ಗೋವನ್ನು ಸಾಕಿ ಪ್ರೀತಿಸಿದವರಿಗೆ ಮಾತ್ರ ಗೋಲೋಕ ಕಾಣಲು ಸಾಧ್ಯ: ದೇವಬಾಬಾ


Team Udayavani, Sep 6, 2018, 2:47 PM IST

6-september-14.jpg

ವಿಟ್ಲ : ಗೋವುಗಳ 97 ತಳಿಗಳನ್ನು ಹೊಂದಿದ್ದ ಭಾರತದಲ್ಲಿ ಇಂದು 37 ತಳಿ ಉಳಿದುಕೊಂಡಿದೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಗೋತಳಿ ಸಂರಕ್ಷಿಸುವ ಯೋಜನೆ ದೇಶವನ್ನು ಸಂರಕ್ಷಿಸಬಲ್ಲುದು. ಗೋಸ್ವರ್ಗ ಆರಂಭಿಸುವ ಮೂಲಕ ದೇಸೀ ಗೋವುಗಳನ್ನು ಉಳಿಸುವ ಅವರ ಸಾಹಸ ಜತೆಗೆ ನಾವು ಸೇರಿಕೊಳ್ಳಬೇಕು. ಗೋವನ್ನು ಸಾಕಿ ಪ್ರೀತಿಸಿದವರಿಗೆ ಮಾತ್ರ ಗೋಲೋಕ ಕಾಣಲು ಸಾಧ್ಯ ಎಂದು ಕಿನ್ನಿಗೋಳಿ ಶ್ರೀಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯ ದೇವಬಾಬಾ ಹೇಳಿದರು.

ಅವರು ಮಂಗಳವಾರ ವಿಟ್ಲದ ವಿಠ್ಠಲ ಪ.ಪೂ. ಕಾಲೇಜು ಸುವರ್ಣ ರಂಗಮಂದಿರದಲ್ಲಿ ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ವತಿಯಿಂದ ನಡೆದ 40ನೇ ಬಹುಮಾಧ್ಯಮ ಬಳಕೆಯ ವಿನೂತನ ಶೈಲಿಯ ನೃತ್ಯ ನಾಟಕ ವಿಶ್ವ ಮಾತಾ ಗೋಮಾತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಂಗಳೂರು ಬಂದರು ಶ್ರೀ ವೈಕುಂಠಂ ಫಾಮ್ಸ್‌ì ಮಾಲಕ ಕೆ. ಅನಂತ ಕಾಮತ್‌ ಮಾತನಾಡಿ, ಜರ್ಸಿ – ಎಚ್‌ ಎಫ್‌ ದನಗಳು ಗೋವಿನ ಆಕಾರದ ಪ್ರಾಣಿ ಅಷ್ಟೇ. ವಿದೇಶೀ ದನದ ಎ1 ಹಾಲಿನಿಂದ ಕ್ಯಾನ್ಸರ್‌ ಮತ್ತಿತರ ರೋಗ ಬರುತ್ತವೆ. ಆರೋಗ್ಯ ಕಾಪಾಡಲು ದೇಸೀ ಗೋವಿನ ಹಾಲನ್ನು ಸೇವಿಸಬೇಕು. ಆಮದು ಮಾಡಲು 6.5 ಲಕ್ಷ ಕೋಟಿ ರೂ. ಔಷಧಕ್ಕೆ, 7 ಲಕ್ಷ ಕೋಟಿ ರೂ. ಯೂರಿಯಾ ಗೊಬ್ಬರಕ್ಕೆ ಖರ್ಚು ಮಾಡುತ್ತೇವೆ. ಒಟ್ಟು 21 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತವನ್ನು ನಾವು ನಮ್ಮ ದೇಶದಲ್ಲೇ ಗೋವನ್ನು ಸಾಕಿ ಉಳಿಸಿಕೊಳ್ಳಬಹುದು. ಗೋಮೂತ್ರಕ್ಕೆ ಕ್ಯಾನ್ಸರ್‌ ಗುಣಪಡಿಸುವ ಔಷಧೀಯ ಗುಣವಿದೆ. ತನ್ನ ತಂದೆಗೆ ಆ ರೋಗ ಗುಣವಾಗಿದೆ ಎಂದರು.

