ವಿವಿಧ ಯೋಜನೆಗಳಿಗೆ ಇಂದು ಶಿಲಾನ್ಯಾಸ
Team Udayavani, Mar 15, 2018, 11:27 AM IST
ಮಹಾನಗರ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಹತ್ವದ ಬೃಹತ್ ಯೋಜನೆಗಳಿಗೆ ಮಾ. 15ರಂದು ಕ್ಷೇತ್ರದ ಶಾಸಕ ಬಿ.ಎ. ಮೊಯಿದಿನ್ ಬಾವ ಅವರು ಶಿಲಾನ್ಯಾಸ ನಡೆಸಲಿದ್ದಾರೆ ಎಂದು ಮೇಯರ್ ಭಾಸ್ಕರ ಕೆ. ತಿಳಿಸಿದರು.
ನಗರದ ಪಾಲಿಕೆಯಲ್ಲಿನ ಶಾಸಕ ಮೊಯಿದಿನ್ ಬಾವಾ ಅವರ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 126 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಸುರತ್ಕಲ್ ಮಾರುಕಟ್ಟೆಯ ಪ್ರಥಮ ಹಂತದ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದೆ. ಪ್ರಥಮ ಹಂತದಲ್ಲಿ 61 ಕೋಟಿ ರೂ. ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಅದರಲ್ಲಿ 11 ಕೋಟಿ ರೂ. ಪಾಲಿಕೆ ಅನುದಾನವಾಗಿದ್ದು, ಉಳಿದ 50 ಕೋಟಿ ರೂ.ರಾಜ್ಯ ಸರಕಾರದ ವಿಶೇಷ ಅನುದಾನವಾಗಿದೆ ಎಂದರು.
ಸುಮಾರು 62.10 ಕೋಟಿ ರೂ. ಸುರತ್ಕಲ್ನಿಂದ ಕೈಕಂಬ ವೃತ್ತ ಗಣೇಶಪುರ ದೇವಸ್ಥಾನದ ವರೆಗಿನ ಪಿ.ಡಬ್ಲ್ಯು.ಡಿ. ಷಟ್ಪಥ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನಡೆಯಲಿದ್ದು, ಕಾಮಗಾರಿಗೆ 4.10 ಕೋಟಿ ರೂ. ಅನುದಾನ ಪಾಲಿಕೆ ನೀಡಿದ್ದು, ಉಳಿದ 58 ಕೋಟಿ ರೂ. ಅನುದಾನವು ಪಿ.ಡಬ್ಲ್ಯೂಡಿ. ಇಲಾಖೆಯದ್ದಾಗಿರುತ್ತದೆ. ಇದಲ್ಲದೆ, ಪ್ರೀಮಿಯರ್ ಎಫ್ಎಆರ್ ಫಂಡ್ನಿಂದ 113 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸುರತ್ಕಲ್-ಗುಡ್ಡೆ ಕೊಪ್ಲ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಲಿದೆ.
ಎಸ್ಎಫ್ಸಿಯು 2.25 ಕೋಟಿ ರೂ. ಅನುದಾನದಲ್ಲಿ ಸುರತ್ಕಲ್ ಮನಪಾ ವಲಯ ಕಚೇಗೆ ಶಿಲಾನ್ಯಾಸ ನಡೆಯಲಿದೆ. ನೀಡಿದೆ. ಹೊಸಬೆಟ್ಟು ಕಡಲಕಿನಾರೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದ್ದು, 5 ಕೋಟಿ ರೂ. ಬಂದರು ಮತ್ತು ಮೀನುಗಾರಿಕಾ ಇಲಾಖಾ ಅನುದಾನದಲ್ಲಿ ನೀಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಮಹಮ್ಮದ್, ಕಾರ್ಪೊ ರೇಟರ್ ದೀಪಕ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.