ವಿಶ್ವಶಾಂತಿ ಸಂದೇಶ ಸಾರಿದ ಯಕ್ಷಗಾನ ರೂಪಕ


Team Udayavani, Nov 18, 2017, 4:48 PM IST

18-Nov-17.jpg

ಬೆಳ್ತಂಗಡಿ: ಪುಟ್ಟ ಹೆಜ್ಜೆಗಳಲ್ಲಿ ಗೆಜ್ಜೆ ನಾದ. ಮುಗ್ಧ ಮುಖದಲ್ಲಿ ದಶಾವತಾರದ ಭಾವ. ಮದ್ದಳೆ, ಚಂಡೆ ತಾಳಕ್ಕೆ ಬಾಲ ಕೃಷ್ಣನಿಂದ ವಿಶ್ವಶಾಂತಿಯ ಸಂದೇಶ. ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮಸ್ಥಾಪನೆಯ ಅಭಯ.

ಈ ದೃಶ್ಯಾವಳಿ ಕಂಡುಬಂದಿದ್ದು ಧರ್ಮಸ್ಥಳದ ಕಾರ್ತಿಕ ಮಾಸದ ದೀಪೋತ್ಸವದ ಕಾರ್ಯಕ್ರಮದ ಅಂಗವಾಗಿ ಬುಧವಾರ ನಡೆದ ಲಲಿತಕಲಾ ಉತ್ಸವದಲ್ಲಿ. ಬಾಲಪ್ರತಿಭೆ ತುಳಸಿ ಹೆಗಡೆ ಪ್ರಸ್ತುತಪಡಿಸಿದ ವಿಶ್ವಶಾಂತಿ ಯಕ್ಷಗಾನ ರೂಪಕದಲ್ಲಿ.

ವಿಷ್ಣುವಿನ ದಶಾವತಾರ ಅನಾವರಣ
ತುಳಸಿ ತಮ್ಮ ಮೂರನೇ ವಯಸ್ಸಿನಿಂದಲೇ ಯಕ್ಷಗಾನದ ಅಭಿರುಚಿ ಬೆಳೆಸಿಕೊಂಡರು. ತಮ್ಮ 8 ನೇ ವರ್ಷದಲ್ಲಿ ತುಳಸಿ ಹೆಗಡೆ ನೀಡಿದ ಈ ನೃತ್ಯ ರೂಪಕವಿಷ್ಣುವಿನ ದಶಾವತಾರಗಳನ್ನು ಅನಾವರಣಗೊಳಿಸಿತು. ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಕಂಕಣ ಕಟ್ಟಿದ ಶ್ರೀರಾಮ ಕೃಷ್ಣರ ಧರ್ಮದ ನಡೆಗಳ ಮಹತ್ವವು ಕಲಾಭಿಮಾನಿಗಳ ಮನಮುಟ್ಟಿತು.

ಪುಟ್ಟ ಬಾಲೆಯ ಈ ರೂಪಕ ಲಕ್ಷದೀಪೋತ್ಸವದಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಸಂಗತಿಗಳನ್ನು ತಡೆದು, ನೆಮ್ಮದಿಯ ಜೀವನದ ಅಭಿಲಾಷೆಯನ್ನು ಸಾಕಾರಗೊಳಿಸ ಬಹುದೆಂಬ ಆಶಯ ವ್ಯಕ್ತಪಡಿಸಿತು. ಸುಮಾರು 100ಕ್ಕೂ ಹೆಚ್ಚು ಕಾರ್ಯಕ್ರಮವನ್ನು ನೀಡಿದ ತುಳಸಿ ವಿಶ್ವಶಾಂತಿ ಯಕ್ಷಗಾನ ರೂಪಕವನ್ನು ಪ್ರದರ್ಶಿಸಿದ ಮೊದಲ ಬಾಲ ಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಳಗಿ ಕೇಶವ ಹೆಗಡೆ ಅವರ ಕಂಠದಲ್ಲಿ ಶ್ರೀಕೃಷ್ಣನ ಲೀಲೆಗಳು ಅದ್ಭುತವಾಗಿ ಮೂಡಿಬಂದವು. ಶಂಕರ ಭಾಗವತರು ಮದ್ದಳೆ ಹಾಗೂ ವಿಗ್ನೇಶ್ವರ ಕೆಸರಕೊಪ್ಪ ಛಂಡೆ ಸಾಥ್‌ ನೀಡಿದರು.

