BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ


Team Udayavani, Nov 16, 2024, 5:29 PM IST

renukaacharya

ದಾವಣಗೆರೆ: ‘ವಕ್ಫ್ ಆಸ್ತಿ ವಿಚಾರವಾಗಿ ಪ್ರತ್ಯೇಕವಾಗಿ ಪಾದಯಾತ್ರೆ ಹೊರಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೂಡಲೇ ಪಕ್ಷದ ರಾಷ್ಟ್ರೀಯ ವರಿಷ್ಠರು ತಡೆಯಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ನಾವೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ಪ್ರತ್ಯೇಕ ಪಾದಯಾತ್ರೆ ನಡೆಸಬೇಕಾಗುತ್ತದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಶನಿವಾರ (ನ16)ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇಣುಕಾಚಾರ್ಯ ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ರಾಜಕೀಯ ಏಳಿಗೆ ಸಹಿಸದ ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತ್ಯೇಕ ಪಾದಯಾತ್ರೆಯ ಹಗಲುವೇಷದ ನಾಟಕ ಮಾಡುತ್ತಿದ್ದು ಇದರಲ್ಲಿ ಅವರ ಸ್ವಹಿತಾಸಕ್ತಿಯೇ ಮುಖ್ಯವಾದಂತೆ ಕಾಣುತ್ತಿದೆ. ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ನಾನೇ ಮಹಾನಾಯಕ ಎಂದು ಬಿಂಬಿಸಿಕೊಂಡು ಯಾರ ಅನುಮತಿ ಪಡೆಯದೇ ನಡೆಸುವ ಅಭಿಯಾನಕ್ಕೆ ಕಾರ್ಯಕರ್ತರು ಕೈ ಜೋಡಿಸುವುದಿಲ್ಲ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಲಿದ್ದು ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕಾಗಬಹುದು. ವಕ್ಫ್ ಆಸ್ತಿ ವಿಚಾರದ ಬಗ್ಗೆ ಹೋರಾಡಲು ರಾಜ್ಯದಲ್ಲಿ ರಾಜ್ಯಾಧ್ಯಕ್ಷರು, ವಿಧಾನಸಭೆ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕರ ನೇತೃತ್ವದಲ್ಲಿ ಮೂರು ತಂಡ ಮಾಡಲಾಗಿದ್ದು ಈ ಮೂರು ನಾಯಕರ ತಂಡ ಬಿಟ್ಟು ಬೇರೆ ಪರ್ಯಾಯ ತಂಡಕ್ಕೆ ಅವಕಾಶವಿಲ್ಲ” ಎಂದರು.

‘ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಈಗಾಗಲೇ ವಾಲ್ಮೀಕಿ ನಿಗಮ, ಮುಡಾ ಹಗರಣಗಳ ವಿರುದ್ಧ ಯಶಸ್ವಿ ಹೋರಾಟ ನಡೆದಿದ್ದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗಿದೆ. ಬೆಂಗಳೂರಿನಿಂದ- ಮೈಸೂರು ವರೆಗೆ ಪಕ್ಷ ನಡೆಸಿದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ಸರ್ಕಾರದ ಜತೆಕೈಜೋಡಿಸಿದವರೇ ಇಂದು ಜನಜಾಗೃತಿ ಅಭಿಯಾನ ನಡೆಸಲು ಹೊರಟಿರುವುದರ ಉದ್ದೇಶವಾದರೂ ಏನು ಎಂಬುದನ್ನು ಯತ್ನಾಳ್ ಸ್ಪಷ್ಟಪಡಿಸಬೇಕು’ ಎಂದು ರೇಣುಕಾಚಾರ್ಯ ಸವಾಲು ಹಾಕಿದರು.

