“ಝೀಬ್ರಾ ಕ್ರಾಸಿಂಗ್‌’ ಇಲ್ಲದೆ ಪಾದಚಾರಿಗಳ ಪರದಾಟ

ಅಪಾಯಕಾರಿಯಾದ ಜಂಕ್ಷನ್‌ಗಳು; ರಸ್ತೆ ದಾಟುವುದು ಸವಾಲು

Team Udayavani, Jan 9, 2023, 7:30 AM IST

“ಝೀಬ್ರಾ ಕ್ರಾಸಿಂಗ್‌’ ಇಲ್ಲದೆ ಪಾದಚಾರಿಗಳ ಪರದಾಟ

ಮಹಾನಗರ: ನಗರದ ಹಲವೆಡೆ ಫ‌ುಟ್‌ಪಾತ್‌ಗಳ ನಿರ್ಮಾಣ, ಅಭಿವೃದ್ಧಿಯಾಗಿ ಪಾದಚಾರಿಗಳಿಗೆ ಅನುಕೂಲವಾಗಿದೆ. ಆದರೆ ಪ್ರಮುಖ ಜಂಕ್ಷನ್‌ಗಳಲ್ಲಿ, ಮುಖ್ಯವಾಗಿ ಕೆಲವು ಸಿಗ್ನಲ್‌ಗ‌ಳ ಸಮೀಪದಲ್ಲಿ ಝೀಬ್ರಾ ಕ್ರಾಸಿಂಗ್‌ಗಳು ಇಲ್ಲದೆ ಪಾದಚಾರಿಗಳು ತೀರಾ ಅಪಾಯ ಕಾರಿಯಾಗಿ ರಸ್ತೆ ದಾಟುವಂತಾಗಿದೆ.

ವಾಹನ ಮತ್ತು ಜನಸಂಚಾರ ಅಧಿಕವಿ ರುವ ಪಿವಿಎಸ್‌ ಜಂಕ್ಷನ್‌, ಲಾಲ್‌ಬಾಗ್‌ ಜಂಕ್ಷನ್‌ ಹಾಗೂ ಹಂಪನಕಟ್ಟೆ ಜಂಕ್ಷನ್‌ಗಳಲ್ಲಿ ಸಿಗ್ನಲ್‌ ವ್ಯವಸ್ಥೆ ಇದೆ. ಆದರೆ ಹಂಪನಕಟ್ಟೆ ಹೊರತುಪಡಿಸಿ ಇತರ ಎರಡು ಜಂಕ್ಷನ್‌ಗ ಳಲ್ಲಿಯೂ ಝೀಬ್ರಾ ಕ್ರಾಸಿಂಗ್‌ನ ಬಣ್ಣ (ಕಪ್ಪು, ಬಿಳಿ) ಅಳಿಸಿ ಹೋಗಿದೆ. ಕೆಲವೆಡೆ ಝೀಬ್ರಾ ಕ್ರಾಸಿಂಗ್‌ನ ಕುರುಹು ಕೂಡ ಇಲ್ಲ!

ಜ್ಯೋತಿ, ನಂತೂರು ಜಂಕ್ಷನ್‌ಗಳು ಮತ್ತು ಈ ಹಿಂದಿನ ಎ.ಬಿ. ಶೆಟ್ಟಿ ವೃತ್ತ ಇದ್ದ ಸ್ಥಳಗಳಲ್ಲಿ ಕೂಡ ಝೀಬ್ರಾ ಕ್ರಾಸಿಂಗ್‌ ಕಾಣಿಸುತ್ತಿಲ್ಲ. ಈ ಪೈಕಿ ಪಿವಿಎಸ್‌ ಸಿಗ್ನಲ್‌ ಸ್ಥಳ ಪಾದಚಾರಿಗಳಿಗೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಕೊಂಡು ಅಪಾಯಕಾರಿಯಾಗಿ ರಸ್ತೆದಾಟು ತ್ತಿದ್ದಾರೆ. ಹಿರಿಯ ನಾಗರಿಕರು, ಮಕ್ಕಳು ಪರದಾಡಬೇಕಾದ ಸ್ಥಿತಿ ಇದೆ. ಸಂಚಾರಿ ಪೊಲೀಸರೇ ರಸ್ತೆ ದಾಟಿಸಬೇಕಾದ ಸ್ಥಿತಿ ಉಂಟಾಗಿದೆ.