ವಿಶ್ವ ಶಾಂತಿಯ ಅಗತ್ಯತೆ ಪ್ರತಿಪಾದನೆ
ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ತಡೆಯ ಬೇಕಿದೆ. ಮನುಕುಲಕ್ಕೆ ಶಾಂತಿಯುತ ನೆಮ್ಮದಿಯ ಜೀವನ ನೀಡಬೇಕು. ಅಧರ್ಮವನ್ನು ಮೆಟ್ಟಿ ವಿಶ್ವದಲ್ಲಿ ಧರ್ಮ ಸ್ಥಾಪನೆಯಾಗಬೇಕಿದೆ. ಇಂಥ ಸಂದರ್ಭದಲ್ಲಿ ಪ್ರದರ್ಶಿತವಾದ ತುಳಸಿ ಹೆಗಡೆ ಯಕ್ಷಗಾನ ವಿಶ್ವಶಾಂತಿಯ ಅಗತ್ಯತೆಯನ್ನು ಪ್ರತಿಪಾದಿಸಿತು. ಕಾಲ ಬದಲಾದಂತೆ ಸಕಲ ಜೀವಚರಗಳ ಜೀವನವೂ ಬದಲಾಗುತ್ತದೆ. ಪ್ರಕೃತಿ ಸ್ವಾರ್ಥದ ಭಾವದಲ್ಲಿ ನಶಿಸುವ ಸ್ಥಿತಿ ತಲುಪುತ್ತದೆ. ಸಾಮಾಜಿಕ ಅಭದ್ರತೆ, ಕೊಲೆ, ಸುಲಿಗೆ, ಪ್ರಕೃತಿ ವಿಕೋಪಗಳು ತಲೆದೂರುತ್ತಿವೆ. ವಿಶ್ವದಲ್ಲಿ ಅಶಾಂತಿ ಮನೆಮಾಡಿದೆ. ಈ ಸಂದರ್ಭದಲ್ಲಿ, ತುಳಸಿಯವರ ವಿಶ್ವಶಾಂತಿ ಯಕ್ಷಗಾನ ರೂಪಕ ಶ್ರೀಕೃಷ್ಣ ತಾನಿದ್ದೇನೆ ಎಂಬ ಅಭಯ ನೀಡುವಂತೆ ಪ್ರಕಟಗೊಂಡಿತು.

ಭಾಗ್ಯಶ್ರೀ ಹೆಗಡೆ

ಟಾಪ್ ನ್ಯೂಸ್

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

BBK11: ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಇರಲಿದೆ ಸ್ವರ್ಗ- ನರಕದ ಕಿಚ್ಚು.. ಹೊಸ ಪ್ರೋಮೊ ಔಟ್

1-frr

Munirathna ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24

Belthangady: ಎಂಟು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

Belthangady: ಇಸ್ಪೀಟು ಅಡ್ಡೆಗೆ ದಾಳಿ; 23 ಮಂದಿಯ ಸೆರೆ

Puttur: ಸ್ಕೂಟಿ-ಕಾರು ಢಿಕ್ಕಿ; ಸವಾರ ಗಂಭೀರ

Puttur: ಸ್ಕೂಟಿ-ಕಾರು ಢಿಕ್ಕಿ; ಸವಾರ ಗಂಭೀರ

Bantwal: ನೇಣು ಬಿಗಿದು ಆತ್ಮಹತ್ಯೆ

Bantwal: ನೇಣು ಬಿಗಿದು ಆತ್ಮಹತ್ಯೆ

8

Bantwal: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

Uppunda: ಸಿನಿಮಾ ರೀತಿಯಲ್ಲಿ ಕಾರುಗಳ ಮೇಲಾಟ ಅಪರಾಧ ಕೃತ್ಯಕ್ಕೆ ಬಳಕೆ ಶಂಕೆ

29

Gujjadi: ನಾಪತ್ತೆಯಾಗಿದ್ದ ವ್ಯಕ್ತಿ ಶವ ಹೊಳೆಯಲ್ಲಿ ಪತ್ತೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Hangzhou Open: ಪ್ರಶಾಂತ್‌-ಜೀವನ್‌ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.