ಅಂತಿಮ ಹಂತದಲ್ಲಿ ಟೆಂಡರ್‌ ಪ್ರಕ್ರಿಯೆ: ಶೀಘ್ರ ಕಾಮಗಾರಿ ನಿರೀಕ್ಷೆ


Team Udayavani, Jul 26, 2018, 2:40 AM IST

railway-track-25-7.jpg

ವಿಶೇಷ ವರದಿ – ಮಹಾನಗರ: ಮೋರ್ಗನ್‌ ಗೇಟ್‌ ಸಮೀಪದ ನೇತ್ರಾವತಿ ರೈಲ್ವೇ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದವರೆಗಿನ ಒಂದೂವರೆ ಕಿ.ಮೀ. ಉದ್ದ ರೈಲು ಹಳಿ ದ್ವಿಗುಣಗೊಳಿಸುವ ಕಾಮಗಾರಿ ಶೀಘ್ರ ಕಾರ್ಯಾರಂಭವಾಗುವ ಸಾಧ್ಯತೆಯಿದೆ. 2016- 17ರಲ್ಲಿ  ರೈಲ್ವೇ ಇಲಾಖೆಯಿಂದ ಅನುಮೋದನೆಯಾದ ಈ ಯೋಜನೆ ಅನುಷ್ಠಾನವಾದರೆ, ಸೆಂಟ್ರಲ್‌ ನಿಲ್ದಾಣಕ್ಕೆ ರೈಲುಗಳು ನಿಲುಗಡೆ ಇಲ್ಲದೆ (ನೇತ್ರಾವತಿ ಸೇತುವೆ ಬಳಿ) ನೇರವಾಗಿ ಸಂಚರಿಸಲು ಅನುಕೂಲವಾಗಲಿದೆ.

ಈ ಹಳಿ ದ್ವಿಗುಣ ಕಾಮಗಾರಿಗೆ 2017ರ ಆ. 18ರಂದು ನಗರದಲ್ಲಿ ಶಿಲಾನ್ಯಾಸ ನಡೆದಿತ್ತು. ರೈಲ್ವೇ ಸಚಿವರಾಗಿದ್ದ ಸುರೇಶ್‌ ಪ್ರಭು ಅವರು ಹೊಸದಿಲ್ಲಿಯ ರೈಲ್ವೇ ಮಂಡಳಿ ಸಭಾಭವನದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದರು. 28.05 ಕೋಟಿ ರೂ. ವೆಚ್ಚದಲ್ಲಿ ಈ ಹಳಿ ದ್ವಿಗುಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅಂದು ತಿಳಿಸಲಾಗಿತ್ತು. ಆ ಬಳಿಕ ಈ ಯೋಜನೆ ಕುರಿತು ದೊಡ್ಡ ಮಟ್ಟದ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ, ಈಗ ಪ್ರಸ್ತಾವಿತ ಯೋಜನೆಯ ಅಂದಾಜು ಮೊತ್ತ 38 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಬಗ್ಗೆ ಜೂ. 29ರಂದು ನಗರದಲ್ಲಿ ಸಂಸದ ನಳಿನ್‌ ಅವರ ನೇತೃತ್ವದಲ್ಲಿ ನಡೆದ ರೈಲ್ವೇ ಇಲಾಖೆ ಸಭೆಯಲ್ಲಿ ಮಾಹಿತಿ ನೀಡಲಾಗಿತ್ತು. ಈಗ ನೇತ್ರಾವತಿ ಸೇತುವೆಯಿಂದ ಬಲಭಾಗದ ರೈಲು ಹಳಿಯು ಮಂಗಳೂರು ಜಂಕ್ಷನ್‌ವರೆಗೆ ದ್ವಿಗುಣ ಗೊಂಡಿದೆ. ಆದರೆ, ನೇತ್ರಾವತಿ ಸೇತುವೆ ಯಿಂದ ಮಂಗಳೂರು ಸೆಂಟ್ರಲ್‌ ಹಾಗೂ ಸೆಂಟ್ರಲ್‌ನಿಂದ ಮಂಗಳೂರು ಜಂಕ್ಷನ್‌ (ಕಂಕನಾಡಿ) ಮಧ್ಯೆ ರೈಲು ದ್ವಿಗುಣಗೊಂಡಿಲ್ಲ. 

