![Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…](https://www.udayavani.com/wp-content/uploads/2024/07/kejriwal-2-415x234.jpg)
ಉಳ್ಳಾಲ:ರಸ್ತೆ ಚರಂಡಿ ಸ್ಲಾಬ್ ಮುರಿದು ಲಾರಿ ಪಲ್ಟಿ:ಹೆದ್ದಾರಿ ಬಂದ್
Team Udayavani, Dec 18, 2018, 12:55 PM IST
![u-1.jpg](https://www.udayavani.com/wp-content/uploads/2018/12/18/u-1-620x349.jpg)
ಉಳ್ಳಾಲ: ರಾಷ್ಟೀಯ ಹೆದ್ದಾರಿ 66 ರ ತೊಕ್ಕೊಟ್ಟು ಜಂಕ್ಷನ್ ಬಳಿ ಕಟ್ಟಿಗೆ ತುಂಬಿದ ಲಾರಿಯೊಂದು ಚರಂಡಿ ಸ್ಲಾಬ್ ಮೇಲೆ ನಿಲ್ಲಿಸಿದ ಪರಿಣಾಮ ಸ್ಲಾಬ್ ಮುರಿದು ಲಾರಿ ಮಗುಚಿ ಬಿದ್ದಿದ್ದು, ಲಾರಿ ಕ್ಲೀನರ್ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಕಟ್ಟಿಗೆ ತುಂಬಿಕೊಂಡು ಕೇರಳ ರಾಜ್ಯದ ಕಡೆ ಹೋಗುತ್ತಿದ್ದ ಲಾರಿಯನ್ನು ಪೊಲೀಸರು ತಪಾಸಣೆಗೆಂದು ತೊಕ್ಕೊಟ್ಟು ಜಂಕ್ಷನ್ ಬಳಿ ತಡೆದಿದ್ದು, ಈ ಸಂದರ್ಭ ಚಾಲಕ ಲಾರಿಯನ್ನು ರಸ್ತೆ ಬದಿಯ ಸ್ಲಾಬ್ ಮೇಲೆ ನಿಲ್ಲಿಸಿದ್ದಾರೆ.
ಭಾರ ಹೆಚ್ಚಾಗಿದ್ದರಿಂದ ಸ್ಲಾಬ್ ಮುರಿದು, ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್ ಶಿವಮೊಗ್ಗ ಮೂಲದ ವಸಂತ್ ಕುಮಾರ್ ಲಾರಿ ಅಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದರೆ ಮೃತಪಟ್ಟಿದ್ದಾರೆ.
ಪ್ರತಿಭಟನೆ: ರಾಷ್ಟೀಯ ಹೆದ್ದಾರಿ ಅವ್ಯವಸ್ಥೆ ಮತ್ತು ಪೊಲೀಸರು ಅನಾವಶ್ಯಕ ಕೇಸು ಹಾಕುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ಅರ್ಧ ಗಂಟೆ ಕಾಲ ಹೆದ್ದಾರಿ ಬಂದ್ ನಡೆಸಿ ಪ್ರತಿಭಟನೆ ನಡೆಸಿದರು. ಟ್ರಾಫಿಕ್ ಪೊಲೀಸರು ಸಂಧಾನ ನಡೆಸಿದ ನಂತರ ಪ್ರತಿಭಟನೆ ವಾಪಾಸ್ ಪಡೆಯಲಾಯಿತು. ಸ್ಥಳಕ್ಕೆ ಮಂಗಳೂರು ಕಮಿಷನರೇಟ್ ವಲಯದ ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಗೋಪಿ ಕೃಷ್ಣ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ವರದಿ ಪ್ರಕಟಿಸಿದ್ದ ಉದಯವಾಣಿ: ತೊಕ್ಕೊಟ್ಟು ಜಂಕ್ಷನ್ ಬಳಿಯ ಸ್ಲಾಬ್ ಗಳ ಅವ್ಯವಸ್ಥೆಯ ಬಗ್ಗೆ ಉದಯವಾಣಿ ಈ ಹಿಂದೆ ಹಲವು ಬಾರಿ ವರದಿ ಪ್ರಕಟಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
![Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…](https://www.udayavani.com/wp-content/uploads/2024/07/kejriwal-2-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![5-mng](https://www.udayavani.com/wp-content/uploads/2024/07/5-mng-150x90.jpg)
Mangaluru: ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಮಾಡುವ ದಿನ ಕಾರ್ಯಕ್ರಮ
![Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ](https://www.udayavani.com/wp-content/uploads/2024/07/Ulaibettu-150x102.jpg)
Ulaibettu ಪೆರ್ಮಂಕಿ ಉದ್ಯಮಿ ದರೋಡೆ ಪ್ರಕರಣ; 10 ಮಂದಿ ಆರೋಪಿಗಳ ಬಂಧನ
![Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು](https://www.udayavani.com/wp-content/uploads/2024/07/wenlock-150x100.jpg)
Dengue ಕರಾವಳಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ : ಮುಂಜಾಗರೂಕತೆಯೇ ಮದ್ದು
![Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟHeavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ](https://www.udayavani.com/wp-content/uploads/2024/07/k-150x87.jpg)
Heavy Rain ಬಿರುಸಿನ ಮಳೆ; ವಿವಿಧೆಡೆ ನೆರೆ, ವ್ಯಾಪಕ ಹಾನಿ, ನಷ್ಟ
![Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ](https://www.udayavani.com/wp-content/uploads/2024/07/baje-150x110.jpg)
Rain ಪೊರ್ಕೋಡಿ ದೇವಸ್ಥಾನದ ಬಳಿ ಕುಸಿದ ರಸ್ತೆ: ವಾಹನ ಸಂಚಾರ ವ್ಯತ್ಯಯ
MUST WATCH
ಹೊಸ ಸೇರ್ಪಡೆ
![Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್…](https://www.udayavani.com/wp-content/uploads/2024/07/kejriwal-2-150x84.jpg)
Arvind Kejriwal ಜಾಮೀನು ಅರ್ಜಿ ಕುರಿತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್…
![12-uv-fusion](https://www.udayavani.com/wp-content/uploads/2024/07/12-uv-fusion-150x90.jpg)
UV Fusion: ಕಾಲೆಳೆಯುವ ಕೈಗಳು ನಮ್ಮದಾಗದಿರಲಿ…
![Shimoga; ಬಂದ್ ಆಗದ ತಳಭಾಗದ ಗೇಟ್: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು](https://www.udayavani.com/wp-content/uploads/2024/07/bhadra-150x83.jpg)
Shimoga; ಬಂದ್ ಆಗದ ತಳಭಾಗದ ಗೇಟ್: ವ್ಯರ್ಥವಾಗುತ್ತಿದೆ ಭದ್ರಾ ಜಲಾಶಯದ ನೀರು
![11-bng](https://www.udayavani.com/wp-content/uploads/2024/07/11-bng-150x90.jpg)
Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
![10-bng](https://www.udayavani.com/wp-content/uploads/2024/07/10-bng-150x90.jpg)
Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.