Ullal: ಕಾಲೇಜು ಹುಡುಗನ ಹುಲಿ ತಲೆ ಕೀ ಚೈನ್‌ಗೆ ಬೇಡಿಕೆ!

ಸಣ್ಣ ವಯಸ್ಸಿನಲ್ಲೇ ಮೂಡಿದ ಕಲಾಸಕ್ತಿಯಿಂದ ಲಾಭ; ಬಿಡುವಿನ ವೇಳೆಯಲ್ಲಿ ತಲೆಯ ಪ್ರತಿಕೃತಿ ರಚಿಸಿ ಮಾರಾಟ

Team Udayavani, Oct 1, 2024, 1:15 PM IST

3(1)

ಉಳ್ಳಾಲ: ನವರಾತ್ರಿಗೆ ಭಾರಿ ಜನಾಕರ್ಷಣೆ ಪಡೆಯುವ ಹುಲಿ ವೇಷ, ಕುಣಿತ ಈಗ ಬೇರೆ ಬೇರೆ ರೂಪಗಳಲ್ಲಿ ವ್ಯಾಪಿಸುತ್ತಿದೆ. ಮನೆ ಮನೆಗೆ ಬರುವ ಹುಲಿಗಳು, ದೊಡ್ಡ ವೇದಿಕೆಗಳಲ್ಲಿ ನಡೆಯುವ ಹುಲಿ ವೇಷದ ಸ್ಪರ್ಧೆಗಳ ನಡುವೆ ಹುಲಿಗಳ ತಲೆಯ ಪ್ರತಿಕೃತಿ, ಕೀಚೈನ್‌ಗಳಿಗೂ ಭಾರಿ ಬೇಡಿಕೆ ಹುಟ್ಟಿಕೊಂಡಿದೆ. ಇದನ್ನು ಗಮನಿಸಿ ಕೋಟೆಕಾರಿನ ಬಾಲಕನೊಬ್ಬ ಆರಂಭಿಸಿರುವ ಹುಲಿ ವೇಷದ ಕೀ ಚೈನ್‌ ಮತ್ತು ಪ್ರತಿಕೃತಿ ನಿರ್ಮಾಣ ಕಾಯಕಕ್ಕೆ ಈಗ ಭಾರಿ ಬೆಲೆ ಬಂದಿದೆ. ಬೆಂಗಳೂರು, ಮುಂಬಯಿ ಸಹಿತ ವಿವಿಧೆಡೆಯಿಂದ ಬೇಡಿಕೆಗಳು ಬರುತ್ತಿವೆಯಂತೆ.

ಕೋಟೆಕಾರು ನಿವಾಸಿ ಪ್ರಸಿದ್ಧ ಕಲಾವಿದ ಜಯಪ್ರಸಾದ್‌ (ಜೆ.ಪಿ.) ಆಚಾರ್ಯ ಅವರ ಪುತ್ರನಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿ ಜ್ಯೇಷ್ಠ ಆಚಾರ್ಯ ಮೂರನೇ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದ. ಅದರ ಜತೆಗೆ ತಂದೆಯ ಗರಡಿಯಲ್ಲಿ ಪಳಗಿದ್ದ. ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕಾಗಿ ಆರಂಭಿಸಿದ ಹುಲಿ ವೇಷದ ತಲೆಯ ಪ್ರತಿಕೃತಿ ರಚನೆ ಇದೀಗ ಬೇಡಿಕೆಯನ್ನು ಪಡೆದುಕೊಂಡಿದೆ.

