ಗಂಡನಿಗೆ ಗಂಡಾಂತರ ವದಂತಿಗೆ ತಾಳಿಯಲ್ಲಿದ್ದ ಹವಳ ಪುಡಿ ಪುಡಿ!


Team Udayavani, Jul 6, 2017, 9:00 AM IST

DV-5.jpg

ದಾವಣಗೆರೆ: ಮಾಂಗಲ್ಯ ಸರದ ಜತೆಗೆ ಕೆಂಪು  ಹವಳ ಇದ್ದರೆ ನಿಮ್ಮ ಗಂಡನಿಗೆ ಗಂಡಾಂತರ ತಪ್ಪಿದ್ದಲ್ಲ. ತಕ್ಷಣ ಅವುಗಳನ್ನು ಜಜ್ಜಿ ಹಾಕಿ, ಇಲ್ಲವಾದರೆ ಬೆಳಗಾಗುವುದರೊಳಗೆ ನಿಮ್ಮ ಪತಿಗೆ ಪ್ರಾಣಾಪಾಯ ಆಗಲಿದೆ…! 
ಇಂತಹದ್ದೊಂದು ಸುದ್ದಿ ಕೇಳಿ ಜಿಲ್ಲೆಯ  ಗ್ರಾಮೀಣ ಭಾಗದ ಮಹಿಳೆಯರು ತಾಳಿಯಲ್ಲಿದ್ದ (ಮಾಂಗಲ್ಯ ಸರ)ಹವಳಗಳನ್ನು ಜಜ್ಜಿ ಪುಡಿ ಪುಡಿ ಮಾಡಿದ ಘಟನೆ ಬುಧವಾರ ನಡೆದಿದೆ.

ಗ್ರಾಮೀಣ ಭಾಗದ ಹರಪನಹಳ್ಳಿ, ಜಗಳೂರು  ತಾಲೂಕಿನ ವಿವಿಧೆಡೆ ಸೇರಿ ಪಾಲಿಕೆ ವ್ಯಾಪ್ತಿಯ ಹಳೆ ಕುಂದುವಾಡ, ಹೊಸ ಕುಂದುವಾಡ, ಎಸ್‌.ಎ. ರವೀಂದ್ರನಾಥ ನಗರ, ಅಮೃತ ನಗರದಲ್ಲಿ ಈ ವಿದ್ಯಮಾನ ನಡೆದಿದೆ. ಅದರಲ್ಲೂ
ವಿಶೇಷವಾಗಿ ಕುಂದುವಾಡ ಗ್ರಾಮದಲ್ಲಿ ಶೇ.80ರಷ್ಟು ಸುಮಂಗಲೆಯರು ತಮ್ಮ ತಾಳಿಯಲ್ಲಿದ್ದ ಹವಳಗಳನ್ನು ಕಲ್ಲಿನಿಂದ ಜಜ್ಜಿ ಹಾಕಿದ್ದಾರೆ. 

ಮಂಗಳವಾರ ರಾತ್ರಿ 11ರಿಂದ ಈ ಹವಳದ ಸುದ್ದಿ ಹಬ್ಬಿದೆ. ಅನೇಕರು ದೂರವಾಣಿ ಕರೆ, ಸಾಮಾಜಿಕ ಜಾಲತಾಣಗಳ ಮೂಲಕ ಈ ಸುದ್ದಿ ಹಬ್ಬಿಸಿದ್ದಾರೆ. ಹೀಗೆ ಸುದ್ದಿ ಹಬ್ಬಿಸಿದವರು ಈಗೊಂದು ದೊಡ್ಡ ಗಂಡಾಂತರ ಬಂದಿದೆ.
ತಾಳಿಯಲ್ಲಿನ ಕೆಂಪು ಹವಳ ಜಜ್ಜದೇ ಇದ್ದುದಕ್ಕೆ ಅಲ್ಲಿ ಇಷ್ಟು ಜನ ಸತ್ತಿದ್ದಾರೆ, ಇಲ್ಲಿ ಅಷ್ಟು ಜನ ಸತ್ತಿದ್ದಾರೆ ಅಂದೆಲ್ಲಾ ಪುಕಾರು ಸೃಷ್ಟಿಸಿದ್ದಾರೆ. ಇದನ್ನು ಕೇಳಿದ ಜನ 10-15 ರೂ.ನ ಹವಳ ಹೋದರೆ ಹೋಗಲಿ, ನಮ್ಮ ಗಂಡಂದಿರು 
ಕ್ಷೇಮವಾಗಿದ್ದರೆ ಸಾಕು ಎಂದು ಈ ರೀತಿ ಮಾಡಿದ್ದಾರೆ. 

