ಪಪ್ಪಾಯಿ ಬೆಳೆದು ಕೈ ತುಂಬ ಆದಾಯ ಗಳಿಸಿದ ವಕೀಲ!


Team Udayavani, Jul 3, 2021, 9:44 AM IST

ಪಪ್ಪಾಯಿ ಬೆಳೆದು ಕೈ ತುಂಬ ಆದಾಯ ಗಳಿಸಿದ ವಕೀಲ!

ಹೊನ್ನಾಳಿ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟ್ಟಣದಿಂದ ತಮ್ಮ ಗ್ರಾಮ ಹಿರೇಗೋಣಿಗೆರೆಗೆ ಬಂದು ಕೃಷಿಯತ್ತ ಮುಖ ಮಾಡಿದ ವಕೀಲರೊಬ್ಬರು ಮೂರು ಎಕರೆ ಜಮೀನಿನಲ್ಲಿ ಪಪ್ಪಾಯಿ ಹಣ್ಣು ಬೆಳದು ಸಾವಿರಾರು ರೂ. ಆದಾಯ ಗಳಿಸಿ ಕೃಷಿ ನಂಬಿ ಕೆಲಸ ಮಾಡಿದರೆ ಯಾರೂ ನಷ್ಟ ಅನುಭವಿಸುವುದಿಲ್ಲ ಎಂಬುದನ್ನು ವಕೀಲ ಮಂಜುನಾಥ ಸಾಧಿಸಿ ತೋರಿಸಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್‌ ಆಗಿದ್ದರಿಂದ ನ್ಯಾಯಾಲಯದಲ್ಲಿ ಸರಿಯಾದ ಕಲಾಪಗಳು ನಡೆಯದೆ ಇದ್ದುದರಿಂದ ಗ್ರಾಮಕ್ಕೆ ಬಂದ ವಕೀಲ ಮಂಜುನಾಥ ಅವರು ಏಕಕಾಲಕ್ಕೆ 1500 ಪಪ್ಪಾಯಿ ಗಿಡ ಹಾಗೂ 1500 ಅಡಕೆ ಸಸಿ ನೆಟ್ಟು ಅದಕ್ಕೆ ಸಮರ್ಪಕ ಕೃಷಿ ಆರಂಭಿಸಿದರು. ಸಸಿ ನೆಟ್ಟು 9 ತಿಂಗಳಿಗೆ 1500 ಗಿಡಗಳಲ್ಲಿ ಪಪ್ಪಾಯಿ ಕಾಯಿ ಬರಲಾರಂಭಿಸಿತು. ನಂತರ ಕಾಯಿ ಮಾಗಿ ಹಳದಿ ಬಣ್ಣಕ್ಕೆ ತಿರುಗಿ ಹಣ್ಣುಗಳಾದವು. ಹದಿನೈದು ದಿನಗೊಳಿಗೊಮ್ಮೆ 4 ಟನ್‌ನಂತೆ ಒಂದು ತಿಂಗಳಿಗೆ 8 ಟನ್‌ಗೆ ರೂ.80 ಸಾವಿರ ಆದಾಯ ತೆಗೆದರು. ಇದರ ನಡುವೆ ಪಪ್ಪಾಯಿ ಜತೆಯಲ್ಲೇ 1500 ಅಡಿಕೆ ಸಸಿಗಳನ್ನು ಸಹ ನೆಟ್ಟಿದ್ದಾರೆ.

ಸಾವಯವ ಗೊಬ್ಬರ ಬಳಕೆ: ವಕೀಲ ಮಂಜುನಾಥ ಅವರು ಸುಲಭದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಲ್ಲ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ಕುಟುಂಬದವರ ಜತೆ ಚರ್ಚಿಸಿದಾಗ ಪಪ್ಪಾಯಿ ಬೆಳೆ ಬೆಳೆಯಲು ತೀರ್ಮಾನಿಸಿದರು. ಅದರಂತೆ ಸಾವಯವ ಗೊಬ್ಬರ ಹಾಕಿ ಬೆಳೆಯಬಹುದು ಎಂದು ಸಾವಯವ ಆರ್ಗ್ಯಾನಿಕ್ ಗೊಬ್ಬರ ಹಾಕಿದರೆ ಉತ್ತಮ ಇಳುವರಿ ಪಡೆಯುವುದು ಮತ್ತು ರೈತಮಿತ್ರ ಎರೆಹುಳ ಉತ್ಪಾದನೆ ಆಗುವುದಲ್ಲದೆ ಭೂಮಿ ಫಲವತ್ತೆ ಆಗಲಿದೆ ಎಂದು ಬಗ್ಗೆ ಚರ್ಚಿಸಿದ ನಂತರ ಪಪ್ಪಾಯಿ ಬೆಳದು ಇಂದು ತಿಂಗಳಿಗೆ 80 ಸಾವಿರ ಲಾಭ ಪಡೆಯುತ್ತಿದ್ದಾರೆ.