‘ರಾಜ್ಯದ ಆಡಳಿತ ವ್ಯವಸ್ಥೆ ನೋಡಿದರೆ ರಾಜ್ಯದಲ್ಲಿ ನಿಜವಾಗಿಯೂ ಕಾನೂನುಬದ್ಧ ಸರ್ಕಾರ ಇದೆಯೋ ತಾಲಿಬಾಲ್ ಸರ್ಕಾರ ಇದೆಯೋ ಎಂಬ ಸಂಶಯ ಮೂಡಿಸುತ್ತಿದೆ. ವಕ್ಫ್ ಬೋರ್ಡ್ ಮೂಲಕ ರೈತರಿಗೆ ಯಾವುದೇ ನೋಟಿಸ್ ಕೊಡುವುದಿಲ್ಲ. ಕೊಟ್ಟಂಥ ನೋಟಿಸ್ ವಾಪಸ್ ಪಡೆಯುವುದಾಗಿ ಒಂದು ಕಡೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರೆ, ಇನ್ನೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆಯ ತಿಮ್ಮಸಂದ್ರದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, ಟ್ರ್ಯಾಕ್ಟರ್ ವಶಪಡಿಸಿಕೊಂಡಿರುವುದು ಖಂಡನೀಯ’ ಎಂದರು.

‘ಕೂಡಲೇ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಅಮಾನತು ಮಾಡಿ, ವಶಪಡಿಸಿಕೊಂಡ ಟ್ಯ್ರಾಕ್ಟರ್ ನ್ನು ರೈತರಿಗೆ ಮರಳಿಸಬೇಕು. ಕೂಡಲೇ ಪಹಣಿ ಕಾಲಂ 11ರಲ್ಲಿ ನಮೂಪಡಿಸಬೇಕು ವಕ್ಫ್ ಹೆಸರನ್ನು ರದ್ದು ಪಡಿಸಬೇಕು’ ಎಂದರು.

‘ಜಮೀರ್ ಅವರನ್ನು ಕಾಂಗ್ರೆಸ್ ಹದ್ದುಬಸ್ತಿನಲ್ಲಿ ಇಡದಿದ್ದರೆ ನಾವೇ ಅವರಿಗೆ ತಕ್ಕಪಾಠ ಕಲಿಸಬೇಕಾಗುತ್ತದೆ. ಕಾಂಗ್ರೆಸ್‌ನ 50 ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿದ್ದಾರೆಂಬ ಮುಖ್ಯಮಂತ್ರಿಯವರ ಹೇಳಿಕೆ ಸುಳ್ಳು. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಸಲು ಅವರ ಪಕ್ಷದೊಳಗಿನವರೇ ಸಂಚು ನಡೆಸಿದ್ದು ಅವರಿಂದಲೇ ಸರ್ಕಾರ ಬೀಳಬಹುದು’ ಎಂದರು.

ನಮ್ಮ ನಾಡಿಗೆ ವಕ್ಫ್ ಬೋರ್ಡ್ ಅವಶ್ಯಕತೆ ಇದೆಯೇ? ದೇವಸ್ಥಾನದ ಹಣವನ್ನು ಬೇರೆ ಬೇರೆ ಧರ್ಮದವರಿಗೆ ಹಂಚುವ ರಾಜ್ಯ ಸರ್ಕಾರ, ವಕ್ಫ್ ಆಸ್ತಿಯನ್ನೂ ಇಲ್ಲದವರಿಗೆ ಹಂಚಲು ಕ್ರಮವಹಿಸಲಿ. ತನ್ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ರೈತರ ಪರವೋ, ಹಿಂದುಗಳ ಪರವೋ ಅಥವಾ ಭಯೋತ್ಪಾದನೆ, ಪ್ರಚೋದನೆಯಲ್ಲಿ ತೊಡಗಿರುವವರ ಪರವೋ ಎಂಬುದನ್ನು ಸಾಬೀತುಪಡಿಸಬೇಕು’ ಎಂದರು.

ಟಾಪ್ ನ್ಯೂಸ್

1-sachiva

Fraud case: ಮಹಾರಾಷ್ಟ್ರ ಸಚಿವಗೆ 2 ವರ್ಷ ಜೈಲು

1-ccchav

Chhaava ಚಿತ್ರವನ್ನು ಕಾಲ್ಪನಿಕವೆಂದ ನಟಿ ಸ್ವರಾ: ನೆಟ್ಟಿಗರಿಂದ ಟೀಕೆ

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!

