ಯೋಗ್ಯತಾವಂತ, ಕಲೆಯ ಸಮಗ್ರ ಪ್ರಾವೀಣ್ಯದ ಪ್ರತಿನಿಧಿ


Team Udayavani, Feb 17, 2023, 7:07 AM IST

ಯೋಗ್ಯತಾವಂತ, ಕಲೆಯ ಸಮಗ್ರ ಪ್ರಾವೀಣ್ಯದ ಪ್ರತಿನಿಧಿ

ಬಲಿಪರು ಕೇವಲ ಯಕ್ಷಗಾನವಷ್ಟೇ ಅಲ್ಲ. ಭಾರತದ ಇಡೀ ರಂಗಭೂಮಿಯ ಸಾರ್ವಕಾಲಿಕ ಶ್ರೇಷ್ಠರಲ್ಲಿ ಅವರೂ ಒಬ್ಬರು.

ಕಾಸರಗೋಡಿನ ಪಡ್ರೆಯಲ್ಲಿ ಜನಿಸಿ ಅಜ್ಜ, ತಂದೆಯಿಂದ ಭಾಗವತಿಕೆ ಕಲಿತರು. ತಂದೆ ಕೂಡ ಒಳ್ಳೆಯ ವೇಷಧಾರಿ, ಭಾಗವತರೂ ಹೌದು. ಅಜ್ಜ ನಾರಾಯಣ ಬಲಿಪರು ಅಥವಾ ದೊಡ್ಡ ಬಲಿಪರು ದಂತಕಥೆ. ಅದನ್ನೇ ಇವರೂ ಉಳಿಸಿಕೊಂಡು ಬಂದರು. ನಾಲ್ಕಾಣೆ ಸಂಬಳದ ಸಂಗೀತ ಭಾಗವತನಿಂದ ತೊಡಗಿಸಿಕೊಂಡ ಅವರು ಅಖೀಲ ರಾಷ್ಟ್ರೀಯ ಮಟ್ಟದ ಪಾರಂಪರಿಕ ರಂಗಭೂಮಿ ಶ್ರೇಷ್ಠರಲ್ಲಿ ಒಬ್ಬರಾದರು.

ಯಕ್ಷಗಾನದ 80-90ರಷ್ಟು ಪ್ರಸಂಗ ಅವರಿಗೆ ಬಾಯಿಪಾಠವಿತ್ತು. ಯಕ್ಷಗಾನದ 50 ರಾಗಗಳಲ್ಲಿ ಹಿಡಿತ ಇತ್ತು. ಸಭಾಲಕ್ಷಣದಿಂದ ತೊಡಗಿ ವೀಳ್ಯ ತೆಗೆದುಕೊಳ್ಳುವವರೆಗೆ ರಂಗದ ಒಳಗೆ ಹೊರಗೆ, ಕಲಿಸುವಿಕೆ, ರಂಗಸ್ಥಳ ನಿರ್ವ ಹಣೆಯಲ್ಲಿ ಅವರು ಮಾಸ್ಟರ್‌. ಭಾಗವತ ಕೇವಲ ಹಾಡುಗಾರನಲ್ಲ. ರಾಗ, ತಾಳ, ಖಚಿತತೆ, ನಿಯಂತ್ರಣ, ಲಯ, ರಂಗಸ್ಥಳ ನಿರ್ವಹಣೆ ಎಲ್ಲವನ್ನೂ ಅರಿತಿದ್ದವರು. ಪೂರ್ವರಂಗ, ಪ್ರಸಂಗ, ಮೇಳದ ನಿಯ ಮಾವಳಿಗಳ ಸಮಗ್ರ ಜ್ಞಾನ ಅವರಿಗಿತ್ತು. ಭಾಗವತರ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆ ಅವರಲ್ಲಿತ್ತು. ಅವರ ಏರುಸ್ವರ ಮರೆಯಲಾಗದ್ದು, ಅವರ ಯಕ್ಷಗಾನದ ಪದ್ಯ ಕೇಳುವಾಗ ಸಿಗುವ ಸಂಸ್ಕಾರವೇ ಬೇರೆ. ಎಲ್ಲ ಅರ್ಥದಲ್ಲಿ ಅವರು ಯಕ್ಷಗಾನದ ಧ್ವನಿಯಾಗಿದ್ದರು.

ಇಷ್ಟೆಲ್ಲ ಪಾಂಡಿತ್ಯವಿದ್ದರೂ ಅವರ ವ್ಯಕ್ತಿತ್ವ ಸರಳ. ಅವರ ಅಗಲುವಿಕೆ ಕಲಾನಿಧಿ ಯೊಂದು ಕಳೆದುಹೋದ ಹಾಗೆ.

ಕಲಾವಿದ ಇದ್ದರೆ ಹೀಗಿರಬೇಕು, ಸಾಧನೆ ಮಾಡಿದರೆ ಇಂತಿರಬೇಕು, ಅವರಿಗೆ ಬಂದ ಮನ್ನಣೆಯೆಲ್ಲವೂ ಕಡಿಮೆ, ಅವರ ವ್ಯಕ್ತಿತ್ವ ಆದಕ್ಕಿಂತ ದೊಡ್ಡದು. ಬಹಳ ಸರಳ, ಮುಗ್ಧ, ಬದುಕಲ್ಲಿ ಬಹಳ ಕಷ್ಟ ಉಂಡವರು. ಮೂಲತಃ ಕರಾಡ ಮರಾಠಿ ಮನೆ ಮಾತಿನವರು.

