ತ್ರಿಕರಣ ಶುದ್ಧಿ ಅತೀವ ಯಶಸ್ಸಿಗೆ ಪ್ರೇರಕ: ಎಡನೀರು ಶ್ರೀ 


Team Udayavani, Jul 4, 2017, 3:40 AM IST

Yedaneeru-Swamiji-3-7.jpg

ಬೆಳ್ತಂಗಡಿ: ಶುದ್ಧ ಮನದಿಂದ, ನಿಸ್ವಾರ್ಥ ಭಾವದಿಂದ ಮಾಡುವ ಯಾವುದೇ ಕಾರ್ಯ ಭಗವಂತನ ಪ್ರೀತಿಗೆ ಪಾತ್ರವಾಗುತ್ತದೆ. ದೇವಾಲಯದ ಪುನರ್‌ ನಿರ್ಮಾಣದಂತಹ ಪುಣ್ಯ ಕಾರ್ಯದಲ್ಲಿ ಭಕ್ತ ಜನತೆಯ ಪಾಲ್ಗೊಳ್ಳುವಿಕೆಯಲ್ಲಿ ತ್ರಿಕರಣ ಶುದ್ಧಿ ಅತೀವ ಯಶಸ್ಸಿಗೆ ಪ್ರೇರಕವಾಗಲಿದೆ ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ತಿಳಿಸಿದರು. ಅವರು ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ 8 ಶತಮಾನಗಳ ಇತಿಹಾಸವನ್ನು ಹೊಂದಿರುವ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಪುನರ್‌ ನಿರ್ಮಾಣದ ಹಿನ್ನೆಲೆಯಲ್ಲಿ ನೂತನ ಗರ್ಭಗುಡಿಯ ಶಿಲಾನ್ಯಾಸವನ್ನು ನೆರವೇರಿಸಿ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪುರೋಹಿತ ಕೇಶವ ಜೋಗಿತ್ತಾಯ ಮಾತನಾಡಿ, ಮನದ, ಮನೆಯ, ಸಮಾಜದ ಶಾಂತಿ ಎಲ್ಲದಕ್ಕೂ ಭಗವಂತನೇ ಕಾರಣ. ಅವನನ್ನು ಸ್ಮರಿಸುವುದೇ ನಮ್ಮ ಕರ್ತವ್ಯ. ಅವನ ಸ್ಮರಣೆಗೆ ಅನುವು ಮಾಡಿಕೊಡುವುದೇ ದೇವಾಲಯಗಳ ಕಾರ್ಯ. ಅಂತಹ ದೇವಾಲಯಗಳ ನಿರ್ಮಾಣದಿಂದ ಸಮಾಜದಲ್ಲಿ ಉನ್ನತಿಯ ಬೆಳಕು ಪ್ರಕಾಶಮಾನವಾಗಿ ಗೋಚರಿಸಲಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾತನಾಡಿ, ಸಮಾಜದಲ್ಲಿ ಶಕ್ತಿ ಕೇಂದ್ರವಾಗಿ ಕಾರ್ಯನಿರ್ವಹಿಸಬೇಕಾದರೆ ಸಮಾಜದ ಪ್ರತಿ ಮನೆಯೂ ದೇವಾಲಯದ ನಿರ್ಮಾಣದಲ್ಲಿ ಕೈಜೋಡಿಸಬೇಕು. ದೇವರ ಮುಂದೆ ಭಕ್ತರೆಲ್ಲರೂ ಅವನ ಮಕ್ಕಳೇ. ದೇವರಿಗಿಲ್ಲದ ಭೇದಭಾವ ನಮ್ಮೊಳಗೆ ಇರದಂತೆ ನೋಡಿಕೊಳ್ಳುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸೋಣ ಎಂದರು ಕಾರ್ಯಕ್ರಮದಲ್ಲಿ ದೇಗುಲದ ಅಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ, ಉದ್ಯಮಿ ಸುರೇಂದ್ರನಾಥ ಆಳ್ವ, ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರ ಸುಂದರ ನೂರಿತ್ತಾಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮನೋಹರ ಶೆಟ್ಟಿ ಬಾರ್ಯ, ಗೌರವಾಧ್ಯಕ್ಷ  ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ್‌ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಸೂರ್ಯನಾರಾಯಣ ಕುದ್ದಾಣಾಯ ಅವರ ಉಪಸ್ಥಿತಿಯಲ್ಲಿ ವೈದಿಕ ವಿಧಿವಿಧಾನಗಳು ನಡೆದು ಗರ್ಭಗುಡಿಯ ಶಿಲಾನ್ಯಾಸ ನೆರವೇರಿತು. ಕಾರ್ಯಕ್ರಮದಲ್ಲಿ ನವೀನ್‌ ರೈ, ಗುಣಾಕರ ಅಗ್ನಾಡಿ, ರಾಜೀವ ರೈ, ಮಂಜುನಾಥ ಸಾಲ್ಯಾನ್‌, ಭಾಸ್ಕರ್‌ ಬಾರ್ಯ, ರಾಜೇಶ್‌ ರಾವ್‌, ಹೇಮಾವತಿ, ಗುರುಪ್ರಸಾದ್‌, ಕೃಷ್ಣ ಮಣಿಯಾಣಿ, ರಮೇಶ್‌ ಕಜೆ, ಜಯಲಕ್ಷ್ಮೀ  ಮೊದಲಾದ ಪ್ರಮುಖರು ಭಾಗವಹಿಸಿದ್ದರು. ರಾಜೇಶ್‌ ರೈ ಕಾರ್ಯಕ್ರಮ ನಿರೂಪಿಸಿ, ಮನೋಹರ ಶೆಟ್ಟಿ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ಗಣೇಶ್‌ ಪಿ. ವಂದಿಸಿದರು.