Kotekar Bank: ಲಾಕರ್‌ನಲ್ಲಿ ಇರಿಸಿದ್ದ 8 ಲಕ್ಷ ರೂ. ಗೆದ್ದಲುಪಾಲು!

Cricket Red ball

Ranji ಸೆಮಿಫೈನಲ್ಸ್‌ ಹೋರಾಟ; ಮುಂಬಯಿ ಗೆಲುವಿಗೆ ಕಠಿನ ಸವಾಲು

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

Mysuru ಉದಯಗಿರಿ ಗಲಭೆ ಪ್ರಕರಣ: ಮೌಲ್ವಿ ಬಂಧನ

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

1-meenakshi

ರಾಜ್ಯ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆ ಮುಖ್ಯಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

MUDA ಇ.ಡಿ. ಸಮನ್ಸ್‌ ಪ್ರಕರಣ: ಹೈಕೋರ್ಟ್‌ ತೀರ್ಪು ಮೀಸಲು

1-meenakshi

ರಾಜ್ಯ ಅರಣ್ಯ ಇಲಾಖೆಗೆ ಇದೇ ಮೊದಲ ಬಾರಿಗೆ ಮಹಿಳೆ ಮುಖ್ಯಸ್ಥೆ

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

BJP: ನಿಲ್ಲದ ಯತ್ನಾಳ್‌-ವಿಜಯೇಂದ್ರ ವಾಕ್ಸಮರ!

ED notice cannot be issued after returning MUDA site: Lawyer Sandesh Chauta

MUDA ಸೈಟ್ ಹಿಂದಿರುಗಿಸಿದ ನಂತರ ಇ.ಡಿ ನೋಟಿಸ್ ಕೊಡಲಾಗದು: ಪಾರ್ವತಿ ಪರ ವಕೀಲ ಸಂದೇಶ ಚೌಟ

Davanagere: I can’t say anything about the Hebbalkar-Ravi case: Speaker UT Khader

Davanagere: ಹೆಬ್ಬಾಳ್ಕರ್‌- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್‌ ಖಾದರ್

MUST WATCH

udayavani youtube

ಬೆಂಗಳೂರಿಗರು ಈ ಜಾಗಕ್ಕೊಮ್ಮೆ ತಪ್ಪದೇ ಭೇಟಿ ಕೊಡಿ

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

ಹೊಸ ಸೇರ್ಪಡೆ

1-sachiva

Fraud case: ಮಹಾರಾಷ್ಟ್ರ ಸಚಿವಗೆ 2 ವರ್ಷ ಜೈಲು

POPE

ಪೋಪ್‌ ಫ್ರಾನ್ಸಿಸ್‌ ಆರೋಗ್ಯದಲ್ಲಿ ಕೊಂಚ ಚೇತರಿಕೆ: ವ್ಯಾಟಿಕನ್‌

1-ccchav

Chhaava ಚಿತ್ರವನ್ನು ಕಾಲ್ಪನಿಕವೆಂದ ನಟಿ ಸ್ವರಾ: ನೆಟ್ಟಿಗರಿಂದ ಟೀಕೆ

Kasaragod ವನ್ಯ ಜೀವಿ ದಾಳಿ: ಕಾಸರಗೋಡಿನಲ್ಲಿ 4 ವರ್ಷದಲ್ಲಿ 20 ಸಾವು

Kasaragod ವನ್ಯ ಜೀವಿ ದಾಳಿ: ಕಾಸರಗೋಡಿನಲ್ಲಿ 4 ವರ್ಷದಲ್ಲಿ 20 ಸಾವು

Manipal: ಖಾಲಿ ನಿವೇಶನಕ್ಕೆ ಬೆಂಕಿ

Manipal: ಖಾಲಿ ನಿವೇಶನಕ್ಕೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.