ವಿದ್ಯಾರ್ಥಿಗಳಿಗೆ ತೊಳಲಾಟ ಸೃಷ್ಟಿಸಿದ ಕೊರೊನಾ ಸೋಂಕು


Team Udayavani, May 31, 2021, 9:36 PM IST

31-10

ಪ್ರಾತಿನಿಧಿಕ ಚಿತ್ರ

„ರಾ. ರವಿಬಾಬು

ದಾವಣಗೆರೆ: ಇಷ್ಟೊತ್ತಿಗೆ ಪರೀಕ್ಷೆ ಮುಗಿದಿದ್ರೆ ಚೆನ್ನಾಗಿ ಇರ್ತಾ ಇತ್ತು. ಓದೋಕೆ ಏನೋ ಟೈಮ್‌ ಸಿಕ್ಕಿದೆ. ಆದ್ರೂ ಎಕ್ಸಾಂ ಮುಗಿದು ಹೋಗಿದ್ರೆ, ಮುಂದಿನ ಕ್ಲಾಸ್‌ಗೆ ಹೋಗೋಕೆ ಅನುಕೂಲ ಆಗ್ತಾ ಇತ್ತು… ಇದು ದಾವಣಗೆರೆ ತಾಲೂಕಿನ ಅಣಬೇರು ಗ್ರಾಮದ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲಿರುವ ಎ.ಆರ್‌. ಚಂದನ ಅನಿಸಿಕೆ. ಮಹಾಮಾರಿ ಕೊರೊನಾದಿಂದ ಸತತ ಎರಡನೇ ವರ್ಷವೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಲ್ಪಟ್ಟಿವೆ. ಜೂ. 21 ರಿಂದ ಪ್ರಾರಂಭವಾಗಿ ಜು. 10ಕ್ಕೆ ಮುಗಿಯಬೇಕಿದ್ದ ಪರೀಕ್ಷೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ.

ಪರೀಕ್ಷೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಸಾವಿರಾರು ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಮುಗಿದರೆ ಸಾಕಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೂನ್‌ನಿಂದ ಶೈಕ್ಷಣಿಕ ಸಾಲು ಪ್ರಾರಂಭವಾಗಿ ಎಸ್ಸೆಸ್ಸೆಲ್ಸಿ ನಂತರ ಕಲಾ, ವಾಣಿಜ್ಯ, ವಿಜ್ಞಾನ, ಡಿಪ್ಲೋಮಾ, ಐಟಿಐ ಹೀಗೆ ವಿವಿಧ ಕೋಸ್‌ ಗಳಿಗೆ ದಾಖಲಾಗಬೇಕಿದ್ದ ವಿದ್ಯಾರ್ಥಿಗಳು ಇನ್ನೂ ಪರೀಕ್ಷೆಯನ್ನೇ ಬರೆದಿಲ್ಲ. ಯಾವಾಗ ನಡೆಯಲಿವೆ ಎಂಬ ಖಚಿತತೆಯೂ ಇಲ್ಲದೆ ಒಂದು ರೀತಿಯ ತೊಳಲಾಟದಲ್ಲಿದ್ದಾರೆ ಎಂಬುದಕ್ಕೆ ಚಂದನಳ ಮಾತುಗಳು ಸಾಕ್ಷಿಯಾಗಿವೆ.

ಕೊರೊನಾ ಕಾರಣಕ್ಕೆ ಎಕ್ಸಾಂ ಮುಂದಕ್ಕೆ ಹೋಗಿವೆ. ಎಕ್ಸಾಂ ಮುಂದೂಡಿರೋದು ಒಳ್ಳೆಯದು. ಓದೋಕೆ ಟೈಮ್‌ ಸಿಕ್ಕಿದೆ. ಆದರೂ, ಸರಿಯಾಗಿ ಓದೋಕೇ ಆಗ್ತಾನೇ ಇಲ್ಲ. ಇಂತಹ ದಿನದಿಂದ ಎಕ್ಸಾಂ ಅಂತಾ ಇದ್ದಿದ್ರೆ ಓದೋಕೆ ಮನಸ್ಸು ಬರ್ತಾ ಇತ್ತು. ಯಾವಾಗ ಎಕ್ಸಾಂ ಅನ್ನೋದೇ ಗೊತ್ತಿಲ್ಲ. ಹಂಗಾಗಿ ಓದೋಕೆ ಮನಸ್ಸಾಗೋದೇ ಇಲ್ಲ. ಹಂಗಂತಾ ಓದ್ತಾನೇ ಇಲ್ಲ ಅನ್ನೊಂಗಿಲ್ಲ. ದಿನಕ್ಕೆ ಏನಿಲ್ಲ ಅಂದ್ರೂ ಒಂದು ಗಂಟೆ ಓದ್ತಾ ಇದೀನಿ. ಎಕ್ಸಾಂ ಮುಗಿದಿದ್ರೆ ಚೆನ್ನಾಗಿರೋದು ಎಂಬ ಮಾತು ಸಾವಿರಾರು ವಿದ್ಯಾರ್ಥಿಗಳ ಅಪೇಕ್ಷೆಯ ಪ್ರತೀಕ. ಎಕ್ಸಾಂ ಮುಗಿದಿದ್ರೆ ಬಹಳ ಚೆನ್ನಾಗಿ ಇರೋದು. ಟೈಮೇನೋ ಇದೆ.