ಕಾಲ್ನಡಿಗೆಯಲ್ಲಿ ವಿಶ್ವ ಪರ್ಯಟನೆ ಮಾಡಿದ ಸೀತಾರಾಮ ಕೆದಿಲಾಯ, ವಿಠ್ಠಲ ವಿದ್ಯಾಸಂಘದ ಸಂಚಾಲಕ ಎಲ್‌.ಎನ್‌. ಕೂಡೂರು, ವಿಠ್ಠಲ  ಪ.ಪೂ. ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಉಪಸ್ಥಿತರಿದ್ದರು. ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ ಸ್ವಾಗತಿಸಿ, ವಂದಿಸಿದರು.

ಹೆಚ್ಚಿನ ಅವಕಾಶ
ದೇಸೀ ಗೋವನ್ನು ವಧಿಸುವುದೆಂದರೆ ಮಹಾಪುರುಷರ ಮೇಲೆ ದಾಳಿ ಮಾಡಿದ ಹಾಗೆ. ಮಕ್ಕಳನ್ನು ಪ್ರೀತಿಸುವವರು ದೇಸೀ ಗೋವಿನ ಹಾಲನ್ನು ನೀಡಬೇಕು. ಬ್ರಿಟಿಷ್‌/ ಆಸ್ಟ್ರೇಲಿಯ ದನಗಳು ನೀಡುವ ಹಾಲು ಆರೋಗ್ಯಕ್ಕೆ ಹಿತಕರವಲ್ಲ. ಕಪಿಲ ಗೋವು ಜಗತ್ತಿನ ಶ್ರೇಷ್ಠ ಗೋವು. ಕೇರಳದಲ್ಲಿ ಶ್ರೀಕೃಷ್ಣನ ಗೋವು ಇಲ್ಲದ ಕಾರಣ ಹೆಚ್ಚು ರೋಗಗಳು ಪತ್ತೆಯಾಗುತ್ತಿವೆ.
– ಯೋಗಾಚಾರ್ಯ ದೇವಬಾಬಾ
ಶ್ರೀಶಕ್ತಿದರ್ಶನ ಯೋಗಾಶ್ರಮ

ಟಾಪ್ ನ್ಯೂಸ್

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

BJP 2

CM Siddaramaiah ಕಂಡಲ್ಲೆಲ್ಲ ಕಪ್ಪುಪಟ್ಟಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು

1-mali

Karnataka; ಮಳಿಗೆಯಲ್ಲಿ 10 ಸಿಬಂದಿ ಇದ್ದರೆ 24 ತಾಸೂ ವ್ಯವಹಾರಕ್ಕೆ ಅವಕಾಶ

Sunita williams

Sunita Williams;ಬಾಹ್ಯಾಕಾಶದಿಂದ ಕರೆ ತರುವ ಕಾರ್ಯ ಆರಂಭ

naksal (2)

Karnataka; ರಾಜ್ಯದ ಆರು ನಕ್ಸಲರಿಂದ ಶರಣಾಗತಿಗೆ ಒಲವು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

028

IPL players: ಐಪಿಎಲ್‌ ಆಟಗಾರರಿಗೆ ಬಂಪರ್‌ ಸಂಭಾವನೆ

bjp-congress

BJP vs Congress ; ಕೇಸ್‌ ಮೇಲೆ ಕೇಸ್‌

085

Puttur: ಕಾಂಗ್ರೆಸ್‌ ಕಾರ್ಯಕರ್ತನದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌

isrel netanyahu

India ವರ, ಇರಾಕ್‌, ಇರಾನ್‌ ಶಾಪ: ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು 

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.