15 ದಿನದಲ್ಲಿ ಪಶು ವೈದ್ಯಾಧಿಕಾರಿಗಳ ನೇಮಕ


Team Udayavani, Feb 21, 2017, 1:04 PM IST

dvg2.jpg

ದಾವಣಗೆರೆ: ಪಶು ಸಂಗೋಪನಾ ಇಲಾಖೆಯಲ್ಲಿ ಖಾಲಿ ಇರುವ 695 ವೈದ್ಯರ ಹುದ್ದೆಗಳ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗಿದ್ದು, 15 ದಿನಗಳಲ್ಲಿ 550 ವೈದ್ಯರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಎ. ಮಂಜು ತಿಳಿಸಿದ್ದಾರೆ. ಸೋಮವಾರ ನೂತನ ರೆಫರಲ್‌ ಪ್ರಯೋಗಾಲಯ ಕಟ್ಟಡ ಶಂಕುಸ್ಥಾಪನಾ ಸಮಾರಂಭಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಖಾಲಿ ಇರುವಂತಹ 695 ವೈದ್ಯ ಹುದ್ದೆಯಲ್ಲಿ 550 ಹುದ್ದೆ ನೇರ ನೇಮಕಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 15 ದಿನಗಳಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 371ನೇ ಜೆ ಕಲಂ ಅಡಿ 116 ವೈದ್ಯರ ಹುದ್ದೆಗೆ ಕೆಪಿಎಸ್‌ಸಿ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. 1159 ಪಶು ಆಸ್ಪತ್ರೆಗಳನ್ನು  ಮೇಲ್ದರ್ಜೆಗೆ ಏರಿಸಲಾಗುವುದು. ಬಿವಿಎಂಎಸ್‌ ಪೂರೈಸಿದ ಎಲ್ಲರಿಗೂ ಉದ್ಯೋಗ ದೊರೆಯಲಿದೆ ಎಂದರು. 

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದಲ್ಲಿರುವ 56 ಸಾವಿರ ಎಕರೆ ಅಮೃತಮಹಲ್‌ ಫಾರಂನ ಸಮಗ್ರ ಅಭಿವೃದ್ಧಿಗಾಗಿ ಅಮೃತಮಹಲ್‌ ಅಭಿವೃದ್ಧಿ ಪ್ರಾಧಿಕಾರ ಪ್ರಾರಂಭಿಸಲಾಗುವುದು. ಅಮೃತ್‌ ಮಹಲಿನಲ್ಲಿ ಮೇವು ಬೆಳೆದು, ಅಗತ್ಯ ಇರುವ ಕಡೆ ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿ 55 ಗೋಶಾಲೆ ಪ್ರಾರಂಭಿಸಲಾಗಿದೆ. 

101 ಗೋಶಾಲೆಗೆ ಬೇಡಿಕೆ ಇದೆ. 95 ಮೇವು ಬ್ಯಾಂಕ್‌ ಪ್ರಾರಂಭಿಸಲಾಗಿದೆ. ತೀವ್ರ ಬರ ಇರುವ ಹಿನ್ನೆಲೆಯಲ್ಲಿ ಒಣಹುಲ್ಲಿಗೆ ಯೂರಿಯಾ ಮತ್ತು ಉಪ್ಪು ಮಿಶ್ರಣ ಮಾಡಿ, ರಸಮೇವು ತಯಾರಿಸಿ, ರೈತರಿಗೆ ವಿತರಿಸಲಾಗುವುದು. ಸರ್ಕಾರ ಮೇವುಬ್ಯಾಂಕ್‌ ಮೂಲಕ 6 ರೂಪಾಯಿಯಂತೆ ಖರೀದಿಸಿ, ರೈತರಿಗೆ ಕೆಜಿಗೆ 2 ರೂಪಾಯಿಯಂತೆ ಕೊಡುತ್ತಿದೆ. ವಾಸ್ತವಿಕವಾಗಿ ಉಚಿತವಾಗಿ ನೀಡಬೇಕಿತ್ತು.

ಎಷ್ಟು ರೈತರಿಗೆ, ಎಷ್ಟು ಪ್ರಮಾಣದಲ್ಲಿ ಮೇವು ನೀಡಲಾಗಿದೆ ಎಂಬ ನಿಖರ ಅಂಕಿ-ಸಂಖ್ಯೆಗಾಗಿ 2 ರೂಪಾಯಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಕೊಪ್ಪಳ ಜಿಲ್ಲೆ ಮುನಿರಾಬಾದ್‌ನಲ್ಲಿ ದೇಶಿಯ ತಳಿ ಆಕಳು ಸಂರಕ್ಷಣೆ ಮತ್ತು ಅಭಿವೃದ್ಧಿ ಮಾಡಲಾಗುತ್ತಿದೆ. ಅಲ್ಲಿ ಅಮೃತಮಹಲ್‌, ಕಿಲಾರಿ, ಮಲೆನಾಡ ಗಿಡ್ಡ, ಕೃಷ್ಣವ್ಯಾಲಿ  ತಳಿ… ಒಳಗೊಂಡಂತೆ ಒಟ್ಟು 6 ದೇಶಿ ಆಕಳು ತಳಿ ಅಭಿವೃದ್ಧಿ ಪಡಿಸಲಾಗುವುದು.

