ನಮ್ಮನ್ನೂ ಜಾತಿ ಪಟ್ಟಿಯಲ್ಲಿ ಸೇರಿಸಿ
Team Udayavani, Mar 15, 2017, 1:01 PM IST
ದಾವಣಗೆರೆ: ಜಾತಿ ಪಟ್ಟಿಯಲ್ಲಿ ಮತ್ತೆ ವೈಶ್ಯ ಜಾತಿಯ ಹೆಸರು ಸೇರ್ಪಡೆಗೆ ಒತ್ತಾಯಿಸಿ ಮಂಗಳವಾರ ಆರ್ಯವೈಶ್ಯ ಸಮಾಜದವರು ಪ್ರತಿಭಟನೆ ನಡೆಸಿದರು. ಶ್ರೀ ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದ ಆರ್ಯವೈಶ್ಯ ಸಮಾಜಬಾಂಧವರು, ಕಾರಣಾಂತರದಿಂದ ಜಾತಿ ಪಟ್ಟಿಯಿಂದ ಸಮಾಜದ ಹೆಸರು ಬಿಟ್ಟು ಹೋಗಿರಬಹುದು.
ಈಗಲಾದರೂ ಮತ್ತೆ ಜಾತಿ ಪಟ್ಟಿಯಲ್ಲಿ ಸಮಾಜದ ಹೆಸರನ್ನು ಕಡ್ಡಾಯವಾಗಿ ಸೇರಿಸಲೇಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆರ್ಯವೈಶ್ಯ ಸಮಾಜ ಬಾಂಧವರು ಭಾರತಕ್ಕೆ ದಿಢೀರ್ ನೆ ಬಂದವರಲ್ಲ. ಇತಿಹಾಸ, ಪುರಾಣ ಕಾಲದಿಂದಲೂ ಇಲ್ಲೇ ಇರುವಂತಹವರು.
ತ್ರೇತಾಯುಗ, ದ್ವಾಪರಯುಗ, ಗಂಗರು, ಚಾಲುಕ್ಯರು, ಹೊಯ್ಸಳರು, ಗುಪ್ತರ ಕಾಲದಲ್ಲೂಸಮಾಜದ ಬಾಂಧವರ ಬಗ್ಗೆ ಉಲ್ಲೇಖ ಇದೆ. 2,500 ವರ್ಷಗಳ ಇತಿಹಾಸದಲ್ಲಿ 1,500ಕ್ಕೂ ಹೆಚ್ಚು ವರ್ಷ ಭಾರತನ್ನು ಆರ್ಯವೈಶ್ಯರೇ ಆಳಿದ್ದಾರೆ ಎಂಬ ಇತಿಹಾಸವೇ ಇದೆ. ದೇಶದ ಸ್ವಾತಂತ್ರ ಸಂಗ್ರಾಮದಲ್ಲೂ ಸಮಾಜ ಅತ್ಯುನ್ನತ ಕಾಣಿಕೆ ಸಲ್ಲಿಸಿದೆ ಎಂದು ಸ್ಮರಿಸಲಾಗಿದೆ.
ಎಲ್ಲಾ ಜನಗಣತಿ ಇತರೆ ಗಣತಿಯಲ್ಲೂ ಆರ್ಯವೈಶ್ಯ ಸಮಾಜದ ಗಣತಿ ನಡೆಯುತ್ತಿದೆ. ಎಲ್ಲಾ ನಾಗರಿಕ ಹಕ್ಕು, ಸೌಲಭ್ಯ, ದಾಖಲೆ ಹೊಂದಿದ್ದಾರೆ. ಇತೀ¤ಚಿನವೆರೆಗಿನ ಜಾತಿ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರು ಇತ್ತು. ಆದರೆ, ಈಚೆಗೆಬಿಡುಗಡೆಗೊಳಿಸಿರುವ ಜಾತಿಗಳ ಪಟ್ಟಿಯಲ್ಲಿ ಆರ್ಯವೈಶ್ಯ ಸಮಾಜದ ಹೆಸರೇ ಇಲ್ಲ.
ತಾಂತ್ರಿಕ ಕಾರಣ, ಕಣ್ತಪ್ಪಿನಿಂದಾಗಿ ಬಿಟ್ಟು ಹೋಗಿರಬಹುದೇನೋ ಎಂದು ಪರಿಭಾವಿಸಿ ಜಾತಿ ಪಟ್ಟಿಯಲ್ಲಿ ಹೆಸರು ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಯೇ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ರಾಜ್ಯ ಸರ್ಕಾರ ಈಗಲಾದರೂ ನಮ್ಮ ಮನವಿಯನ್ನು ಅಂಗೀಕರಿಸಿ, ಜಾತಿ ಪಟ್ಟಿಯಲ್ಲಿ ಮತ್ತೆ ವೈಶ್ಯ ಜಾತಿಯ ಹೆಸರು ಸೇರಿಸುವ ಮೂಲಕ ಸಮಾಜ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕು. ಹಿಂದಿನಂತೆ ಜಾತಿ ಪಟ್ಟಿಯಲ್ಲಿ ಸಮಾಜದ ಹೆಸರು ಕಾಣಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ಆರ್ಯವೈಶ್ಯ ಮಹಾಸಭಾ ಪ್ರಧಾನ ಕಾರ್ಯದರ್ಶಿ ಆರ್.ಎಲ್. ಪ್ರಭಾಕರ್, ನಿರ್ದೇಶಕರಾದ ಆರ್.ಜಿ. ಶ್ರೀನಿವಾಸಮೂರ್ತಿ, ಕೆ.ಎನ್.ಅನಂತರಾಮಶೆಟ್ಟಿ, ಬಿ.ಟಿ. ಅಶ್ವತ್ರಾಜ್, ಜಿಲ್ಲಾ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ಬಿ.ಟಿ. ಹನುಮಂತಶೆಟ್ಟಿ, ಬಿ.ಎಸ್. ರವಿಶಂಕರ್, ಎಂ. ನಾಗರಾಜಗುಪ್ತ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ವರಿಷ್ಠರ ಖಡಕ್ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫಲ
MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್ ಸಿಂಹ
BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ
BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್
Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್ ಆರೋಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.