![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 24, 2017, 1:54 PM IST
ಪುತ್ತೂರು: ಸರಕಾರಿ ನ್ಯಾಯ ಬೆಲೆ ಅಂಗಡಿಯೊಂದರಲ್ಲಿ ಪಡಿತರ ಚೀಟಿದಾರ ಗ್ರಾಹಕರೊಬ್ಬರಿಗೆ ಶುಕ್ರವಾರ ಗುಗ್ಗುರು ತುಂಬಿಕೊಂಡಿರುವ ಕಳಪೆ ಮಟ್ಟದ ಗೋಧಿಯನ್ನು ವಿತರಿಸಲಾಗಿದ್ದು, ಗ್ರಾಹಕ ಕಂದಾಯ ಇಲಾಖೆಯ ಆಹಾರ ಸರಬರಾಜು ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನಗರದ ಹೊರವಲಯದ ಕೆಮ್ಮಿಂಜೆ ಟಿಎಪಿಸಿಎಂಎಸ್ ಬಳಿ ಇರುವ ಸರಕಾರಿ ನ್ಯಾಯ ಬೆಲೆ ಅಂಗಡಿಯಿಂದ ಗುರುವಾರ ಪಡಿತರ ಚೀಟಿದಾರ ಕೆಮ್ಮಿಂಜೆ ಗ್ರಾಮದ ಕೂರ್ನಡ್ಕ ನಿವಾಸಿ ಗಣೇಶ್ ಹೆಗ್ಡೆ ಅವರು 5 ಕೆಜಿ ಗೋಧಿಯನ್ನು ಖರೀದಿಸಿದ್ದರು.ಮನೆಗೆ ಬಂದು ಗೋಧಿಯನ್ನು ಪರಿಶೀಲಿಸಿದಾಗ ಗುಗ್ಗುರು ತುಂಬಿಕೊಂಡಿತ್ತು. ಗೋಧಿ ತೀರಾ ಕಳಪೆ ಮಟ್ಟದ್ದಾಗಿದ್ದ ಹಿನ್ನೆಲೆಯಲ್ಲಿ ಗಣೇಶ್ ಹೆಗ್ಡೆ ಅವರು ಗೋಧಿ ಸಹಿತವಾಗಿ ನಗರದ ಮಿನಿ ವಿಧಾನಸೌಧದಲ್ಲಿನ ಆಹಾರ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನ್ಯಾಯ ಬೆಲೆ ಅಂಗಡಿಯಲ್ಲಿ ವಿತರಿಸ ಲಾಗಿದ್ದ ಗೋಧಿಯನ್ನು ಪರಿಶೀಲಿಸಿ ಕಳಪೆ ಮಟ್ಟದ್ದಾಗಿದೆ ಎಂದು ಖಚಿತಪಡಿಸಿಕೊಂಡ ಆಹಾರ ವಿಭಾಗದ ಅಧಿಕಾರಿಗಳು ಆ ಗೋಧಿಯನ್ನು ನ್ಯಾಯಬೆಲೆ ಅಂಗಡಿಗೆ ಹಿಂದಿರುಗಿಸುವಂತೆ ಗಣೇಶ್ ಹೆಗ್ಡೆ ಅವರಿಗೆ ಸೂಚಿಸಿದ್ದಾರೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಉಳಿಕೆಯಾಗಿಕೊಂಡು ಬರುವ ಆಹಾರ ಸಾಮಗ್ರಿಗಳನ್ನು ಹಾಗೆಯೇ ದಾಸ್ತಾನು ಇರಿಸಲಾಗುತ್ತಿದ್ದು, ಇದರ ಪರಿಣಾಮ ಆಹಾರ ಸಾಮಾಗ್ರಿಗಳು ಹಾಳಾಗುತ್ತಿವೆ ಎಂದು ಕೆಲ ಗ್ರಾಹಕರು ದೂರಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.