ಹಾಸನದಲ್ಲಿ ಕುರಿ, ಕೊಡಗಿನ ಕೂಡಗಿಯಲ್ಲಿ ಮೇಕೆ ತಳಿ ಅಭಿವೃದ್ದಿ ಪಡಿಸಲಾಗುತ್ತಿದೆ. ಕುರಿ ಒಂದೇ ಮರಿ ಹಾಕುತ್ತದೆ. ನಮ್ಮ ತಂತ್ರಜ್ಞರು ಎರಡು ಮರಿ ಹಾಕುವಂತಹ ತಳಿ ಅಭಿವೃದ್ಧಿಪಡಿಸಿದ್ದಾರೆ. ಕೆಎಂಎಫ್‌ ಮಾದರಿಯಲ್ಲಿ ಮೇಕೆ ಹಾಲಿ ಸಂಗ್ರಹಿಸಿ, ಜನರಿಗೆ ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಮೀಕ್ಷೆ ಪ್ರಕಾರ ಮಾಂಸಹಾರಿಗಳು ವಾರಕ್ಕೆ 11 ಕೆಜಿ ಮಾಂಸ ಸೇವನೆ ಮಾಡಬೇಕು. ಆದರಲ್ಲಿ ನಮ್ಮಲ್ಲಿ 2.85 ಕೆಜಿ ಮಾತ್ರ ಬಳಕೆ ಮಾಡಲಾಗುತ್ತಿದೆ.

ಈ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಪಿಎಂಸಿಗಳ ಮೂಲಕ ಮಾಂಸ ಮಾರಾಟದ ವ್ಯವಸ್ಥೆ ಮಾಡಲಾಗುವುದು. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯದ ವದಾಗಾರ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ರಮೇಶ್‌, ಮೇಯರ್‌ ರೇಖಾ ನಾಗರಾಜ್‌, ಸದಸ್ಯ ದಿನೇಶ್‌ ಕೆ. ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರ ಗಿರೀಶ್‌ ಸುದ್ದಿಗೋಷ್ಠಿಯಲ್ಲಿದ್ದರು.   

ಟಾಪ್ ನ್ಯೂಸ್

Mantralya-Shree

Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

sanjay-raut

Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್

11

Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್‌ ಕುಮಾರಸ್ವಾಮಿ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

Puttur: ಆಂಬ್ಯುಲೆನ್ಸ್-ಪಿಕಪ್ ನಡುವೆ ಢಿಕ್ಕಿ: ಹಸುಳೆಗೆ ಗಾಯ

1-udupi

Udupi; ಹೊರರಾಜ್ಯದ ಕಾರ್ಮಿಕರ ತಂಡಗಳ ಬೀದಿ ಕಾಳಗ: ಹಲವರು ವಶಕ್ಕೆ

Rain

Rain: ದ.ಕ.ಜಿಲ್ಲೆಯ ಹಲವೆಡೆ ಮಳೆ; ಸೆ.24ಕ್ಕೆ ಕರಾವಳಿಗೆ ರೆಡ್‌ ಅಲರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mantralya-Shree

Thirupathi Laddu: ದೇಗುಲಗಳು ಸರಕಾರದ ಹಿಡಿತದಿಂದ ಮುಕ್ತವಾಗಲಿ: ಶ್ರೀಸುಬುಧೇಂದ್ರ ಸ್ವಾಮೀಜಿ

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

Shikaripur: ಭೀಕರ ರಸ್ತೆ ಅಪಘಾತ; ತೀರ್ಥಹಳ್ಳಿ ವ್ಯಕ್ತಿ ದುರ್ಮರಣ!

sanjay-raut

Ajit Pawar-led NCP ಹೊರಹಾಕಲು ಬಿಜೆಪಿ-ಶಿಂಧೆ ಸೇನೆ ಯತ್ನ: ಸಂಜಯ್ ರಾವುತ್

11

Kukke Subrahmanya; ಸರಕಾರದ ವೈಫಲ್ಯ ಬಗ್ಗೆ ಜನಜಾಗೃತಿ; ನಿಖಿಲ್‌ ಕುಮಾರಸ್ವಾಮಿ

accident

Kaup; ಮೂಳೂರು: ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಕಾರು ಢಿಕ್ಕಿ; ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.