ರೈಲ್ವೆ ಸೇತುವೆಗಾಗಿ ಜೆಡಿಎಸ್ ರಸ್ತೆತಡೆ; ಮುಂದುವರಿದ ಪ್ರತಿಭಟನೆ
Team Udayavani, Mar 24, 2017, 1:02 PM IST
ದಾವಣಗೆರೆ: ಅಶೋಕ ಚಿತ್ರಮಂದಿರದ ಬಳಿಯ ರೈಲ್ವೆ ಗೇಟ್ಗೆ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ, 4 ದಿನದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಜೆಡಿಎಸ್ ಕಾರ್ಯಕರ್ತರನ್ನು ಗುರುವಾರ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಸತತ ನಾಲ್ಕು ದಿನಗಳ ಧರಣಿಗೂ ಜಿಲ್ಲಾಡಳಿತ ಸ್ಪಂದಿಸದಿರುವುದರಿಂದ ಗಾಂಧಿ ವೃತ್ತದ ಬಳಿ ಒಂದು ತಾಸಿಗೂ ಹೆಚ್ಚು ಹೊತ್ತು ರಸ್ತೆತಡೆ ನಡೆಸಿದ 30 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಪಕ್ಷದ ಯುವ ಘಕಟದ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾ ಖಾನ್ ಮಾತನಾಡಿ, ಕಳೆದ 20ರಿಂದ ನಾವು ಅಹೋರಾತ್ರಿ ಧರಣಿ ಆರಂಭಿಸಿದ್ದೇವೆ.
ನಮ್ಮ ಬೇಡಿಕೆ ಈಡೇರುವ ತನಕ ಧರಣಿ ಸ್ಥಳದಿಂದ ಮೇಲೇಳುವುದಿಲ್ಲ ಎಂಬುದಾಗಿ ತಿಳಿಸಿದ್ದೇವೆ. ಆದರೆ, ಇದುವರೆಗೆ ಜಿಲ್ಲಾಡಳಿತ ನಮ್ಮ ಮನವಿ ಆಲಿಸಲು ಮುಂದೆ ಬರುತ್ತಿಲ್ಲ. ಮೊದಲ ದಿನ ಬಂದು ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲು ಕ್ರಮ ವಹಿಸುವುದಾಗಿ ಹೇಳಿದ್ದರು.
ಆದರೆ, ಇದುವರೆಗೆ ಈ ಕುರಿತು ಯಾವುದೇ ಸಭೆ ಆಗಲಿ, ನಾವು ಕೊಟ್ಟ ಮನವಿಗಳಿಗೆ ಉತ್ತರವನ್ನಾಗಲಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಿಂದಇಲ್ಲಿಯವರೆಗೆ ಯಾವ ಬೆಳವಣಿಗೆ ಆಗಿದೆ. ಅನುದಾನ ಬಂದಿದ್ದರೂ ಕಾಗಮಾರಿ ಆರಂಭಗೊಳ್ಳದೇ ಇರಲು ಕಾರಣ ಏನು? ಎಂಬ ವಿವರ ನೀಡಬೇಕು.
ನಾವು ಈ ಹಿಂದೆ ಫೆ.27ರಂದು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದರ ಮೇಲೆ ಕೈಗೊಂಡ ಕ್ರಮಗಳೇನು? ಮಾ. 20ರಂದು ಜಿಲ್ಲಾಧಿಕಾರಿಗಳು ನಮಗೆ ನೀಡಿದ ಭರವಸೆ ಹಿನ್ನೆಲೆಯಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ಕೊಡಬೇಕು. ಅಲ್ಲಿಯವರೆಗೆ ನಾವು ಧರಣಿ ಕೈ ಬಿಡುವುದಿಲ್ಲ.
ಜಿಲ್ಲಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ಟಿ. ಅಸರ್, ಕೆ. ಶ್ರೀನಿವಾಸ್, ಪಿ. ದಾದಾಪೀರ್, ಖಾದರ್ ಬಾಷ, ಹನಮಂತ ರೆಡ್ಡಿ, ಅಹಮದ್ ಬಾಷ, ಸೈಯದ್ ರಸೂಲ್ ಸಾಬ್, ನವೀನ್, ರೇಣುಕಾ ಯಲ್ಲಮ್ಮ, ಹನುಮಂತಪ್ಪ, ಆಯೂಬ್ ಬೇಗ್, ಸೋಮಶೇಖರ್ ಹೋರಾಟದ ನೇತೃತ್ವ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಜಾತಿಗಣತಿಗೆ ವೀರಶೈವ ಲಿಂಗಾಯತ ಮಹಾಸಭಾದ ವಿರೋಧ: ಶಾಮನೂರು ಶಿವಶಂಕರಪ್ಪ
Davanagere: ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತ್ಯು
Competitive Exam: ರೈಲ್ವೇ ಪರೀಕ್ಷೆಯಲ್ಲಿ ಇನ್ನು ಕನ್ನಡ ಕಡ್ಡಾಯ: ಕೇಂದ್ರ ಸಚಿವ ಸೋಮಣ್ಣ
Davanagere: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ತಡೆದವರೇ ಯತ್ನಾಳ್: ರೇಣುಕಾಚಾರ್ಯ
BJP: ವರಿಷ್ಠರ ಖಡಕ್ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫಲ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.