![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 21, 2024, 8:25 PM IST
ದಾವಣಗೆರೆ : ”ಲೋಕಸಭೆ ಚುನಾವಣೆಯಲ್ಲಿ ನಾನು ಎಂದೂ ಟಿಕೆಟ್ ಕೇಳಿರಲಿಲ್ಲ ಆದರೂ ನನಗೇ ಟಿಕೆಟ್ ಕೊಡುತ್ತ ಬಂದಿದ್ದಾರೆ, ಮುಂದೆಯೂ ನನಗೇ ಕೊಡುತ್ತಾರೆ. ಜನರು ಮುಂದೆಯೂ ಆಶೀರ್ವಾದ ಮಾಡುತ್ತಾರೆ” ಎಂದು ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಬುಧವಾರ ಹೇಳಿಕೆ ನೀಡಿದ್ದಾರೆ.
ದಾವಣಗೆರೆ ಎಂಪಿ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ”ದೆಹಲಿಯಲ್ಲಿ ರಾಷ್ಟ್ರೀಯ ಸಮಾವೇಶ ಇತ್ತು ಅದಕ್ಕೆ ಹೋಗಿದ್ದೆ. ನಾನು ಟಿಕೆಟ್ ಕೇಳಲು ಹೋಗಲ್ಲ, ಪಕ್ಷದ ತೀರ್ಮಾನ ಅಂತಿಮ. ಯಾರಿಗೆ ಟಿಕೆಟ್ ಬೇಕೋ ಅವರು ಕೇಳಲು ಹೋಗುತ್ತಾರೆ. ಸ್ಪರ್ಧೆ ಯಾವಾಗಲೂ ಇರುತ್ತದೆ. ಈ ಸಲ ಸ್ವಲ್ಪ ಪ್ರಬಲವಾಗಿದೆ” ಎಂದರು.
ಪುತ್ರನಿಗೆ ಟಿಕೆಟ್ ಕೊಡಿಸುತ್ತಾರೆ ಅನ್ನೋ ವಿಚಾರ ಪ್ರತಿಕ್ರಿಯಿಸಿ, ”ಅದು ಭಗವಂತನ ಇಚ್ಛೆ” ಎಂದರು.
ಭಾರತ್ ಅಕ್ಕಿ ಹೆಸರಲ್ಲಿ ಕಳಪೆ ಅಕ್ಕಿ ವಿತರಣೆ ಎಂಬ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ”ಮುನಿಯಪ್ಪ ಮೊದಲು ಅವರು ಹೇಳಿದಂತೆ ಜನರಿಗೆ ೧೦ಕೆಜಿ ಅಕ್ಕಿ ಕೊಡಲಿ. ಆಮೇಲೆ ಭಾರತ್ ಅಕ್ಕಿ ಬಗ್ಗೆ ಮಾತನಾಡಲಿ.ಕಳಪೆ ಹೇಗೆ ಕೊಡೋಕೆ ಬರುತ್ತೆ? ವಿರೋಧ ಪಕ್ಷದವರಿಗೆ ಏನು ಕೆಲಸವಿದೆ. ಹೀಯಾಳಿಸುವುದೇ ಅವರ ಕೆಲಸ” ಎಂದರು.
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.