![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 29, 2023, 12:35 AM IST
ಉಳ್ಳಾಲ: ತಲಪಾಡಿ ಗಡಿಭಾಗದ ಬಾರೊಂದಕ್ಕೆ ಬಂದಿದ್ದ ನಾಲ್ವರು ಸ್ಥಳೀಯ ಲೇಔಟ್ನ ಕೊಳದಲ್ಲಿ ಈಜಲು ಹೋಗಿದ್ದು, ಅವರಲ್ಲಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕಾಸರಗೋಡು ಜಿಲ್ಲೆಯ ಹೊಸಂಗಡಿ, ದುರ್ಗಿ ಪಳ್ಳ ನಿವಾಸಿ ಹರೀಶ ಯಾನೆ ಹರಿಪ್ರಸಾದ್ ಆಚಾರ್ಯ (36) ಮೃತರು.
ಅವರೊಂದಿಗಿದ್ದ ಇತರ ಮೂವರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಯಾರಿಗೂ ಸರಿಯಾಗಿ ಈಜಾಡಲು ಬಾರದೆ ರಕ್ಷಣೆ ಸಾಧ್ಯವಾಗದೆ ಹರಿಪ್ರಸಾದ್ ಮುಳುಗಿ ಮೃತಪಟ್ಟಿದ್ದಾರೆೆ ಎಂದು ಪೊಲೀಸರು ಹೇಳಿದ್ದಾರೆ.
ವೆಲ್ಡಿಂಗ್ ಕಾರ್ಯ ನಿರ್ವಹಿಸುತ್ತಿದ್ದ ಅವರು ಸೋಮವಾರ ತನ್ನ ಮೂವರು ಸ್ನೇಹಿತರೊಂದಿಗೆ ತಲಪಾಡಿಯ ಬಾರ್ಗೆ ಬಂದಿದ್ದು, ಬಳಿಕ ಸ್ನೇಹಿತರೊಂದಿಗೆ ಸ್ಥಳೀಯ ಲೇಔಟ್ನಲ್ಲಿದ್ದ ಕೊಳಕ್ಕೆ ತೆರಳಿದ್ದಾರೆ. ಎಲ್ಲರೂ ಈಜಾಡಿ ಮೇಲೆ ಬಂದರೆ ಹರಿಪ್ರಸಾದ್ ನೀರಿನಲ್ಲಿ ಮುಳುಗಿದ್ದಾರೆ.
ಹರಿಪ್ರಸಾದ್ಗೆ ಈಜಾಡಲು ಬರುತ್ತಿತ್ತಾದರೂ, ಆ ಸಂದರ್ಭದಲ್ಲಿ ಈಜಾಡಲು ಸಾಧ್ಯವಾಗಿರಲಿಲ್ಲ. ಮೂವರು ಸ್ನೇಹಿತರಲ್ಲಿ ಒಬ್ಬರು ಅವರ ರಕ್ಷಣೆಗೆ ಯತ್ನಿಸಿದರೂ ಸಾಧ್ಯವಾಗಿಲ್ಲ.
ಘಟನೆಯ ಬಳಿಕ ಮೂವರು ರಸ್ತೆ ಬದಿಗೆ ಬಂದು ಮಾಹಿತಿ ನೀಡಿದ್ದು, ಉಳ್ಳಾಲ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.