ಆದರೆ, ಮನೆ -ಹೊಲದ ಕೆಲಸ ಅಂತ ಓದೋಕೆ ಆಗ್ತಾನೇ ಇಲ್ಲ. ಎಕ್ಸಾಂ ಬಂದಾಗ ನೋಡೋಣ ಬಿಡು. ಅನೌನ್ಸ್‌ ಆದ ಮೇಲೆ ಓದೋಕೆ ಸ್ಟಾರ್ಟ್‌ ಮಾಡಿದ್ರೆ ಆಗುತ್ತೆ ಅನಿಸ್ತಾ ಇದೆ. ಕೊರೊನಾ ಕಾರಣಕ್ಕೆ ಯಾರೂ ಫ್ರೆಂಡ್ಸ್‌ ಸಿಗ್ತಾನೇ ಇಲ್ಲ. ನಮ್‌ ಮನಿಗೆ ಅವರಿಗೆ ಬರೋಕೆ ಭಯ. ನಂಗೆ ಅವರ ಮನೆಗೆ ಹೋಗೋಕೆ ಭಯ. ಹಂಗಾಗಿ ಒಂದು ರೀತಿಯ ಬೋರ್‌ ಆಗ್ತಾ ಇದೆ ಎನ್ನುವುದು ಕುಕ್ಕುವಾಡ ಗ್ರಾಮದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ಪಿ.ಆರ್‌. ರಾಕೇಶ್‌ ಅನಿಸಿಕೆ. ವಿದ್ಯಾರ್ಥಿಗಳು ಸಹ ಅಂತರ ಕಾಪಾಡಿಕೊಳ್ಳುತ್ತಿರುವುದು. ಒಬ್ಬರಿಗೊಬ್ಬರನ್ನು ಭೇಟಿ ಮಾಡುವುದಕ್ಕೂ ಹಿಂಜರಿಯುವಂತೆ ಮಾಡುತ್ತಿರುವುದಕ್ಕೆ ಕಾರಣ ಗ್ರಾಮಗಳಲ್ಲಿ ಊಹೆಗೂ ಮೀರಿ ವ್ಯಾಪಿಸುತ್ತಿರುವ ಕೊರೊನಾ ಎಂಬ ಮಹಾಮಾರಿ.

ಕೊರೊನಾ ಎಲ್ಲಿಯೋ ಒಂದು ಕಡೆ ವಿದ್ಯಾರ್ಥಿ ಸಮುದಾಯದ ಮೇಲೆ ಗಾಢ ಪರಿಣಾಮ ಉಂಟು ಮಾಡುತ್ತಿದೆ ಎಂಬುದಕ್ಕೆ ರಾಕೇಶ್‌ನ ಮಾತು ಪುಷೀrಕರಿಸುತ್ತದೆ. ವಿದ್ಯಾರ್ಥಿಗಳು ಕಲಿಕಾ ವಾತಾವರಣದಿಂದ ದೂರವಾಗಬಾರದು. ವಿದ್ಯಾರ್ಥಿ ಜೀವನದ ಅತಿ ಪ್ರಮುಖ ಘಟ್ಟ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಮತ್ತು ಆತ್ಮವಿಶ್ವಾಸದಿಂದ ಬರೆಯುವಂತಾಗಬೇಕು ಎಂದು ಶಿಕ್ಷಕ ಸಮೂಹ ನಿರಂತರವಾಗಿ ವಿದ್ಯಾರ್ಥಿಗಳ ಸಂಪರ್ಕದಲ್ಲಿದೆ. ಆನ್‌ಲೈನ್‌, ಮೊಬೈಲ್‌ ಸಂಪರ್ಕದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ನಡೆಯುತ್ತಲೇ ಇದೆ.

