ಕುಲಕಸುಬು ಆಧಾರಿತ ಸಮಾಜದವರು ಸಂಘಟಿತರಾಗಬೇಕು
Team Udayavani, May 15, 2017, 1:01 PM IST
ದಾವಣಗೆರೆ: ಜಾಗತೀಕರಣದ ಪ್ರಭಾವದಲ್ಲಿ ಶಿವಸಿಂಪಿ ಸಮಾಜ ಒಳಗೊಂಡಂತೆ ಕುಲಕಸುಬು ಆಧಾರಿತ ಸಮಾಜಗಳು ಧೂಳಿಪಟವಾಗುವ ಹಿನ್ನೆಲೆಯಲ್ಲಿ ಎಲ್ಲಾ ಸಮಾಜದವರು ಸಂಘಟಿತರಾಗಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಮಂಜುನಾಥ್ ಬೇವಿನಕಟ್ಟಿ ತಿಳಿಸಿದ್ದಾರೆ.
ಭಾನುವಾರ ಶಿವಯೋಗಿ ಮಂದಿದರಲ್ಲಿ ನಡೆದ ಕುಲಗುರು ಶರಣ ಶಿವದಾಸಿಮಯ್ಯ ಜಯಂತ್ಯುತ್ಸವ, ಜಿಲ್ಲಾ ಶಿವಸಿಂಪಿ ಸಮಾವೇಶ, ಪ್ರತಿಭಾ ಪುರಸ್ಕಾರ, ಸಾಮೂಹಿಕ ವಿವಾಹ ಮಹೋತ್ಸವ, ವೀರಶೈವ ತರುಣ ಸಂಘ ಶತಮಾನೋತ್ಸವ, ಶರಣ ಹಡೇìಕರ್ ಮಂಜಪ್ಪ ಸ್ಮರಣೋತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಜಾಗತೀಕರಣ ಎಂಬುದು ಕುಲಕಸಬುಗಳನ್ನೇ ನಾಶ ಮಾಡುತ್ತಿದೆ.
ಇದೇ ಸ್ಥಿತಿ ಮುಂದುವರೆದಲ್ಲಿ ಕುಲಕಸುಬು ಆಧಾರಿತ ಸಮಾಜದವರು ಕೆಲಸದಿಂದಲೇ ದೂರ ಉಳಿಯಬೇಕಾಗುತ್ತದೆ. ಹಾಗಾಗಿ ತಮ್ಮ ಹಾಗೂ ಸಮಾಜದ ಉಳಿವಿಗಾಗಿ ಪ್ರತಿಯೊಬ್ಬರು ಸಂಘಟಿತರಾಗಲೇಬೇಕು ಎಂದು ಎಚ್ಚರಿಸಿದರು. ಕುಲಕಸುಬು ಆಧಾರಿತ ಕುಶಲಕರ್ಮಿ ಸಮಾಜದವರಿಗೆ ಸಾಮಾಜಿಕ ಮಾನ್ಯತೆ, ಸ್ಥಾನಮಾನ ತಂದುಕೊಟ್ಟವರು ವಿಶ್ವಗುರು ಬಸವಣ್ಣನವರು.
ಇಡೀ ಮಾನವ ಸಂಕುಲವೇ ಒಂದು ಎಂಬ ಉದಾತ್ತ ಚಿಂತನೆ ಯೊಂದಿಗೆ ಬಸವಣ್ಣನವರು ಅವಜ್ಞೆಗೆ ಒಳಗಾಗಿದ್ದ ಕುಲಕಸುಬು ಆಧಾರಿತ ಸಮಾಜದವರಿಗೆ ಆದ್ಯತೆ, ಸಾಮಾಜಿಕ ಗೌರವ ನೀಡಿದರು ಎಂದು ಸ್ಮರಿಸಿದರು. ಯಾವುದೇ ಸಮಾಜ, ಸಮುದಾಯಕ್ಕೆ ಆಗಲಿ ಸಂಘಟನೆ ಮಾನ್ಯತೆಯನ್ನು ತಂದುಕೊಡುತ್ತದೆ.
ಸಂಘಟನೆ ಎಂಬುದು ಇಲ್ಲದೇ ಹೋದಲ್ಲಿ ಸರ್ಕಾರ ಇರಲಿ ಸಮಾಜದಲ್ಲಿಯೂ ಮಾನ್ಯತೆ, ಗುರುತು ಎಂಬುದೇ ಇರುವುದಿಲ್ಲ. ಒಡೆದು ಆಳುವ ಕಾಲಘಟ್ಟದಲ್ಲಿ ಶಿವಸಿಂಪಿ ಸಮಾಜದದವರು ಸಂಘಟಿತರಾಗಬೇಕು. ಸಣ್ಣ ಪ್ರಮಾಣದಲ್ಲೇ ಆಗಲಿ ಶಿಕ್ಷಣ ಸಂಸ್ಥೆ ಪ್ರಾರಂಭಿಸಬೇಕು.
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಮಕ್ಕಳ ಹಾಗೂ ಸಮಾಜದ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಎಂ. ಕೊಟ್ರೇಶ್ ಮಾತನಾಡಿ, ಶಿವಸಿಂಪಿನ ಸಮಾಜಕ್ಕೆ ಸಾಮಾಜಿಕ ಮಾನ್ಯತೆ ತಂದುಕೊಟ್ಟವರು ಕುಲಗುರು ಶಿವದಾಸಿಯಮಯ್ಯ.
ಆದರೂ, ಈಗಲೂ ಶಂಕರ ದಾಸಿಮಯ್ಯ, ಶಿವದಾಸಿಮಯ್ಯ ಎಂಬ ಪ್ರಭೇಧ ಭೇದಗಳ ನಡುವೆಯೇ ಒದ್ದಾಡುತ್ತಿದ್ದೇವೆ. ದಾಸಿಮಯ್ಯ ಪ್ರಭೇಧ ಅನೇಕ ಇರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ಬದಿಗಿರಿಸಿ, ಸಮಾಜದ ಕುಲಗುರು ಶಿವದಾಸಿಮಯ್ಯನವರೇ ಎಂದು ಸಂಘಟಿತರಾಗಬೇಕು. ಇಲ್ಲದೇ ಹೋದಲ್ಲಿ ಸಮಾಜಕ್ಕೆ ಉಳಿಗಾಲವೇ ಇಲ್ಲ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Davanagere; ಸಿಎಂ ರಾಜೀನಾಮೆ ಕೊಡಲ್ಲ,ಕಾನೂನು ಹೋರಾಟ ಮಾಡುತ್ತಾರೆ: ಎಸ್.ಎಸ್.ಮಲ್ಲಿಕಾರ್ಜುನ್
Davanagere City Corporation: ನೂತನ ಮೇಯರ್-ಉಪ ಮೇಯರ್ ಆಯ್ಕೆ
Raj Bhavan ದುರ್ಬಳಕೆ ಮಾಡಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ: ಶಾಮನೂರು ಶಿವಶಂಕರಪ್ಪ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.