ಕರಾವಳಿಯ ಕಲಾ ಪರಂಪರೆ ವಿಶಿಷ್ಟ: ಡಾ| ಪದ್ಮಾ
Team Udayavani, Feb 9, 2017, 3:45 AM IST
ಮಂಗಳೂರು: ಕರಾವಳಿಯ ಈ ಪ್ರದೇಶ ಭರತನಾಟ್ಯ ಸಹಿತ ಲಲಿತಕಲೆಗಳಿಗೆ ವಿಶೇಷ ಪ್ರೋತ್ಸಾಹದ ಪರಂಪರೆ ಹೊಂದಿದೆ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ ಗುರು ಡಾ| ಪದ್ಮಾ ಸುಬ್ರಹ್ಮಣ್ಯಂ ಶ್ಲಾಘಿಸಿದರು.
ಜಿಟಿ ಪ್ರತಿಷ್ಠಾನದ ವತಿಯಿಂದ ಮ್ಯಾನೇಜಿಂಗ್ ಟ್ರಸ್ಟಿ ಡಾ| ವಿ. ರವಿಚಂದ್ರನ್ ನೇತೃತ್ವದಲ್ಲಿ ಪುರ
ಭವನದಲ್ಲಿ ಫೆ. 8ರಂದು ಜರಗಿದ “ತೇಜೋದಿಯಾ’ ಸಮಾರಂಭದಲ್ಲಿ ಡಾ| ಪದ್ಮಾ ಮತ್ತು ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಜಿಟಿ ಸಂಸ್ಥೆ ಪ್ರತೀ ವರ್ಷ ಈ ರೀತಿಯ ಕಲಾ ರಾಧನೆ ಏರ್ಪಡಿಸುತ್ತಿರುವುದು ಆದರ್ಶಯುತವಾಗಿದೆ ಎಂದು ಪದ್ಮಾ ಹೇಳಿದರು. ಅಕ್ಷರ ಕ್ರಾಂತಿಯಿಂದಲೇ ಯಶಸ್ಸು ಎಂದು ಹಾಜಬ್ಬ ಅಭಿ ಪ್ರಾಯಪಟ್ಟರು.
ಚೆನ್ನೈಯ ಟಿಎಜಿ-ವಿಎಚ್ಎಸ್ನ ಅಧ್ಯಕ್ಷ ಡಾ| ಸಿ.ವಿ. ಕೃಷ್ಣ ಸ್ವಾಮಿ, ಮಂಗಳೂರು ನಗರ ಪಾಲಿಕೆಯ ಆಯುಕ್ತ ಮೊಹಮ್ಮದ್ ನಜೀರ್ ಮುಖ್ಯ ಅತಿಥಿಗಳಾಗಿದ್ದರು. ಡಾ| ಬಿ.ಎಂ. ಹೆಗ್ಡೆ ಮತ್ತು ಇಸ್ಮತ್ ಪಜೀರು ಸಮ್ಮಾನಿತರ ಪರಿಚಯ ಮಾಡಿದರು.
ಡಾ| ವಿ. ರವಿಚಂದ್ರನ್ ಸ್ವಾಗತಿಸಿದರು. ಜಿಟಿ ಪ್ರತಿಷ್ಠಾನ ತನ್ನ ಸಾಮಾಜಿಕ ಬದ್ಧತೆ ನೆಲೆಯಲ್ಲಿ ಪ್ರತೀ ವರ್ಷ ಕಲಾರಾಧನೆ, ಸಮಾಜದ ವಿವಿಧ ಅಗತ್ಯಗಳಿಗೆ ಸ್ಪಂದಿಸುತ್ತಿದೆ ಎಂದರು.
ಟ್ರಸ್ಟಿಗಳಾದ ಇಂದಿರಾ ರವಿಚಂದ್ರನ್ ಉಪಸ್ಥಿತರಿದ್ದರು. ಹಿರಿಯ ಪ್ರಬಂಧಕ ಶ್ರೀನಿವಾಸ ಭಟ್ ವಂದಿಸಿದರು.
ಜಿಟಿ ವತಿಯಿಂದ ಮಂಗಳೂರು ರೋಟರಿ ಕ್ಲಬ್ನ ಸಾಮಾಜಿಕ ಯೋಜನೆಗಳಿಗೆ ನೀರು ಶುದ್ಧತಾ ಘಟಕಗಳನ್ನು ನೀಡಲಾಯಿತು. ಅಕ್ಷಯ ಪಾತ್ರಾ ಪ್ರತಿಷ್ಠಾನದ ಸಹಯೋಗದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆ ಅನುಷ್ಠಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.