ಆದರೂ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ನಡೆದು ಹೋಗಿದ್ದರೆ ಚೆನ್ನಾಗಿ ಇರುತ್ತಾ ಇತ್ತು… ಎಂಬ ಭಾವನೆ ಆಳವಾಗಿ ಬೇರೂರಿದೆ. ಆದರೆ, ಕೊರೊನಾ ಕಾರಣಕ್ಕೆ ಪರೀಕ್ಷೆ ಮುಂದೂಡಲೇಬೇಕಾಗಿದೆ. ವಾತಾವರಣ ತಿಳಿಯಾದ ನಂತರ ಪರೀಕ್ಷೆ ನಡೆಯಲಿವೆ. ಅಲ್ಲಿಯವರೆಗೆ ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸಬೇಕು ಎನ್ನುತ್ತಾರೆ ಅಣಬೇರು ಗ್ರಾಮದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ. ಸುರೇಶ್‌.

ಟಾಪ್ ನ್ಯೂಸ್

India’s first bullet train to be made in Bangalore?

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

Ma’nene; ಪ್ರತಿ ವರ್ಷ ಶ*ವಗಳಿಗೆ ವಿಶಿಷ್ಟ ಗೌರವ!: ಅಚ್ಚರಿಗೊಳಪಡಿಸುವ ಸಂಪ್ರದಾಯ

Ma’nene;ಸ್ಮಶಾನದಲ್ಲಿದ್ದ ಶವ ಮನೆಗೆ ತಂದು ಸಂಭ್ರಮಿಸ್ತಾರೆ! ಇದು ವಿಚಿತ್ರ ಅಚ್ಚರಿ ಸಂಪ್ರದಾಯ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Duleep trophy

Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ? 

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ

ಸಿದ್ದರಾಮಯ್ಯ

Koppala; ತುಂಗಭದ್ರಾ ಜಲಾಶಯಕ್ಕಿಂದು ಬಾಗಿನ ಅರ್ಪಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ

US Tour; Indian community making a positive impact: PM Modi in US

US Tour; ಭಾರತೀಯ ಸಮುದಾಯವು ಸಕಾರಾತ್ಮಕ ಪರಿಣಾಮ ಬೀರುತ್ತಿದೆ: ಅಮೇರಿಕಾದಲ್ಲಿ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

Davanagere: Judicial custody of 14 accused in Ganesh procession stone pelting case

Davanagere: ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣದಲ್ಲಿ 14 ಆರೋಪಿಗಳಿಗೆ ನ್ಯಾಯಾಂಗ ಬಂಧನ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

ಕೋಡಿಹಳ್ಳಿ ಚಂದ್ರಶೇಖರ್

Davanagere: ಗ್ಯಾರಂಟಿ ಯೋಜನೆಗಳು ಮತ ಪಡೆಯಲೆಂದೇ ರೂಪಿಸಿರುವ ಕಾರ್ಯಕ್ರಮ: ಕೋಡಿಹಳ್ಳಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

India’s first bullet train to be made in Bangalore?

Bullet Train; ಬೆಂಗಳೂರಿನಲ್ಲೇ ತಯಾರಾಗಲಿದೆ ದೇಶದ ಮೊದಲ ಬುಲೆಟ್‌ ರೈಲು?

Ma’nene; ಪ್ರತಿ ವರ್ಷ ಶ*ವಗಳಿಗೆ ವಿಶಿಷ್ಟ ಗೌರವ!: ಅಚ್ಚರಿಗೊಳಪಡಿಸುವ ಸಂಪ್ರದಾಯ

Ma’nene;ಸ್ಮಶಾನದಲ್ಲಿದ್ದ ಶವ ಮನೆಗೆ ತಂದು ಸಂಭ್ರಮಿಸ್ತಾರೆ! ಇದು ವಿಚಿತ್ರ ಅಚ್ಚರಿ ಸಂಪ್ರದಾಯ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Duleep trophy

Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ? 

We are not against anyone…: PM Modi at Quad Summit

Quad Summit; ನಾವು ಯಾರ ವಿರುದ್ದವೂ ಅಲ್ಲ…: ಕ್ವಾಡ್ ಸಭೆಯಲ್ಲಿ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.