ಫಿಟ್‌ ಲೈನ್‌ ಶಿಪ್ಟ್
ರೈಲು ಹಳಿ ದ್ವಿಗುಣಗೊಳ್ಳುವ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ನಲ್ಲಿ ಇನ್ನೊಂದು ಫ್ಲ್ಯಾಟ್‌ ಫಾರಂ ಕೂಡ ನಿರ್ಮಾಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈಗ ಸೆಂಟ್ರಲ್‌ ನಲ್ಲಿರುವ ‘ಫಿಟ್‌ ಲೈನ್‌’ ಅನ್ನು (ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ) ಸ್ಥಳಾಂತರಿಸಬೇಕಾಗುತ್ತದೆ. ಸದ್ಯ ಫಿಟ್‌ ಲೈನ್‌ ಅನ್ನು ಈಗಿರುವ ಜಾಗದಿಂದ ಸ್ವಲ್ಪ ದೂರಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಸ್ಥಳ ಕೂಡ ನಿಗದಿ ಮಾಡಲಾಗಿದೆ. ಮೊದಲಿಗೆ ಇದರ ಕಾಮಗಾರಿ ನಡೆದು, ಆ ಬಳಿಕ ರೈಲ್ವೇ ದ್ವಿಗುಣ ಹಾಗೂ ಹೆಚ್ಚುವರಿ ಫ್ಲ್ಯಾಟ್‌ಫಾರಂ ರಚನೆ ನಡೆಯಲಿದೆ. 

ರೈಲ್ವೆಯದ್ದೇ ಭೂಮಿ!
ರೈಲ್ವೇ ಇಲಾಖೆಯ ಮೂಲಗಳ ಪ್ರಕಾರ ನೇತ್ರಾವತಿ ಸೇತುವೆಯಿಂದ ಸೆಂಟ್ರಲ್‌ ವರೆಗಿನ ಹಳಿ ದ್ವಿಗುಣದ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ಭೂಮಿ ಇರುವುದಿಲ್ಲ ಎಂಬ ಮಾಹಿತಿ ಇದ್ದು, ರೈಲ್ವೇ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ಇನ್ನೊಂದು ಹಳಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಮೋರ್ಗನ್‌ ಗೇಟ್‌ ಸೇರಿದಂತೆ ಕೆಲವು ಕಡೆಯಲ್ಲಿ ಖಾಸಗಿ ಭೂಮಿ ಇದ್ದು, ಭೂಸ್ವಾಧೀನ ನಡೆಸಬೇಕಾಗಬಹುದು ಎಂಬ ಬಗ್ಗೆಯೂ ಮಾಹಿತಿ ಇದೆ. ಟೆಂಡರ್‌ ಪೂರ್ಣಗೊಂಡ ಬಳಿಕವಷ್ಟೇ ಈ ಪ್ರಕ್ರಿಯೆ ಅಂತಿಮವಾಗಲಿದೆ.

ಕೈಬಿಟ್ಟಿದ್ದ ಸೆಂಟ್ರಲ್‌
ಶೋರ್ನೂರುವಿನಿಂದ ಮಂಗಳೂರುವರೆಗೆ ರೈಲು ಹಳಿ ದ್ವಿಗುಣ ಕಾಮಗಾರಿ ಯನ್ನು ಸುದೀರ್ಘ‌ ವರ್ಷದ ಹಿಂದೆ ಕೈಗೊಳ್ಳಲಾಗಿತ್ತು. ಆದರೆ, ಮಂಗಳೂರು ಸೆಂಟ್ರಲ್‌ ಗೆ ಬರಬೇಕಾದ ದ್ವಿಗುಣ ಸವಲತ್ತು ಮಂಗಳೂರು ಜಂಕ್ಷನ್‌ (ಕಂಕನಾಡಿ) ಪಾಲಾಯಿತು. ಕೇರಳದಿಂದ ಬರುವ ರೈಲುಗಳು ಮಂಗಳೂರು ಜಂಕ್ಷನ್‌ ಅನ್ನೇ ನೆಚ್ಚಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ಗೆ ರೈಲು ದ್ವಿಗುಣ ಸವಲತ್ತು ದೊರೆತಿರಲಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಈ ತಾರತಮ್ಯವನ್ನು ಖಂಡಿಸಿ ಕರಾವಳಿ ಭಾಗದ ರೈಲ್ವೇ ಹೋರಾಟಗಾರರು ಕೇಂದ್ರ ಸರಕಾರದ ಗಮನಕ್ಕೆ ತಂದ ಬಳಿಕ ಈಗ ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗಿನ ರೈಲು ಹಳಿಯು ದ್ವಿಗುಣ ಪ್ರಕ್ರಿಯೆಗೆ ಜೀವಬಂದಿದೆ. 