ಕಲಾವಿದ ಜೆ.ಪಿ. ಆಚಾರ್ಯ ಅವರು ಹುಲಿ ವೇಷ ಸ್ಪರ್ಧೆಯ ವಿಜೇತರಿಗೆ ನೀಡುವ ಹುಲಿಯ ತಲೆಗಳ ಪ್ರತಿಕೃತಿಯನ್ನು ಹಲವು ವರ್ಷಗಳಿಂದ ನಿರ್ಮಿಸುತ್ತಿದ್ದಾರೆ. ಈ ನಡುವೆ ಜ್ಯೇಷ್ಠ ಒಂದು ಇಂಚು ಮತ್ತು ಎರಡು ಇಂಚಿನ ಹುಲಿಯ ತಲೆಯ ಪ್ರತಿಕೃತಿಯನ್ನು ನಿರ್ಮಿಸಿ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪ್ರಕಟಿಸಿದ್ದಾರೆ. ಜಾಲತಾಣದಲ್ಲಿ ವೀಕ್ಷಿಸಿದ ಜನರು ತಮಗೂ ಅದೇ ಮಾದರಿಯಲ್ಲಿ ತಯಾರಿಸಿಕೊಡುವಂತೆ ದುಂಬಾಲು ಬಿದ್ದಿದ್ದಾರೆ. ಜ್ಯೇಷ್ಠ ಕಲಿಕೆಯ ಜತೆಗೇ ಈ ಪ್ರತಿಕೃತಿ ಮತ್ತು ಕೀಚೈನ್‌ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕಾಲೇಜಿನಿಂದ ಬರುವಾಗ ಸಂಜೆ ಐದು ಗಂಟೆ ಆಗುತ್ತದೆ. ಕಲಿಕೆಯೊಂದಿಗೆ ಈ ಒಂದು ಪ್ರತಿಕೃತಿಗೆ ಬಣ್ಣ ತುಂಬಲು ಒಂದು ದಿವಸ ಹಿಡಿಯುತ್ತದೆ. ಹವ್ಯಾಸಕ್ಕಾಗಿ ಆರಂಭಿಸಿರುವ ಈ ಕಲೆಯನ್ನು ಕಲಿಕೆಯೊಂದಿಗೆ ಮುಂದುವರಿಸುತ್ತೇನೆ. ಬೇಡಿಕೆಗೆ ಅನುಗುಣವಾಗಿ ತಯಾರಿಸಿಕೊಡುವ ಯೋಜನೆ ಇದೆ.
-ಜ್ಯೇಷ್ಠ ಆಚಾರ್ಯ,ಯುವ ಕಲಾವಿದ

ಜ್ಯೇಷ್ಠ ಮೂರನೇ ವರ್ಷದಿಂದಲೇ ಡ್ರಾಯಿಂಗ್‌ ರಚಿಸಲು ಆರಂಭಿಸಿದ್ದ. ಬಳಿಕ ನಾನು ಮಾಡುತ್ತಿದ್ದ ಪ್ರತಿಕೃತಿಗಳ ಬಗ್ಗೆ ಆಸಕ್ತಿ ಮೂಡಿ ಹುಲಿಯ ತಲೆಯ ಸಣ್ಣ ಪ್ರತಿಕೃತಿ ರಚಿಸಿದ್ದ. ಭಾರ ಕಡಿಮೆ ಮಾಡುವುದಕ್ಕಾಗಿ ಈಗ ಫೈಬರ್‌ ಮೋಲ್ಡ್‌ನಲ್ಲಿ ಪ್ರತಿಕೃತಿ ತಯಾರಿಸಿ ಬಣ್ಣ ತುಂಬುವ ಕೆಲಸ ಮಾಡುತ್ತಿದ್ದಾನೆ.
-ಜೆ.ಪಿ. ಆಚಾರ್ಯ ಕೋಟೆಕಾರು, ಕಲಾವಿದರು

ಹುಲಿ ತಲೆ ಪ್ರತಿಕೃತಿ ನಿರ್ಮಾಣ ಹೇಗೆ?
ಮೊದಲು ಮಣ್ಣಿನಲ್ಲಿ ಹುಲಿಯ ತಲೆಯ ಪ್ರತಿಕೃತಿಯನ್ನು ತಯಾರಿಸಿ ಬಳಿಕ ಅದರ ಸಿಲಿಕಾನ್‌ ಮೌಲ್ಡ್‌ ತೆಗೆಯುತ್ತೇನೆ. ಫೈಬರ್‌ನಲ್ಲಿ ಗಟ್ಟಿ ಮಾಡುತ್ತೇನೆ. ಹೀಗೆ ಮಾಡಿದ ಒಂದು ಪ್ರತಿಕೃತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದೆ. ಕೆಲವರು ಇದರ ಬೆಲೆ ಕೇಳಲು ಆರಂಭಿಸಿದರು. ಬಳಿಕ ಬೇಡಿಕೆ ಮೇರೆಗೆ ನಿರ್ಮಾಣಕ್ಕೆ ತೊಡಗಿಕೊಂಡೆ ಎನ್ನುತ್ತಾರೆ ಜ್ಯೇಷ್ಠ.

