Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

ಮುಂದೆ ಗೂಗಲ್‌ ಟ್ರಾನ್ಸ್‌ಲೇಟ್‌ ಆ್ಯಪ್‌ನಲ್ಲೂ ಸೇರುವ ನಿರೀಕ್ಷೆ

Team Udayavani, Jun 29, 2024, 7:25 AM IST

Google ಭಾಷಾಂತರಕ್ಕೆ ತುಳು ಸೇರ್ಪಡೆ: ಸದ್ಯ ಭಾಷಾಂತರ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯ

ಮಂಗಳೂರು: ಜಗತ್ತಿನ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಗೂಗಲ್‌ ತನ್ನ ಭಾಷಾಂತರ ಸೇವೆಗಳಲ್ಲಿ ತುಳುವನ್ನೂ ಸೇರಿಸಿದೆ.

ಒಟ್ಟು 110 ಭಾಷೆಗಳನ್ನು ಗೂಗಲ್‌ ಟ್ರಾನ್ಸ್‌ ಲೇಟ್‌ ಸೇವಾ ಪಟ್ಟಿಗೆ ಸೇರಿಸಿರುವುದಾಗಿ ಗೂಗಲ್‌ ಜೂ.27ರಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಮುಂದೆ ತುಳು ಭಾಷೆಯಲ್ಲಿ ಯಾವುದೇ ಪದವನ್ನು ಅರಿತುಕೊಳ್ಳಬೇಕಾದವರು ಗೂಗಲ್‌ ಟ್ರಾನ್ಸ್‌ಲೇಟ್‌ಗೆ ಹೋಗಿ ಯಾವುದೇ ಭಾಷೆಯಿಂದಲೂ ತುಳು ಪದಗಳ ಅರ್ಥ ತಿಳಿದುಕೊಳ್ಳಬಹುದು.

ಒಂದೆಡೆ ಸರಕಾರಗಳು ಇನ್ನೂ ತುಳುವನ್ನು ಅಧಿಕೃತ ರಾಜ್ಯಭಾಷೆಯನ್ನಾಗಿ ಮಾಡಲು ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಆಗದಿರುವ ನಡುವೆಯೇ ಬಹುರಾಷ್ಟ್ರೀಯ ಐಟಿ ಕಂಪೆನಿಯೊಂದು ತುಳುವನ್ನು ತಮ್ಮ ಟ್ರಾನ್ಸ್‌ಲೇಟ್‌ ಪಟ್ಟಿಯಲ್ಲಿ ಸೇರಿಸಿರುವುದು ಲಕ್ಷಾಂತರ ತುಳುವರಿಗೆ ಸಂದ ಗೌರವ ಎಂದು ತುಳುವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದರ ಹಿಂದೆ ಬಹಳ ದಿನಗಳ ಕೆಲಸ ಇದೆ. ತುಳುವಿನ ದೊಡ್ಡ ಪ್ರಮಾಣದ ಶಬ್ದಗಳು, ವಾಕ್ಯ ಗಳನ್ನು ಮೆಷಿನ್‌ ಲರ್ನಿಂಗ್‌ ವ್ಯವಸ್ಥೆಗೆ ಸೇರಿಸಬೇಕಾ ಗುತ್ತದೆ. 25 ಲಕ್ಷಕ್ಕೂ ಅಧಿಕ ಮಂದಿ ಮಾತನಾಡುವ ತುಳುವಿನ ಮಹತ್ವವನ್ನು ಅರಿತುಕೊಂಡು ಈ ಸೇರ್ಪಡೆ ಮಾಡಿದೆ. ಇದು ದೊಡ್ಡ ಸಂಗತಿ ಎನ್ನುತ್ತಾರೆ ಮಾಹಿತಿ ತಂತ್ರಜ್ಞಾನ ತಜ್ಞ ಯು.ಬಿ.ಪವನಜ.