ಪಪ್ಪಾಯಿ ಹಾಗೂ ಅಡಕ್ಕೆ ಸಸಿ ನೆಡಲು ರೂ.3 ಲಕ್ಷ ಖರ್ಚು ಮಾಡಿದ್ದಾರೆ. ಈಗಾಗಲೆ ರೂ.1.50 ಲಕ್ಷ ಪಪ್ಪಾಯಿಯಲ್ಲಿ ಪಡೆದುಕೊಂಡಿದ್ದಾರೆ. ಇನ್ನೂ ಒಂದುವರೆ ವರ್ಷ ಪಪ್ಪಾಯಿ ಬೆಳೆ ಬೆಳೆಯಲಿದ್ದಾರೆ ಹಾಗೂ ಲಾಭದ ನಿರೀಕ್ಷೆಯಲ್ಲಿದ್ದಾರೆ. ಅಡಿಕೆ ಫಲ ಕೊಡಲು ಕನಿಷ್ಠ 6 ವರ್ಷಗಳು ಬೇಕು ಇದರ ಮಧ್ಯ ಪಪ್ಪಾಯಿ ಬೆಳೆದು ಲಾಬ ಗಳಿಸುವತ್ತ ಮಂಜುನಾಥ ದಾಪುಗಾಲು ಹಾಕಿದ್ದಾರೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆಯನ್ನು ಬೆಳೆದು ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವ ಬಗ್ಗೆ ಸ್ನೇಹಿತರು ಸಾವಯವ ಗೊಬ್ಬರ ಹಾಕುವಂತೆ ಸಲಹೆ ನೀಡಿದ್ದರು. ತಕ್ಷಣನಾನು ಪಪ್ಪಾಯಿ ಗಿಡಗಳನ್ನು ಹಾಕಿ ಸಾವಯವ ಗೊಬ್ಬರ ಹಾಕಿದ್ದರಿಂದ ಹೆಚ್ಚು ಇಳುವರಿ ಫಸಲು ಬಂದಿದೆ. ಇದರಿಂದ ಹೆಚ್ಚು ಲಾಭ ಗಳಿಸಲು ಸಾಧ್ಯವಾಯಿತು.

ಲಾಕ್‌ಡೌನ್‌ ಎಂದು ನಾನು ಮನೆಯಲ್ಲೇ ಕುಳಿತಿದ್ದರೆ ಲಾಭ ಗಳಿಸುತ್ತಿರಲಿಲ್ಲ. ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳಬೇಕಾಗಿತ್ತು. ಒಟ್ಟಾರೆ ಕೃಷಿ ನಂಬಿ ಕೆಲಸ ಮಾಡಿದರೆ ಯಾರೂ ಸಹ ನಷ್ಟ ಅನುಭವಿಸುವುದಿಲ್ಲ. ಮಿಶ್ರ ಬೆಳೆ ಬೆಳೆದರೆ ಹೆಚ್ಚು ಲಾಭವಾಗಲಿದೆ.ಮಂಜುನಾಥ, ವಕೀಲರು.

ಟಾಪ್ ನ್ಯೂಸ್

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

Davanagere: Basanagowda Yatnal expelled from the party?: What did Vijayendra say?

Davanagere: ಪಕ್ಷದಿಂದ ಯತ್ನಾಳ್‌ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?

prison

Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ

Udayagiri police station attack case: Muthalik sparks controversy

Davanagere: ಉದಯಗಿರಿ ಪೊಲೀಸ್‌ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.