-ವಸಂತ ಎನ್‌. ಕೊಣಾಜೆ

ಟಾಪ್ ನ್ಯೂಸ್

Bangkok: ಶಾಲಾ ಬಸ್‌ಗೆ ಬೆಂಕಿ… ವಿದ್ಯಾರ್ಥಿಗಳು ಸೇರಿ 25 ಮಂದಿ ಸಜೀವ ದಹನ

Tragedy: ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಶಾಲಾ ಬಸ್ ಬೆಂಕಿಗಾಹುತಿ… 25 ಮಂದಿ ಸಜೀವ ದಹನ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

Kantara: Chapter 1: ʼಕಾಂತಾರ-1ʼನಲ್ಲಿ ರಿಷಬ್‌ ತಂದೆ ಪಾತ್ರದಲ್ಲಿ ಮೋಹನ್‌ ಲಾಲ್?

Kantara: Chapter 1: ʼಕಾಂತಾರ-1ʼನಲ್ಲಿ ರಿಷಬ್‌ ತಂದೆ ಪಾತ್ರದಲ್ಲಿ ಮೋಹನ್‌ ಲಾಲ್?

Dharwad: ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

Dharwad: ಕಬ್ಬಿನ ಗದ್ದೆಯಲ್ಲಿ ಪತ್ತೆಯಾಯ್ತು ಆರು ಅಡಿ ಉದ್ದದ ಹೆಬ್ಬಾವು

GOAT OTT Release: ದಳಪತಿ ವಿಜಯ್‌ ʼಗೋಟ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌

GOAT OTT Release: ದಳಪತಿ ವಿಜಯ್‌ ʼಗೋಟ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್‌

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಇಬ್ಬರು ಮಹಿಳೆಯರ ಬಂಧನ

Kollegala: ಇಟ್ಟಿಗೆಯಿಂದ ಹಲ್ಲೆ: ಆಟೋ ಚಾಲಕ ಮೃತ್ಯು… ನೆರೆಮನೆಯ ಮಹಿಳೆಯರಿಬ್ಬರ ಬಂಧನ

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?

Top court: ಬುಲ್ಡೋಜರ್‌ ಕಾರ್ಯಾಚರಣೆ-ದೇವಸ್ಥಾನ, ಮಸೀದಿ ಬಗ್ಗೆ ಸುಪ್ರೀಂ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Mangaluru: ಸೈಬರ್‌ ವಂಚಕರಿಗೆ ಪೊಲೀಸರ ಜಾಲ!

malpe

Bajpe: ನೀರುಪಾಲಾಗಿದ್ದ ಒಬ್ಬನ ಶವ ಪತ್ತೆ

Mangaluru: ಅ.3ರಿಂದ ಮಂಗಳೂರು ದಸರಾ: ಪೂಜಾರಿ

Mangaluru: ಅ.3ರಿಂದ ಮಂಗಳೂರು ದಸರಾ: ಪೂಜಾರಿ

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

CM Siddaramaiah ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಲಿ: ಖೂಬಾ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

Vishva Hindu Parishad ಧರ್ಮಾಗ್ರಹ ಸಭೆ: ತಿರುಪತಿ ಲಡ್ಡು ಅಪವಿತ್ರ ತನಿಖೆ ಸಿಬಿಐಗೆ ವಹಿಸಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6

Karkala: ಕೆಮ್ಮಣ್ಣು ತಿರುವಿನಲ್ಲಿ ಅಪಾಯಕಾರಿ ಮರ !

5

Thekkatte: ಕುಸಿತದ ಭೀತಿಯಲ್ಲಿದೆ ಕನ್ನುಕೆರೆ ತಡೆಗೋಡೆ

Bangkok: ಶಾಲಾ ಬಸ್‌ಗೆ ಬೆಂಕಿ… ವಿದ್ಯಾರ್ಥಿಗಳು ಸೇರಿ 25 ಮಂದಿ ಸಜೀವ ದಹನ

Tragedy: ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ಶಾಲಾ ಬಸ್ ಬೆಂಕಿಗಾಹುತಿ… 25 ಮಂದಿ ಸಜೀವ ದಹನ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

ಲಡಾಖ್‌ ನಿಂದ ದೆಹಲಿ ಚಲೋ ಪಾದಯಾತ್ರೆ-ವಾಂಗ್ಚುಕ್‌ ವಶಕ್ಕೆ: ವಿಪಕ್ಷಗಳ ಆಕ್ರೋಶ

4(1)

Kundapura: ರಾಷ್ಟ್ರೀಯ ಹೆದ್ದಾರಿ ಬದಿ ವಿದ್ಯಾರ್ಥಿಗಳು ರಸ್ತೆಯಲ್ಲೇ ಬಾಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.