ತಾಸುಗಟ್ಟಲೆ ಕಾಯಬೇಕಾಗಿಲ್ಲ !
ಈಗ ಸೆಂಟ್ರಲ್‌ ನಿಂದ ನೇತ್ರಾವತಿ ಸೇತುವೆವರೆಗೆ ಒಂದು ರೈಲು ಹಳಿ ಇರುವ ಕಾರಣದಿಂದ, ಸೆಂಟ್ರಲ್‌ ನಿಂದ ಒಂದು ರೈಲು ಹೊರಟ ಅನಂತರ ಅದು ನೇತ್ರಾವತಿ ಸೇತುವೆ ದಾಟುವವರೆಗೆ, ಕೇರಳ ಭಾಗದಿಂದ ಇನ್ನೊಂದು ರೈಲು ಬರಲು ಅವಕಾಶವಿಲ್ಲ. ಹೀಗಾಗಿ ಕೇರಳ ಭಾಗದಿಂದ ಬರುವ ರೈಲು ಸುಮಾರು 10- 15 ನಿಮಿಷ ನೇತ್ರಾವತಿ ಸೇತುವೆ ಬಳಿ ನಿಲ್ಲಬೇಕಾಗುತ್ತದೆ. ಕಾದು ಕಾದು ಸುಸ್ತಾಗುವ ಕೆಲವು ಪ್ರಯಾಣಿಕರು ಅಲ್ಲೇ ರೈಲಿನಿಂದಿಳಿದು ಸೇತುವೆಯ ಬಲಭಾಗದ ದಾರಿಯಲ್ಲಿ ನಡೆದುಕೊಂಡು ಬಂದು ರಸ್ತೆ$ಮೂಲಕ ಮಂಗಳೂರಿಗೆ ಬರುವವರೂ ಇದ್ದಾರೆ. ಹಳಿ ದ್ವಿಗುಣಗೊಂಡರೆ ಇಂತಹ ಪ್ರಮೇಯ ಇರುವುದಿಲ್ಲ. ಜತೆಗೆ ಹೊಸ ರೈಲು ಓಡಾಟಕ್ಕೂ ಅವಕಾಶ ಸಿಗಲಿದೆ ಎಂಬುದು ರೈಲ್ವೇ ಮೂಲಗಳ ಮಾಹಿತಿ.

ಶೀಘ್ರ ಕಾರ್ಯಾರಂಭ
ಮಂಗಳೂರು ಸೆಂಟ್ರಲ್‌ ನಿಂದ ನೇತ್ರಾವತಿ ಸೇತುವೆವರೆಗಿನ ರೈಲು ಹಳಿ ದ್ವಿಗುಣ ಕಾಮಗಾರಿಯ ಟೆಂಡರ್‌ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಎಲ್ಲವೂ ಪೂರ್ಣವಾಗಲು ಸುಮಾರು ಒಂದೂವರೆ ವರ್ಷ ಬೇಕಾಗಬಹುದು.
– ನಳಿನ್‌ ಕುಮಾರ್‌ ಕಟೀಲು, ಸಂಸದರು

ಟಾಪ್ ನ್ಯೂಸ್

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

Arrested: ಮೂವರು ಬುರ್ಖಾಧಾರಿ ಕಳ್ಳಿಯರ ಬಂಧನ

13

ಕಾಪು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ಭಂಡಿ ರಥ, ರಜತ ಗರುಡ ವಾಹನ, ಶೇಷ ವಾಹನ ಸಮರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್‌; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

6

Mangaluru: ಅಪಾರ್ಟ್‌ಮೆಂಟ್‌, ಮಾಲ್‌ಗ‌ಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ

5

Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು

4

Kulur: ಗೈಲ್‌ ಪೈಪ್‌ಲೈನ್‌ ಕಾಮಗಾರಿ; ಹೆದ್ದಾರಿ ಕುಸಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Australian Open:  ಹಿಂದೆ ಸರಿದ ಸಿಮೋನಾ ಹಾಲೆಪ್‌

Australian Open: ಹಿಂದೆ ಸರಿದ ಸಿಮೋನಾ ಹಾಲೆಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.