Train; ಜೂನ್ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ
ನೇತ್ರಾವತಿ ಕ್ಯಾಬಿನ್ - ಮಂಗಳೂರು ಜಂಕ್ಷನ್ ನಡುವೆ ಹಳಿ ನಿರ್ವಹಣೆ ಕಾಮಗಾರಿ
Team Udayavani, May 28, 2024, 8:00 AM IST
ಮಂಗಳೂರು: ನೇತ್ರಾವತಿ ಕ್ಯಾಬಿನ್ ಮತ್ತು ಮಂಗಳೂರು ಜಂಕ್ಷನ್ ನಡುವೆ ಜೂನ್ ಮೊದಲ ವಾರ ಹಳಿ ನಿರ್ವಹಣೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ. 16312 ಕೊಚ್ಚುವೇಲಿ -ಶ್ರೀ ಗಂಗಾನಗರ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು 3 ಗಂಟೆ 50 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಕೊಚ್ಚುವೇಲಿಯಿಂದ ಹೊರಡುವ ನಂ. 01464 ಕೊಚ್ಚುವೇಲಿ-ಲೋಕಮಾನ್ಯ ತಿಲಕ್(ಟಿ) ವೀಕ್ಲಿ ಎಕ್ಸ್ಪ್ರೆಸ್ಸನ್ನು 3 ಗಂ. 40 ನಿ. ತಡೆಹಿಡಿಯಲಾಗುತ್ತದೆ.
ಜೂ. 1ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡುವ ನಂ. 22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯದಲ್ಲಿ 2 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 1ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡಲಿರುವ ನಂ. 12685 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯದಲ್ಲಿ 50 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ. ಜೂ. 1ರಂದು ತಿರುವನಂತಪುರ ಸೆಂಟ್ರಲ್ನಿಂದ ಹೊರಡುವ ನಂ. 16604 ತಿರುವನಂತಪುರ ಸೆಂಟ್ರಲ್- ಮಂಗಳೂರು ಸೆಂಟ್ರಲ್ ಮಾವೇಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 30 ನಿಮಿಷಗಳ ಕಾಲ ತಡೆಹಿಡಿಯಲಾಗುತ್ತದೆ.
ಜೂ. 4ರಂದು ನಾಗರಕೋವಿಲ್ ಜಂಕ್ಷನ್ನಿಂದ ಹೊರಡಲಿರುವ ನಂ. 16336 ನಾಗರಕೋವಿಲ್ ಜಂಕ್ಷನ್-ಗಾಂಧಿಧಾಮ ಬಿಜಿ ವೀಕ್ಲಿ ಎಕ್ಸ್ಪ್ರೆಸ್ಸನ್ನು 2 ಗಂಟೆ 20 ನಿಮಿಷ ತಡೆಹಿಡಿಯಲಾಗುತ್ತದೆ. ಜೂ. 4 ಮತ್ತು 7ರಂದು ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್ನಿಂದ ಹೊರಡಲಿರುವ ನಂ. 22637 ಡಾ| ಎಂಜಿಆರ್ ಚೆನ್ನೈ ಸೆಂಟ್ರಲ್- ಮಂಗಳೂರು ಸೆಂಟ್ರಲ್ ವೆಸ್ಟ್ಕೋಸ್ಟ್ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಸನ್ನು 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ.
ಜೂ. 4 ಮತ್ತು 7ರಂದು ತಿರುವನಂತಪುರ ಸೆಂಟ್ರಲ್ನಿಂದ ಹೊರಡಲಿರುವ ನಂ. 12431 ತಿರುವನಂತಪುರ ಸೆಂಟ್ರಲ್-ನಿಝಾಮುದ್ದೀನ್ ಜಂಕ್ಷನ್ ರಾಜಧಾನಿ ಎಕ್ಸ್ಪ್ರೆಸ್ಸನ್ನು 1 ಗಂಟೆ 10 ನಿಮಿಷ, ಜೂ. 4ರಂದು ಎರ್ನಾಕುಲಂ ಜಂಕ್ಷನ್ನಿಂದ ಹೊರಡುವ ನಂ. 12283 ಎರ್ನಾಕುಲಂ ಜಂಕ್ಷನ್- ಹಝರತ್ ನಿಝಾಮುದ್ದೀನ್ ಜಂಕ್ಷನ್ ದುರೊಂತೋ ಸೂಪರ್ಫಾಸ್ಟ್ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಮಾರ್ಗಮಧ್ಯದಲ್ಲಿ 1 ಗಂಟೆ 10 ನಿಮಿಷ ತಡೆಹಿಡಿಯಲಾಗುತ್ತದೆ.
ಜೂ. 6ರಂದು ಪೋರಬಂದರ್ನಿಂದ ಹೊರಡುವ ನಂ. 20910 ಪೋರಬಂದರ್-ಕೊಚ್ಚುವೇಲಿ ವೀಕ್ಲಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯೆ 2 ಗಂಟೆ 40 ನಿಮಿಷ ತಡೆಹಿಡಿಯಲಾಗುತ್ತದೆ. ಜೂ.7ರಂದು ಲೋಕಮಾನ್ಯ ತಿಲಕ್ (ಟಿ)ನಿಂದ ಹೊರಡಲಿರುವ ನಂ.16345 ಲೋಕಮಾನ್ಯ ತಿಲಕ್ (ಟಿ) – ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್ಪ್ರೆಸ್ಸನ್ನು ಮಾರ್ಗಮಧ್ಯೆ 1 ಗಂಟೆ 30 ನಿಮಿಷ ತಡೆಹಿಡಿಯಲಾಗುತ್ತದೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ
Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು
Mangaluru: ಮುಕ್ತಿ ಕಾಣದ “ಬ್ಲ್ಯಾಕ್ಸ್ಪಾಟ್’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು
Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ
Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್ ನಜೀರ್
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
BBK11: ಬಿಗ್ ಬಾಸ್ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು
Sullia: ಅಂಗಡಿ, ಹೊಟೇಲ್ನಿಂದ ನಗದು ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.