 25, 2017, 10:41 AM IST

25-Dec-5.jpg

ಪುತ್ತೂರು: ಅದು ಡಿಸೆಂಬರ್‌ 24ರ ಮಧ್ಯರಾತ್ರಿ. ಬೆತ್ಲೆಹೆಮ್‌ನ ಒಂದು ಗೋದಲಿ (ದನದ ಹಟ್ಟಿ)ಯಲ್ಲಿ ಏಸುಕ್ರಿಸ್ತನ ಜನನವಾಗುತ್ತದೆ. ಪಾಪವಿಮೋಚನೆಗಾಗಿ ಅವತಾರ ಎತ್ತಿದ ಈ ಮಹಾಪುರುಷನ ಹುಟ್ಟಿದ ದಿನವನ್ನು ಹಾಗೂ ಮುಂದಿನ ಎರಡು ವಾರಗಳ ಕಾಲ ಕ್ರಿಸ್ಮಸ್‌ ಹಬ್ಬವಾಗಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ.

ಎಲ್ಲ ಕಡೆಯಂತೆ ಪುತ್ತೂರಿನಲ್ಲಿಯೂ ಕ್ರಿಸ್ಮಸ್‌ ಹಬ್ಬದ ತಯಾರಿಗಳು ಭರದಿಂದಲೇ ಸಾಗಿವೆ. ವರ್ಷದ ಕೊನೆಯ ಹಬ್ಬ, ಇದರ ಜತೆಗೆ ಹೊಸವರ್ಷವನ್ನು ಎದುರುಗೊಳ್ಳುವ ಸಡಗರ. ಈ ಎರಡೂ ಕಾರ್ಯಕ್ರಮಕ್ಕೂ ಭರದ ಸಿದ್ಧತೆ ನಡೆಯುತ್ತಿದೆ.

ಕ್ರಿಸ್ಮಸ್‌ ಹಬ್ಬದ ಮುನ್ನದಿನವಾದ ಡಿ. 24ರಂದು ರಾತ್ರಿ 7 ಗಂಟೆಗೆ ಪುತ್ತೂರು ಮಾಯಿದೆ ದೇವುಸ್‌ ಚರ್ಚ್‌ನಲ್ಲಿ ಬಲಿಪೂಜೆ, ಕ್ರಿಸ್ಮಸ್‌ ಕ್ಯಾರಲ್ಸ್‌ ನಡೆಯಲಿದೆ. ಕ್ಯಾರಲ್ಸ್‌ ಎಂದರೆ ಸ್ತುತಿಗೀತೆ ಎಂದರ್ಥ. ಕ್ರಿಸ್ತ ಹುಟ್ಟಿದ ನೆನಪಿನಲ್ಲಿ ಹಾಡಿಹೊಗಳಿ ಸಂಭ್ರಮಿಸುವ ಕಾರ್ಯಕ್ರಮವಿದು.

ಡಿ. 25ರ ಮುಂಜಾನೆಯಿಂದಲೇ ಕ್ರಿಸ್ಮಸ್‌ನ ಸಡಗರ ತುಂಬಿಕೊಳ್ಳುತ್ತದೆ. ಮಾಯಿದೆ ದೇವುಸ್‌ ಚರ್ಚ್‌ನಲ್ಲಿ ಬೆಳಗ್ಗೆ
6.30, 8.15ಕ್ಕೆ ಪೂಜೆ ನಡೆಯಲಿದೆ. ಬಳಿಕ ಸಂಜೆ 4.30ಕ್ಕೆ ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಬಳಿಯಿಂದ ಮೆರವಣಿಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಾಗಿ ಸಾಂತಾಕ್ಲಾಸ್‌, 6 ಟ್ಯಾಬ್ಲೋಗಳು, ಸ್ತುತಿಗೀತೆ ಹಾಡಲಾಗುವುದು.

ಮಾಯಿದೆ ದೇವುಸ್‌ ಚರ್ಚ್‌ ಮುಂಭಾಗ ಮೆರವಣಿಗೆ ಸಮಾಪನ ಗೊಳ್ಳಲಿದೆ. ಬಳಿಕ ಡಾನ್‌ಬೋಸ್ಕೋ ಕ್ಲಬ್‌ ಹಾಗೂ ವೈಎಂಸಿಎ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ವಾರ ಅಂದರೆ ಜನವರಿ 7ರಂದು ಎಫಿಮನಿ ಹಬ್ಬ. ಅಲ್ಲಿವರೆಗೆ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ.