ಏಕತೆಯಿಂದ ದೇಗುಲ ಪುನರ್‌ ನಿರ್ಮಿಸಿ 
ಭಗವಂತನ ಅನುಗ್ರಹ ಇದೆ ಎಂದರೆ ಯಾವುದೇ ಕಾರಣಕ್ಕೂ ಸೋಲು ಎದುರಾಗದು. ಉತ್ತಮ ಕಾರ್ಯ ಮಾಡಲು ಸಂಕಲ್ಪ ತಾಳುವುದು ನಮ್ಮ ಪಾಲಿನ ಕರ್ತವ್ಯ. ಅಂತೆಯೇ ಅದರ ಅನುಷ್ಠಾನಕ್ಕೆ ಶ್ರಮಿಸುವುದು ನಮ್ಮ ಪಾಲಿನ ಕರ್ತವ್ಯ. ಅದರ ಫ‌ಲಿತಾಂಶ ಮಾತ್ರ ದೇವನ ಇಚ್ಛೆಯಂತೆಯೇ ಆಗಿರುವುದರಿಂದ ಉತ್ತಮ ಧ್ಯೇಯೋದ್ದೇಶದಿಂದ ಗ್ರಾಮದ ಎಲ್ಲರೂ ಒಗ್ಗೂಡಿ ಏಕತಾ ಭಾವದಿಂದ ದೇವಾಲಯದ ಪುನರ್‌ ನಿರ್ಮಾಣಕ್ಕೆ ಶ್ರಮಿಸಿ. ಅತ್ಯುತ್ತಮ ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ.
– ಎಡನೀರು ಶ್ರೀ 

ಟಾಪ್ ನ್ಯೂಸ್

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Chandra

Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ

BCCI

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

rajnath 2

Rajnath Singh; ಸ್ನೇಹ ಇದ್ದಿದ್ದರೆ ಪಾಕ್‌ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BSF Bangla

Bangladesh ಅಕ್ರಮ ವಲಸಿಗರ ಆಧಾರ್‌ ನಿಷ್ಕ್ರಿಯಗೊಳಿಸಿ: ಪ್ರಾಧಿಕಾರಕ್ಕೆ ಸೇನೆ ಮನವಿ

ISREL

Israel ಸೇನೆ ನಿರಂತರ ದಾಳಿ; ಒಂದು ವಾರದಲ್ಲಿ 20 ಹೆಜ್ಬುಲ್ಲಾ ಉಗ್ರರ ಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

arest

Puttur: ವಂಚನೆ ಪ್ರಕರಣದ ಆರೋಪಿ ತೆಲಂಗಾಣದಲ್ಲಿ ಬಂಧನ

Sullia: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖೀಸಿದ ಪೋಸ್ಟ್‌: ದೂರು

Sullia: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖೀಸಿದ ಪೋಸ್ಟ್‌: ದೂರು

085

Puttur: ಕಾಂಗ್ರೆಸ್‌ ಕಾರ್ಯಕರ್ತನದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Udupi: ಸಿಹಿ ಬಾಕ್ಸ್‌ ಜತೆ ಮಕ್ಕಳ ಮನೆಗೆ ಬರಲಿದೆ ಜನನ ಪ್ರಮಾಣ ಪತ್ರ

Rahul Gandhi (3)

Haryana;ಭಾರತ್‌ ಜೋಡೋ ಮಾದರಿ ಪ್ರಚಾರ ಇಂದು ಶುರು?

Chandra

Spacecraft; ಚಂದ್ರನ ಪ್ರಾಚೀನ ಸ್ಥಳದಲ್ಲಿ ಇಳಿದ ಚಂದ್ರಯಾನ ನೌಕೆ

BCCI

Duleep Trophy ಕ್ರಿಕೆಟ್‌ ಹಳೆ ಮಾದರಿಗೆ? ಜಯ್‌ ಶಾ ಸ್ಥಾನಕ್ಕೆ ಯಾರು?

rajnath 2

Rajnath Singh; ಸ್ನೇಹ ಇದ್ದಿದ್ದರೆ ಪಾಕ್‌ಗೆ ಐಎಂಎಫ್ ಗಿಂತ ಹೆಚ್ಚು ಹಣ ಕೊಡ್ತಿದ್ದೆವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.