![Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch](https://www.udayavani.com/wp-content/uploads/2024/06/Ananth-415x232.jpg)
ಜಲಾಭಿಮುಖ ಯೋಜನೆಯಲ್ಲಿ ನಿಯಮ ಉಲ್ಲಂಘನೆ ದೂರು; ಜಂಟಿ ಸಮಿತಿಯಿಂದ ಸ್ಥಳ ಪರಿಶೀಲನೆ
Team Udayavani, Jun 11, 2024, 11:47 PM IST
![ಜಲಾಭಿಮುಖ ಯೋಜನೆಯಲ್ಲಿ ನಿಯಮ ಉಲ್ಲಂಘನೆ ದೂರು; ಜಂಟಿ ಸಮಿತಿಯಿಂದ ಸ್ಥಳ ಪರಿಶೀಲನೆ](https://www.udayavani.com/wp-content/uploads/2024/06/WATEER-620x345.jpg)
ಮಂಗಳೂರು: ಮಂಗಳೂರು ಸ್ಮಾರ್ಟ್ಸಿಟಿ ಪ್ರವರ್ತಿತ ಜಲಾಭಿಮುಖ ಯೋಜನೆಯಲ್ಲಿ ಸಿಆರ್ಝಡ್ ನಿಯಮಾವಳಿಯನ್ನು ಉಲ್ಲಂಘಿಸಿರುವ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸುರು ನ್ಯಾಯಮಂಡಳಿ(ಎನ್ಜಿಟಿ)ಯಿಂದ ರಚನೆಯಾದ ಜಂಟಿ ಸಮಿತಿ ಮಂಗಳವಾರ ಯೋಜನೆ ಪ್ರಗತಿಯಲ್ಲಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಜ್ಞಾನಿ ಆರ್. ಶ್ರೀಧರ್, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ವಿಜ್ಞಾನಿ ಟಿ. ಮಹಿಮಾ ಮತ್ತು ಚೆನ್ನೈಯ ನ್ಯಾಶನಲ್ ಸೆಂಟರ್ ಫಾರ್ ಕೋಸ್ಟಲ್ ರಿಸರ್ಚ್ ಸತ್ಯಕಿರಣ್ ರಾಜು ಅವರನ್ನೊಳಗೊಂಡ ಜಂಟಿ ಸಮಿತಿ ಸ್ಥಳಕ್ಕೆ ಭೇಟಿ ನೀಡಿತು.
ಮೊದಲಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸವಿತಿ ಸದಸ್ಯರು ಬಳಿಕ ಯೋಜನೆ ಪ್ರಗತಿಯಲ್ಲಿರುವ ನೇತ್ರಾವತಿ ಸೇತುವೆ, ಮಂಗಳೂರು ಕ್ಲಬ್, ಮುಳಿಹಿತ್ಲು ಮತ್ತು ಬೋಳಾರ ಸೀ ಫೇಸ್ ಏರಿಯಾಕ್ಕೆ ಭೇಟಿ ನೀಡಿದರು. ಮಂಗಳೂರು ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಕೆ.ಎಸ್.ಅರುಣ್ ಪ್ರಭಾ ಯೋಜನೆಯ ಕುರಿತು ವಿವರಣೆ ನೀಡಿದರು. ಸ್ಮಾರ್ಟ್ ಸಿಟಯಿಂದ ಸಿಆರ್ಝಡ್ ನಿಯಮಾವಳಿಯ ಉಲ್ಲಂಘನೆಯಾಗಿಲ್ಲ ಎಂದು ಸಮಿತಿ ಮುಂದೆ ಸ್ಪಷ್ಟ ಪಡಿಸಿದರು.
ರಾಷ್ಟ್ರೀಯ ಪರಿಸರ ಸಂರಕ್ಷಣ ಒಕ್ಕೂಟದ ಪ್ರತಿನಿಧಿಗಳು ಸ್ಮಾರ್ಟ್ ಸಿಟಿ ಸಿಆರ್ಝಡ್ ನಿಯಮಾವಳಿಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. ಕೆಲವು ಖಾಸಗಿ ವ್ಯಕ್ತಿಗಳು ನದಿಯ ಬದಿಗೆ ಮಣ್ಣು ಹಾಕಿ ವಾಣಿಜ್ಯ ವಹಿವಾಟು ನಡೆಸುತ್ತಿರುವ ಬಗ್ಗೆಯೂ ಸಮಿತಿ ಸದಸ್ಯರಿಗೆ ದೂರಿದರು. ಸ್ಮಾರ್ಟ್ಸಿಟಿ ಯೋಜನೆ ನದಿ ಒತ್ತುವರಿ ಮಾಡಿಲ್ಲ ಬದಲಾಗಿ, ತಡೆಗೋಡೆಯ ಮೂಲಕ ನದಿ ದಡವನ್ನು ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಟಾಪ್ ನ್ಯೂಸ್
![Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch](https://www.udayavani.com/wp-content/uploads/2024/06/Ananth-415x232.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch](https://www.udayavani.com/wp-content/uploads/2024/06/Ananth-150x84.jpg)
Anant Ambani-ರಾಧಿಕಾ ಮರ್ಚೆಂಟ್ ವಿವಾಹ ಆಮಂತ್ರಣ ಪತ್ರಿಕೆ ವೈರಲ್…Watch
![Egret ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!](https://www.udayavani.com/wp-content/uploads/2024/06/egret-150x100.jpg)
Egret: ಆರಿದ್ರ ಮಳೆಯೊಂದಿಗೆ ಶಿರಸಿಯ ಮುಂಡಿಗೇಕೆರೆಗೆ ಬೆಳ್ಳಕ್ಕಿಗಳ ಆಗಮನ!
![Aranthodu; Man slipped and fell into the river](https://www.udayavani.com/wp-content/uploads/2024/06/death-150x95.jpg)
Aranthodu; ಕಾಲು ಜಾರಿ ಹೊಳೆಗೆ ಬಿದ್ದು ಸಾವು
![7-belthangady](https://www.udayavani.com/wp-content/uploads/2024/06/7-belthangady-150x90.jpg)
Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು
![Rohit Sharma backs Virat kohli in T20 World Cup](https://www.udayavani.com/wp-content/uploads/2024/06/ro-ko-150x83.jpg)
T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.