![Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ](https://www.udayavani.com/wp-content/uploads/2024/12/pushpa-2-5-415x260.jpg)
ನೀರಲ್ಲಿ ಮುಳುಗಿ ಎತ್ತುಗಳು ಸಾವು
ಕತ್ತಿಗೆ ಗ್ರಾಮದ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಎತ್ತುಗಳು.
Team Udayavani, Jan 28, 2021, 3:40 PM IST
![28-9](https://www.udayavani.com/wp-content/uploads/2021/01/28-9-620x372.gif)
ಹೊನ್ನಾಳಿ: ಕೆರೆಯಲ್ಲಿ ನೀರು ಕುಡಿಯಲು ತೆರಳಿದ ಸಂದರ್ಭದಲ್ಲಿ ಎರಡು ಎತ್ತುಗಳು ಜಲಸಮಾಧಿ ಯಾಗಿರುವ ದುರ್ಘಟನೆ ತಾಲೂಕಿನ ಕತ್ತಿಗೆ ಗ್ರಾಮದ ಅಗಸಿ ಬಾಗಿಲಿನ ಸಮೀಪದ ಕೆರೆಯಲ್ಲಿ ಬುಧವಾರ ಸಂಭವಿಸಿದೆ. ಕತ್ತಿಗೆ ಗ್ರಾಮದ ಎರೆಹಳ್ಳೇರ ಮಹಾಲಿಂಗಪ್ಪ ಎಂಬುವವರಿಗೆ ಎತ್ತುಗಳು ಸೇರಿದವಾಗಿವೆ. ಎತ್ತುಗಳ ಬೆಲೆ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ದಾರಿಯಲ್ಲಿ ಸಿಗುವ ಕೆರೆಯಲ್ಲಿ ನೀರು ಕುಡಿಯಲು ಎತ್ತುಗಳು ತೆರಳಿವೆ. ಬಿಸಿಲ ಬೇಗೆಯಿಂದ ಬಳಲಿದ್ದ ಎತ್ತುಗಳು ಕೆರೆಯ
ನೀರಿನಲ್ಲಿ ಈಜುತ್ತಾ, ಈಜುತ್ತಾ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡಿರುವ ಕೆರೆಯ ಮಧ್ಯಭಾಗಕ್ಕೆ ತೆರಳಿವೆ.
ಆ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ನೀರು ಸೇವಿಸಿ, ಈಜಲು ಆಗದಂಥ ಸ್ಥಿತಿ ತಲುಪಿವೆ. ಬಹಳ ಹೊತ್ತಾದರೂ ಎತ್ತುಗಳು ನೀರಿನಿಂದ ಹೊರಗೆ ಬಾರದಿದ್ದದನ್ನು ಗಮನಿಸಿದ ಗ್ರಾಮದ ಜನರು ಹಾಗೂ ಎತ್ತುಗಳ ಮಾಲೀಕ ಸಂರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಎತ್ತುಗಳು ಬದುಕುಳಿಯಲಿಲ್ಲ. ಹೊನ್ನಾಳಿ ಠಾಣೆ ಸಿಬ್ಬಂದಿ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಾದೇನಹಳ್ಳಿ ಪಶು ಚಿಕಿತ್ಸಾಲಯದ ಪ್ರಭಾರ ಪಶು ವೈದ್ಯ ಡಾ.ಹರೀಶ್ ಎತ್ತುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ : ಹೊಸಬರ ‘ಪ್ರೇಮನ್’ ಟೀಸರ್ ಔಟ್
ಟಾಪ್ ನ್ಯೂಸ್
![Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ](https://www.udayavani.com/wp-content/uploads/2024/12/pushpa-2-5-415x260.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![7-dvg](https://www.udayavani.com/wp-content/uploads/2024/12/7-dvg-150x90.jpg)
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
![byndoor](https://www.udayavani.com/wp-content/uploads/2024/12/byndoor-6-150x88.jpg)
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
![ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ](https://www.udayavani.com/wp-content/uploads/2024/12/davanagere-150x82.jpg)
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
![1—-kumr-renuka](https://www.udayavani.com/wp-content/uploads/2024/12/1-kumr-renuka-150x80.jpg)
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
![DVG-Duggamma](https://www.udayavani.com/wp-content/uploads/2024/12/DVG-Duggamma-150x90.jpg)
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.