ಕುಂದುವಾಡದ ಪೈಲ್ವಾನ್‌ ಗಣೇಶ್‌ರಿಗೂ ಸಹ ಮೊಬೈಲ್‌ಗೆ ಈ ರೀತಿಯ ಕರೆಬಂದಿದೆ. ಬಳ್ಳಾರಿಯಿಂದ ಅವರ ಸಂಬಂಧಿಕರೊಬ್ಬರು ಕರೆಮಾಡಿ, ಯಾಕೆ? ಏನು? ಎಂದು ಕೇಳಬೇಡ. ಮೂಢನಂಬಿಕೆಯೋ, ವೈಜ್ಞಾನಿಕವೋ 
ಕೆದಕಬೇಡ. ತಕ್ಷಣ ನಿಮ್ಮ ಮನೆಯವರ ತಾಳಿಯಲ್ಲಿರುವ ಹವಳವನ್ನು ಜಜ್ಜಿ ಹಾಕಿಸು ಎಂಬುದಾಗಿ ಮಧ್ಯರಾತ್ರಿ 12.30ರ ಸುಮಾರಿಗೆ ತಿಳಿಸಿದ್ದಾರೆ. ಇದನ್ನು ಗಣೇಶ್‌ ಒಪ್ಪದೇ ಇದ್ದಾಗ, ಎಲ್ಲಾ ಊರುಗಳಲ್ಲಿ ಆಗುತ್ತಿದೆ. ನಿಮ್ಮ ಊರಲ್ಲೂ ಇದು ನಡೆಯುತ್ತಿದೆ ಎಂದಿದ್ದಾರೆ. ಆಯಿತು ನೋಡೋಣ ಎಂದು ಅವರು ಸುಮ್ಮನಾಗಿದ್ದಾರೆ.  ಆದರೆ, ಮತ್ತದೇ ವ್ಯಕ್ತಿ ಬೆಳಗ್ಗೆ 4 ಗಂಟೆಗೆ ಮತ್ತೆ ಕರೆ ಮಾಡಿ, ಉದಾಸೀನ ಮಾಡಬೇಡ. ಇದೀಗ ಹರಪನಹಳ್ಳಿಯಲ್ಲಿ 5 ಜನ ಸತ್ತಿದ್ದಾರಂತೆ ಎಂದು ಎಚ್ಚರಿಸಿದ್ದಾರೆ. ಕೊನೆಗೆ ಗಣೇಶ್‌ ಮನೆಯಿಂದ ಹೊರಬಂದಿದ್ದಾರೆ. ಕರೆ ಮಾಡಿದ ವ್ಯಕ್ತಿ
ಹೇಳಿದಂತೆ ಗ್ರಾಮದ ಅನೇಕ ಮಹಿಳೆಯರು ಅಷ್ಟು ಹೊತ್ತಲ್ಲೇ ಎಚ್ಚರಗೊಂಡು ಹವಳ ಒಡೆದು ಹಾಕುತ್ತಿದ್ದುದು ಕಂಡುಬಂದಿದೆ. ಇದರಿಂದ ಚಕಿತರಾದ ಗಣೇಶ್‌, ಹಲವರಿಗೆ ತಿಳಿಹೇಳುವ ಯತ್ನಮಾಡಿದ್ದಾರೆ. ಆದರೆ, ಯಾರೂ ಸಹ
ಅವರ ಮಾತು ನಂಬಿಲ್ಲ. ಗ್ರಾಮದ ಬಹುತೇಕ ಮುತ್ತೆ$çದೆಯರು ತಮ್ಮ ತಾಳಿಯಲ್ಲಿದ್ದ ಹವಳ ಜಜ್ಜಿ ಹಾಕಿದ್ದಾರೆ. ಕೊನೆಗೆ ಇದು ಮಾಧ್ಯಮಗಳಿಗೆ ಗೊತ್ತಾಗಿದೆ. ಒಂದಷ್ಟು ಜನ ತಿಳಿ ಹೇಳಿದರೂ ಗೃಹಿಣಿಯರು ಕಿವಿಗೊಟ್ಟಿಲ್ಲ. ಜಿಲ್ಲೆಯ
ಅನೇಕ ಗ್ರಾಮಗಳಲ್ಲಿ ಈ ರೀತಿಯ ಘಟನೆ ನಡೆದಿರುವುದು ತಿಳಿದುಬಂದಿದೆ. ಹರಪನಹಳ್ಳಿ, ಜಗಳೂರು ತಾಲೂಕಿನ ಗ್ರಾಮಗಳಲ್ಲಿ ಸುದ್ದಿ ಕಾಳಿYಚ್ಚಿನಂತೆ ಹಬ್ಬಿದೆ.