ಹೇಗೆ ಸೇರ್ಪಡೆ?
ನ್ಯಾಚುರಲ್‌ ಲ್ಯಾಂಗೇÌಜ್‌ ಪ್ರಾಸೆಸಿಂಗ್‌ ಆಧಾರದಲ್ಲಿ ಗೂಗಲ್‌ನಲ್ಲಿ ಭಾಷೆಗಳನ್ನು ಸೇರಿಸಲಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ- ರೂಲ್‌ ಬೇಸ್ಡ್ ಹಾಗೂ ಸ್ಟಾಟಿಸ್ಟಿಕಲ್‌ ಬೇಸ್ಡ್. ಸ್ಟಾಟಿಸ್ಟಿಕಲ್‌ ಬೇಸ್‌ ಆಗಿದ್ದರೆ ಅದಕ್ಕೆ ಅಗಾಧವಾದ ಸಾಮಗ್ರಿ(ಕಾರ್ಪಸ್‌) ಬೇಕಾಗುತ್ತದೆ. ನಾಮಪದ, ಕ್ರಿಯಾಪದ ಇತ್ಯಾದಿ ಸೇರಿಕೊಂಡು ಸುಮಾರು 20 ಲಕ್ಷದಷ್ಟು ವಾಕ್ಯಗಳ ಅನುವಾದವನ್ನು ಮೆಷಿನ್‌ ಲರ್ನಿಂಗ್‌ಗೆ ಪೂರಕವಾಗಿ ಫೀಡ್‌ ಮಾಡಲಾಗುತ್ತದೆ. ಬಳಿಕ ಇದನ್ನು ಮೆಷಿನ್‌ ಅರಿತುಕೊಂಡು ಭಾಷಾಂತರ ಮಾಡುತ್ತದೆ. ಇದನ್ನು ಬಳಕೆ ಮಾಡಿಕೊಂಡಷ್ಟೂ ಸುಧಾರಣೆಯಾಗುತ್ತಾ ಹೋಗುತ್ತದೆ.

ತುಳು ಸೇರ್ಪಡೆಯಿಂದ ಮುಂದೆ ವಿಕಿಪೀಡಿಯಾ ಟ್ರಾನ್ಸ್‌ಲೇಷನ್‌ಗೆ ಬೇಕಾದ ಟೂಲ್‌ಗ‌ಳಿಗೂ ತುಳು ಬರಬಹುದು. ಸದ್ಯ ಕನ್ನಡದ್ದು ಮಾತ್ರವಿದೆ. ಇದರಿಂದ ತುಳು ಭಾಷಾಂತರ ಇನ್ನಷ್ಟು ಸಮೃದ್ಧಗೊಳ್ಳಲಿದೆ ಎನ್ನುತ್ತಾರೆ ಪವನಜ.

ಪ್ರಸ್ತುತ ತುಳು ಭಾಷಾಂತರ ತುಸು ಕಚ್ಚಾ ರೂಪದಲ್ಲೇ ಇದೆ. ಕೆಲವು ತಪ್ಪುಗಳಿದ್ದು, ಇವು ಸುಧಾರಣೆಯಾಗಬೇಕಾದರೆ ನಾವು ಫೀಡ್‌ಬ್ಯಾಕ್‌ ವಿಭಾಗದಲ್ಲಿ ಸರಿಯಾದ ಆಯ್ಕೆಗಳನ್ನು ತೋರಿಸಬೇಕು. ಬದಲು ಅದನ್ನು ಸ್ಕ್ರೀನ್‌ಶಾಟ್‌ ತೆಗೆದು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಿ ಪ್ರಯೋಜನವಿಲ್ಲ. ಪ್ರಸ್ತುತ ಟ್ರಾನ್ಸ್‌ಲೇಟ್‌ ಸೇವೆ ವೆಬ್‌ನಲ್ಲಿ ಮಾತ್ರವೇ ಲಭ್ಯವಿದೆ. ಗೂಗಲ್‌ ಟ್ರಾನ್ಸ್‌ ಲೇಟ್‌ ಆ್ಯಪ್‌ಗೆ ಬಂದಿಲ್ಲ. ಆದರೆ ಮುಂದೆ ಇದೂ ಬರಬಹುದು.
-ಯು.ಬಿ.ಪವನಜ,
ಮಾಹಿತಿ ತಂತ್ರಜ್ಞಾನ ತಜ್ಞರು

ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದ್ದು, ತುಳುವರು ಸಂಭ್ರಮಪಡುವ ಸಂಗತಿ. ಗೂಗಲ್‌ ಟ್ರಾನ್ಸ್‌ ಲೇಟರ್‌ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್‌ ಬ್ಯಾಕ್‌ ಕಾಲಂನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖೀಸಿ ಪ್ರತಿಕ್ರಿಯಿಸಿದರೆ ಗೂಗಲ್‌ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ.
-ತಾರಾನಾಥ್‌ ಗಟ್ಟಿ ಕಾಪಿಕಾಡ್‌,
ಅಧ್ಯಕ್ಷ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ

ಟಾಪ್ ನ್ಯೂಸ್

2

Disease: ಡೆಂಘೀ ಜತೆ ಮಕ್ಕಳ ಕಾಡುತ್ತಿದೆ ಕಾಲು ಬಾಯಿ ರೋಗ!

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

ಪ್ರವಾಸಿಗರ ಕಣ್ಣೆದುರೇ ಕೊಚ್ಚಿಹೋದ ಒಂದೇ ಕುಟುಂಬದ ಏಳು ಮಂದಿ ಸದಸ್ಯರು.. ಭಯಾನಕ ದೃಶ್ಯ ಸೆರೆ

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898ಎಡಿ’

Box office: ರಿಲೀಸ್‌ ಆದ ನಾಲ್ಕೇ ದಿನದಲ್ಲಿ 500 ಕೋಟಿ ರೂ. ಗಳಿಸಿದ ʼಕಲ್ಕಿ 2898 ಎಡಿ’

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

ಮೋಜು-ಮಸ್ತಿಯ ಅಡ್ಡವಾಯ್ತಾ ಶ್ರೀ ಕ್ಷೇತ್ರ ದೇವರಮನೆ! ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಡ್ಯಾನ್ಸ್

Untitled-1

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Panipuri ಅಸುರಕ್ಷಿತ ಪಾನಿಪೂರಿ ನಿಷೇಧ: ಇಂದು ಅಂತಿಮ ನಿರ್ಣಯ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ

Daily Horoscope: ಉದ್ಯೋಗ ಹುಡುಕುವವರಿಗೆ ಶುಭಸೂಚನೆ ಸಿಗಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Mangaluru ವಿಮಾನ ನಿಲ್ದಾಣ: ಪರಿಹಾರ ಕಾಣದ ಕಾರ್ಗೋ ಸಮಸ್ಯೆ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Kambala ಓಟಗಾರನಿಗೆ “ಕೋಣ’ ನಿಗದಿ; ಕಂಬಳ ಸಮಿತಿಯಿಂದ ಹೊಸ ನಿಯಮಾವಳಿ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Rain ಉಡುಪಿ,ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆ; ಕಾಂಕ್ರೀಟ್‌ ತೋಡು ಕುಸಿತ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

Ullal ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಬ್ರಿಜೇಶ್‌ ಚೌಟ ಭೇಟಿ

Ullal ಕಡಲ್ಕೊರೆತ ಪ್ರದೇಶಗಳಿಗೆ ಸಂಸದ ಬ್ರಿಜೇಶ್‌ ಚೌಟ ಭೇಟಿ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

6

Bengaluru: ರಸ್ತೆ ಬದಿ ನಿಂತಿದ್ದ ಲಾರಿಗೆಬೈಕ್‌ ಡಿಕ್ಕಿ: ದುರ್ಮರಣ

4

ಸಾಲ ಪಡೆದು ವಂಚನೆ ಮಾಡಿದ್ದ ಯುವಕನ ಅಪಹರಣ: ಫಾರ್ಮ್ ಹೌಸ್ ನಲ್ಲಿರಿಸಿ ಹಲ್ಲೆ

Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್‌ ‌

Kidnap: ಮಹಿಳೆಯರಿಂದಲೇ ಯುವಕನ ಕಿಡ್ನ್ಯಾಪ್; 6 ಮಂದಿ ವಿರುದ್ಧ ಕೇಸ್‌ ‌

3

Fraud: ದೋಷ ಪರಿಹರಿಸುವುದಾಗಿ ನಂಬಿಸಿ ಬುಡುಬುಡಿಕೆ ವೇಷ ಧರಿಸಿ ವಂಚನೆ

2

Disease: ಡೆಂಘೀ ಜತೆ ಮಕ್ಕಳ ಕಾಡುತ್ತಿದೆ ಕಾಲು ಬಾಯಿ ರೋಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.