ಅವರಿಗೆ ಉತ್ತಮ ಎಂಬ ಪದ ಬಳಕೆ ಮಾಡಬಾರದು. ಸಜ್ಜನಿಕೆ, ಕಲಾವಂತಿಕೆ, ಪಾಂಡಿತ್ಯ, ಪ್ರಾವೀಣ್ಯ, ಎಲ್ಲದರಲ್ಲೂ ಅಸಾಧಾರಣ ಪ್ರತಿಭೆ. ಸರ್ವಾಂಗಶ್ರೇಷ್ಠರು. ಅಂತಹವರು ಎಷ್ಟು ಕಾಲ ಇದ್ದರೂ ಬೇಕು. ನಮಗಾಗಿರುವ ದುಃಖವನ್ನು ಹೇಳಲು ಶಬ್ದಗಳಿಲ್ಲ, ಅಂಥದ್ದು ಇನ್ನೊಂದಿಲ್ಲ. ಅದೊಂದು ರತ್ನ, ವಜ್ರ, ಚಿನ್ನ.

ಅವರ ಭಾಗವತಿಕೆಯ ಶುದ್ಧ ಶೈಲಿ, ಸಂಚಾರ, ಅಳತೆ ಶ್ರೀಮಂತ. ತೆಂಕುತಿಟ್ಟಿನ ಪ್ರಾತಿನಿಧಿಕ ಭಾಗವತಿಕೆ ಅವರದ್ದು. ಸಾಹಿತ್ಯವೂ ಶುದ್ಧ ಅವರಿದ್ದರೆ ರಂಗಸ್ಥಳಕ್ಕೆ ಉಠಾವು. ಅವರ ಹಾಡು ಆಲಿಸುವುದು ಸಲೀಸು. ದೇಶದ ಹಳೆಯ ತರಹದ ಸಂಗೀತವನ್ನು ಉಳಿಸಿದ ಪುಣ್ಯಾತ್ಮರು.

ಪಾರ್ತಿಸುಬ್ಬನ ಪದ್ಯಗಳನ್ನು ಮೂಲ ಸ್ವರೂಪದಲ್ಲೇ ಬಾಯ್ದೆರೆ ಮಾಡಿದ್ದರು, ಹಾಡುತ್ತಿದ್ದರು. ಪಂಚವಟಿ, ಚೂಡಾಮಣಿ, ನಳದಮಯಂತಿ, ದೇವಿಮಹಾತೆ¾, ಗದಾ ಯುದ್ಧ, ಮುಂತಾದ ಪ್ರಸಂಗಗಳ ಅವರ ಹಾಡುಗಳೆಲ್ಲವೂ ಶ್ರೇಷ್ಠ. ಅವರೂ 25-30 ಪೌರಾಣಿಕ ಪ್ರಸಂಗಗಳನ್ನು ಬರೆದಿದ್ದಾರೆ. ಪೌರಾಣಿಕವನ್ನೇ ಬರೆದಿದ್ದಾರೆ. ಅವರ ಬರಹಗಳು ಜಯಲಕ್ಷ್ಮಿ ಹೆಸರಿನಲ್ಲಿ ಸಮಗ್ರ ಬಲಿಪ ಸಂಪುಟವಾಗಿ ಬಂದಿದೆ. ಡಾ| ನಾಗವೇಣಿ ಮಂಚಿಯವರು ಬಲಿಪ ಗಾನಯಾನ ಎಂಬ ಕೃತಿ ಬರೆದಿದ್ದಾರೆ.

ನನಗೆ ಅವರೊಂದಿಗೆ 40 ವರ್ಷಗಳ ಒಡನಾಟ. ದೊಡ್ಡ ಸ್ಮೃತಿ ಅದು. ಬಲಿಪರ 75ನೇ ವರ್ಷಕ್ಕೆ ಡಾ| ಮೋಹನ ಅಳ್ವರು, ಶ್ರೀಪತಿ ಭಟ್ಟರು ಮತ್ತಿತರರು ಸೇರಿಕೊಂಡು ಬಲಿಪ ಅಮೃತ ಭವನ ಎಂದು ನಿರ್ಮಿಸಿದೆವು,

ಬಲಿಪರ ವ್ಯಕ್ತಿತ್ವ ರಂಗಸ್ಥಳದಲ್ಲಿ ಪುನಃ ಮೂಡಿಬರಲಿ. ಅವರ ಛಾಪು ಈಗ ಹೆಚ್ಚು ಬೇಕು, ಯಕ್ಷರಂಗ ಬೇರೆ ಬೇರೆ ಕಡೆ ಸಾಗುವ ಕಾಲದಲ್ಲಿ ನಿಯಂತ್ರಕ ರೇಖೆಯಾಗಿ ಲಗಾಮು, ಕಡಿವಾಣವಾಗಿ, ಮುಂದೆ ರಂಗಸ್ಥಳದ ಒಂದು ಕಂಬವಾಗಿ ಪೀಠವಾಗಿ, ಬೆಳಕಾಗಿ, ಸ್ವರವಾಗಿ, ಯೋಗ್ಯತಾವಂತ ಕಲೆಯ ಸಮಗ್ರ ಪ್ರಾವೀಣ್ಯದ ಪ್ರತಿನಿಧಿಯಾಗಿ ಬಲಿಪರು ಯಾವಾಗಲೂ ನಮ್ಮ ಮನಸ್ಸಿನಲ್ಲಿರುತ್ತಾರೆ. ಆ ಬಲಿಪ ಚೈತನ್ಯವು ತೆಂಕುತಿಟ್ಟನ್ನು, ಯಕ್ಷಗಾನವನ್ನು ಕಾಪಾಡುತ್ತದೆ, ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.