ಗೋದಲಿಯಲ್ಲಿ ಕ್ರಿಸ್ತನ ಜನನ
ಗೋದಲಿ ಎಂದರೆ ಬೆತ್ಲೆಹೆಮ್‌ನಲ್ಲಿ ಏಸುಕ್ರಿಸ್ತ ಹುಟ್ಟಿದ ಒಂದು ಹಟ್ಟಿಯ ಪ್ರತಿಕೃತಿ. ಹೆರಡ್‌ ವಂಶಸ್ಥ ಕ್ವಿರಿನ್‌ ಎಂಬ ಅರಸ ಯಹೂದ್ಯರ ಜನಗಣತಿಗಾಗಿ ಕರೆ ಕೊಡುತ್ತಾನೆ. ಜನಗಣತಿ ಕಾರ್ಯಕ್ಕಾಗಿ ನಸ್ರತ್‌ನಿಂದ ಬೆತ್ಲೆಹೆಮ್‌ಗೆ ಬಂದಿದ್ದ
ಮರಿಯಮ್ಮ ತುಂಬು ಗರ್ಭಿಣಿ. ರಾತ್ರಿ ಪ್ರಸವ ನೋವು ಕಾಣಿಸಿಕೊಳ್ಳುತ್ತದೆ. ಜಾಗ ಸಿಗದೇ ಬಳಿಯಲ್ಲೇ ಇದ್ದ ಹಟ್ಟಿಯಲ್ಲಿ ಏಸುಕ್ರಿಸ್ತನ ಜನನವಾಗುತ್ತದೆ.

ಬಡವರಿಗಾಗಿ, ದೀನ ದಲಿತರಿಗಾಗಿ ಏಸು ಹುಟ್ಟುತ್ತಾನೆ ಎನ್ನುವುದೇ ಇದರ ಸಂದೇಶ. ಬಡತನದ ಪ್ರತೀಕದಂತಿರುವ
ದನದ ಹಟ್ಟಿಯನ್ನು ಪುಣ್ಯಭೂಮಿಯಾಗಿ ಪರಿವರ್ತಿಸುತ್ತಾನೆ. ಸ್ಥಳೀಯ ಕುರಿಗಾಹಿಗಳಿಗೆ, ಪಾಪ ವಿಮೋಚನೆಗಾಗಿ ಅವತಾರ ಪುರುಷ ಜನಿಸಿದ್ದಾನೆ ಎಂದು ದೇವದೂತರು ಪ್ರಥಮ ಸಂದೇಶ ನೀಡುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಏಸುಕ್ರಿಸ್ತನನ್ನು ಹುಡುಕಿಕೊಂಡು ಜ್ಯೋತಿಷಿಗಳು ಆಗಮಿಸುತ್ತಾರೆ. ಇವರಿಗೆ ನಕ್ಷತ್ರವೊಂದು ದಾರಿ ತೋರಿಸಿತು ಎಂದು ನಂಬಲಾಗಿದೆ. ಇದರ ಸಂಕೇತವಾಗಿ ಗೊದಲಿಯ ಮುಂಭಾಗದಲ್ಲಿ ನಕ್ಷತ್ರವನ್ನು ಇಡಲಾಗಿದೆ.

ಕ್ರಿಸ್ಮಸ್‌ ಹಬ್ಬಕ್ಕೆ ಕೆಲವು ದಿನಗಳ ಮುಂಚಿತವಾಗಿ ಗೊದಲಿ ನಿರ್ಮಾಣಕ್ಕೆ ಮುಂದಾಗುತ್ತಾರೆ. ಬಡವರ ಚಿತ್ರಣವನ್ನೇ ಹೋಲುವ ಮಾದರಿಯನ್ನು ತುಂಬಾ ಅಚ್ಚುಕಟ್ಟಾಗಿ ರೂಪಿಸಲಾಗುತ್ತದೆ. ಮಾತ್ರವಲ್ಲ ಬೆತ್ಲೆಹೆಮ್‌ನ ನೈಸರ್ಗಿಕ ಪರಿಸರವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ನಡೆಯುತ್ತದೆ. ಜೋರ್ದಾನ್‌ ನದಿ, ದನದ ಹಟ್ಟಿ, ಏಸು ಕ್ರಿಸ್ತ ಹಾಗೂ ಹೆತ್ತವರ ಮೂರ್ತಿ, ಸ್ಥಳೀಯವಾಗಿ ಕುರಿಗಾಹಿಗಳು ಮತ್ತು ಕುರಿ, ನಕ್ಷತ್ರ, ಪೈರು, ಮನೆ, ಕಲ್ಲು-ದಿಣ್ಣೆಗಳು, ಬೆಟ್ಟ, ಮರಳುಗಾಡು, ಒಂಟೆಗಳು ಮಾತ್ರವಲ್ಲ ಜನನದ ವಿವಿಧ ಚಿತ್ರಗಳನ್ನು ಇದರಲ್ಲಿ ಕಾಣಬಹುದು.

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

11-bantwala

Bantwala: ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Sullia: ಅಭಿವೃದ್ಧಿ ಕಾಣದ ಪೆರ್ಮಾಜೆ-ಕೋಟೆಗುಡ್ಡೆ-ಪಂಬೆತ್ತಾಡಿ ರಸ್ತೆ

Thumbe: ಅಗೆದಲ್ಲಿ ಕಡೆಗೂ ಡಾಮರು

Thumbe: ಅಗೆದಲ್ಲಿ ಕಡೆಗೂ ಡಾಮರು

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

Puttur: ಶೂನ್ಯ ತ್ಯಾಜ್ಯದತ್ತ ಪುತ್ತೂರು; ಹಸಿ ಕಸದಿಂದ ಬಯೋಗ್ಯಾಸ್‌ ತಯಾರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.