![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Congress; ಈ ಬಾರಿಯೇ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರೆ: ಶಾಸಕ ಬಸವರಾಜ ವಿ.ಶಿವಗಂಗಾ
ಅನೇಕ ಶಾಸಕರ ಬೆಂಬಲವಿದೆ... ಮಾತನಾಡದಂತೆ ಹೈಕಮಾಂಡ್ ಹೇಳಿದೆ ಆದರೆ...
Team Udayavani, Jun 28, 2024, 8:50 PM IST
![1-sadsadasd](https://www.udayavani.com/wp-content/uploads/2024/06/1-sadsadasd-3-620x373.jpg)
ದಾವಣಗೆರೆ: ಈ ಬಾರಿಯೇ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ.ಶಿವಗಂಗಾ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರರಿಗೆ ಅನೇಕ ಶಾಸಕರ ಬೆಂಬಲವಿದೆ. ಈ ಬಾರಿಯೇ ಡಿ.ಕೆ.ಶಿವಕುಮಾರ್ಮುಖ್ಯಮಂತ್ರಿ ಸಹ ಆಗುತ್ತಾರೆ ಎಂದರು.
ಹತ್ತು ಜನರನ್ನು ಉಪ ಮುಖ್ಯಮಂತ್ರಿ ಮಾಡಲಿ. ಆದರೆ,ಅದಕ್ಕಿಂತಲೂ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯ ಮಂತ್ರಿ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ ಬೇಕಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶನದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರ ಪರಿಶ್ರಮ, ಸಂಘಟನೆಯಿಂದಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಜಾತಿಗೊಂದು ಉಪ ಮುಖ್ಯಮಂತ್ರಿಗಳನ್ನು ಮಾಡುವುದಾದರೆ ನಮ್ಮ ಅಭ್ಯಂತರವೇನೂ ಇಲ್ಲ. ಪಕ್ಷವನ್ನು ಅಽಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದಂತಹ ಡಿ.ಕೆ.ಶಿವಕುಮಾರ್ ಅವರನ್ನು ಮೊದಲು ಮುಖ್ಯಮಂತ್ರಿ ಮಾಡಲಿ ಎಂದು ಒತ್ತಾಯಿಸಿದರು.
ಡಿ.ಕೆ. ಶಿವಕುಮಾರ್ ಅರಿಗೆ ಅನೇಕ ಶಾಸಕರ ಬೆಂಬಲವಿದೆ. ಬೆಂಬಲವಿರುವಂತಹ ಶಾಸಕರ ಹೆಸರನ್ನು ನಾನು ಪ್ರಸ್ತಾಪ ಮಾಡುವುದೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ಗೆ ಎಲ್ಲ ಜಾತಿ, ಸಮುದಾಯವರು ಮತ ಹಾಕಿದ್ದಾರೆ. ಹಾಗೆಂದು ಜಾತಿಗೊಂದು ಉಪ ಮುಖ್ಯ ಮಂತ್ರಿ ಸ್ಥಾನ ಕೊಡುವುದಕ್ಕೆ ಸಾಧ್ಯವೇ? ಎಲ್ಲ ಜಾತಿ, ಸಮುದಾಯದವರ ಪರವಾಗಿ ಸಮರ್ಥ ನಾಯಕ ಎಂಬ ಕಾರಣಕ್ಕಾಗಿಯೇ ಡಿ.ಕೆ. ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿರುವುದು ಎಂದು ತಿಳಿಸಿದರು.
ಡಿಸಿಎಂ ಹುದ್ದೆ ಬಗ್ಗೆ ಯಾರೂ ಮಾತನಾಡದಂತೆ ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ಹೀಗಿದ್ದರೂ ಡಿಸಿಎಂ ಹುದ್ದೆ ಬಗ್ಗೆ ಹಿರಿಯರೇ ಹೇಳಿಕೆ ನೀಡುವಾಗ ನಾವೂ ಅಂತಹ ಹಿರಿಯರನ್ನೇ ಪಾಲಿಸಬೇಕಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಾಪ್ ನ್ಯೂಸ್
![Mann Ki Baat ಕಬ್ಬನ್ ಪಾರ್ಕ್ನಲ್ಲಿ ಸಂಸ್ಕೃತ ಕಲರವ: ಮೋದಿ ಮೆಚ್ಚುಗೆ](https://www.udayavani.com/wp-content/uploads/2024/07/mann-415x271.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.