ಝೀಬ್ರಾ ಕ್ರಾಸಿಂಗ್‌ ಸುರಕ್ಷಿತ
ಸಿಗ್ನಲ್‌ಗ‌ಳಿರುವ ಸ್ಥಳಗಳು ಸಹಿತ ಜಂಕ್ಷನ್‌ಗಳಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್‌ ಅತೀ ಅವಶ್ಯ. ಸಿಗ್ನಲ್‌ಗ‌ಳಿರುವ ಜಂಕ್ಷನ್‌ಗಳಲ್ಲಿ ಪಾದಚಾರಿಗಳ ಸಂಚಾರಕ್ಕೆಂದೇ ನಿರ್ದಿಷ್ಟ ಕಾಲಾವಕಾಶ ನೀಡಲಾಗುತ್ತದೆ. ಆ ವೇಳೆ ಝೀಬ್ರಾ ಕ್ರಾಸಿಂಗ್‌ನಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ಸಾಧ್ಯವಿರುತ್ತದೆ. ಸಿಗ್ನಲ್‌ನಲ್ಲಿ ವಾಹನಗಳಿಗೆ ಕೆಂಪು ದೀಪ ತೋರಿಸಿದಾಗ ವಾಹನಗಳು ಝೀಬ್ರಾ ಕ್ರಾಸಿಂಗ್‌ ಸ್ಥಳದಿಂದ ಹಿಂದಕ್ಕೆ ನಿಲ್ಲಿಸಬೇಕಾದುದು ನಿಯಮ. ಆದರೆ ಝೀಬ್ರಾ ಕ್ರಾಸಿಂಗ್‌ ಬಣ್ಣ ಕಳೆದುಕೊಂಡಿರುವ ಸ್ಥಳಗಳಲ್ಲಿ ವಾಹನಗಳು ಝೀಬ್ರಾ ಕ್ರಾಸಿಂಗ್‌ ಸ್ಥಳವನ್ನು ಕೂಡ ದಾಟಿ ಮುಂದೆ ಬಂದಿರುತ್ತವೆ. ಇದರಿಂದಾಗಿ ಜನ ರಸ್ತೆ ದಾಟಲು ಸ್ಥಳವೇ ಸಿಗುತ್ತಿಲ್ಲ. ಸಿಗ್ನಲ್‌ ಲೈಟ್‌ಗಳು ಇಲ್ಲದ ಜಂಕ್ಷನ್‌ಗಳಲ್ಲಿಯೂ ಝೀಬ್ರಾ ಕ್ರಾಸಿಂಗ್‌ ಮಾರ್ಕ್‌ ಅತೀ ಅಗತ್ಯ. ಝೀಬ್ರಾ ಕ್ರಾಸಿಂಗ್‌ ಇದ್ದರೆ ವಾಹನ ಚಾಲಕರು ವಾಹನದ ವೇಗ ತಗ್ಗಿಸುತ್ತಾರೆ. ಇದು ನಿಯಮ ಕೂಡ ಹೌದು. ಆಗ ರಸ್ತೆ ದಾಟುವವರಿಗೆ ಅಪಾಯ ಕಡಿಮೆ.

ಪಾಲಿಕೆಯ ಗಮನಕ್ಕೆ
ಸಿಗ್ನಲ್‌ಗ‌ಳು ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಝೀಬ್ರಾ ಕ್ರಾಸಿಂಗ್‌ ಗುರುತಿನ ಬಣ್ಣ ಅಳಿಸಿ ಹೋಗಿರುವ ಬಗ್ಗೆ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ತಿಳಿಸಲಾಗಿದೆ. ಪಾಲಿಕೆಯವರು ಶೀಘ್ರ ಕೆಲಸ ನಡೆಸುವ ನಿರೀಕ್ಷೆ ಇದೆ.
-ಗೀತಾ ಕುಲಕರ್ಣಿ, ಎಸಿಪಿ, ಸಂಚಾರ ವಿಭಾಗ ಮಂಗಳೂರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.