ಅವಿದ್ಯಾವಂತ, ಗ್ರಾಮೀಣ ಮಹಿಳೆಯರೇ ಈ ವದಂತಿ ನಂಬಿ ಕೆಂಪು ಹವಳ ಜಜ್ಜಿ ಹಾಕಿದ್ದಾರೆ. ಕೆಲವರಿಗೆ ತವರು ಮನೆಯವರೇ ದೂರವಾಣಿ ಕರೆ ಮಾಡಿದ್ದಾರಂತೆ. ರಾತ್ರೋ ರಾತ್ರಿ ಹಬ್ಬಿದ ಪುಕಾರು ತಾಳಿಯಲ್ಲಿದ್ದ ಹವಳಕ್ಕೆ ಕಂಟಕ ತಂದಿದೆ.  

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಒಳ್ಳೆಯದು – ಸತೀಶ್ ಜಾರಕಿಹೊಳಿ

Davanagere: Basanagowda Yatnal expelled from the party?: What did Vijayendra say?

Davanagere: ಪಕ್ಷದಿಂದ ಯತ್ನಾಳ್‌ ಉಚ್ಛಾಟನೆ?: ವಿಜಯೇಂದ್ರ ಹೇಳಿದ್ದೇನು?

prison

Davanagere: 9ನೇ ತರಗತಿಯ ಬಾಲಕಿಯ ಅತ್ಯಾಚಾರ ಎಸೆಗಿದ್ದ ಆರೋಪಿಗೆ 20ವರ್ಷ ಕಠಿಣ ಜೈಲು ಶಿಕ್ಷೆ

Udayagiri police station attack case: Muthalik sparks controversy

Davanagere: ಉದಯಗಿರಿ ಪೊಲೀಸ್‌ ಠಾಣೆ ದಾಳಿ ಪ್ರಕರಣ: ಕಿಡಿಕಾರಿದ ಮುತಾಲಿಕ್

Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ

Davanagere: ಎಲ್ಲಾ ರಾಜ್ಯಗಳಲ್ಲಿ ದಯಾಮರಣ ಕಾನೂನು ಜಾರಿ ಮಾಡಬೇಕು: ಎಚ್.ಬಿ. ಕರಿಬಸಮ್ಮ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.